Featured
ರೇವಣ್ಣ ಡಿಸಿಎಂ.. ಯಡಿಯೂರಪ್ಪ ಸಿಎಂ ಅಥವಾ ರೇವಣ್ಣ ಡಿಸಿಎಂ.. ಸಿದ್ದರಾಮಯ್ಯ ಸಿಎಂ..! ಹೇಗಿದೆ ಜಿಟಿಡಿ ಲೆಕ್ಕ..? HDK ಮಾಡಿದ್ದೆಲ್ಲಾ ತಪ್ಪೇ..!

ಮೈಸೂರು : ಮಾಜಿ ಸಚಿವ, ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡರು ಇವತ್ತು ಫುಲ್ ರಾಂಗ್ ಆಗಿದ್ರು. ಉಪ ಚುನಾವಣೆ ಘೋಷಣೆ ಆಗ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿ, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಅವರ ನಿರ್ಧಾರಗಳನ್ನ ತರಾಟೆಗೆ ತೆಗೆದುಕೊಂಡಿದ್ರು. 20-20 ಸರ್ಕಾರದಲ್ಲಿ ಈ ಹಿಂದೆ ಹೆಚ್.ಡಿ. ರೇವಣ್ಣ ಅವರನ್ನ ಡಿಸಿಎಂ ಮಾಡಿ, ಯಡಿಯೂರಪ್ಪ ಅವರಿಗೆ ಸಿಎಂ ಸ್ಥಾನ ಕೊಟ್ಟಿದ್ದಿದ್ರೆ ಹೇಗಿರ್ತಿತ್ತು. ಹೆಚ್.ಡಿ. ಕುಮಾರಸ್ವಾಮಿ ಹಾಗೆ ಮಾಡಲಿಲ್ಲ ಯಾಕೆ..? ಒಂದ್ವೇಳೆ ಹಾಗೇ ಮಾಡಿದ್ದಿದ್ದರೆ ಹೆಚ್.ಡಿ. ದೇವೇಗೌಡರಿಗೂ ಪ್ರೀತಿ ಆಗ್ತಿತ್ತು. ಬಿಎಸ್ವೈ ಕೂಡ ಸಮಾಧಾನ ಆಗ್ತಿದ್ರು. ಆದ್ರೆ, ಕುಮಾರಸ್ವಾಮಿ ಮಾಡಿದ್ದೇನು ಅಂತ ಪ್ರಶ್ನೆ ಮಾಡಿ, ಆಕ್ರೋಶ ಹೊರ ಹಾಕಿದ್ರು.
ಲೋಕಸಭಾ ಚುನಾವಣೆಯಲ್ಲಿ ಸೋತು ಮನೆಯಲ್ಲಿ ಕೂತ ಮೇಲಾದ್ರೂ ಬುದ್ಧಿ ಬರಬೇಕಿತ್ತು. ಕುಮಾರಸ್ವಾಮಿ ರಾಜೀನಾಮಿ ನೀಡಿ, ಕಾಂಗ್ರೆಸಿಗರನ್ನ ಸಿಎಂ ಮಾಡಬೇಕಿತ್ತು. ರೇವಣ್ಣ ಡಿಸಿಎಂ ಆಗಬಹುದಿತ್ತು. ಆಗ ಸರ್ಕಾರವೂ ಉಳಿಯುತ್ತಿತ್ತು. ಕಾರ್ಯಕರ್ತರು ಉಳಿಯುತ್ತಿದ್ದರು ಅಲ್ಲವೇ ಕುಮಾರಣ್ಣ ಎಂದು ಜಿಟಿಡಿ ನಯವಾಗಿಯೇ ಪ್ರಶ್ನೆ ಮಾಡಿದ್ರು.
ನೀವು ಸಿಎಂ ಆಗಿದ್ದಾಗ ಮಂತ್ರಿಗಳು ನಿಮ್ಮನ್ನ ಭೇಟಿ ಮಾಡೋಕೆ ಆ ಹೋಟೆಲ್ಗೆ ಬರಬೇಕಿತ್ತು. ನಿಮ್ಮ ಪಿಎ ಸತೀಶ್ ಫೋನ್ ಮಾಡೋವರೆಗೆ ಗೇಟ್ ಕಾಯಬೇಕಿತ್ತು. ಇದೆಲ್ಲವೂ ಮರೆತು ಹೋಯ್ತಾ ಕುಮಾರಣ್ಣ..? ಎಂದು ಜಿಡಿಟಿ ಪ್ರಶ್ನೆಗಳ ಸುರಿಮಳೆಯನ್ನೇ ಗೈದಿದ್ದಾರೆ.
ಇಷ್ಟೆಲ್ಲಾ ಆದ್ರೂ, ಕುಮಾರಸ್ವಾಮಿಗೆ ಬುದ್ಧಿ ಬಂದಿಲ್ವಾ ಅನ್ನೋ ರೀತಿ ಜಿಟಿಡಿ ಮಾತ್ನಾಡಿದ್ದು, ಬಹುತೇಕ ಜೆಡಿಎಸ್ ಪಕ್ಷ ಬಿಡೋದು ಗ್ಯಾರೆಂಟಿಯಾಗಿದೆ. ಮುಂದಿನ ದಿನಗಳಲ್ಲಿ ತಮ್ಮ ನಡೆ ಏನು ಅನ್ನೋದು ಸ್ಪಷ್ಟವಾಗಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?