ರೈಸಿಂಗ್ ಕನ್ನಡ :
ಹಾಸನ :
ಜಿಲ್ಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವಿನ ಜಟಾಪಟಿ ನಿಲ್ಲೋ ಲಕ್ಷಣಗಳೇ ಕಾಣ್ತಿಲ್ಲ. ಇದೀಗ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ಜೆಡಿಎಸ್ ವಿರುದ್ಧ ಗುಡುಗಿದ್ದಾರೆ. ನನ್ನ ವಿರುದ್ಧ ಜೆಡಿಎಸ್ ಮುಖಂಡರು ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ. ನನ್ನ ವಿರುದ್ಧ ದೂರು ನೀಡಲು ಕೆಲ ಸದಸ್ಯರ ಸಹಿ ಸಂಗ್ರಹಿಸಿದ್ದು, ಅವೆಲ್ಲೂ ನಖಲಿ ಸಹಿ ಅಂತ ಗುಡುಗಿದ್ದಾರೆ.
ಹಾಸನ ಬಾಣವಾರ ಜಿಲ್ಲಾ ಪಂಚಾಯತ್ ಸದಸ್ಯ ಅಶೋಕ್ ಬಿ ಎಸ್ ಎಂಬುವವರ ಹೆಸರಲ್ಲಿ ಜೆಡಿಎಸ್ ನಾಯಕರೇ ಫೋರ್ಜರಿ ಸಹಿ ಹಾಕಿದ್ದಾರೆ. ಯಾಕಂದ್ರೆ ಅಶೋಕ್ 2018ರಲ್ಲೇ ಹಾಸನ ಜಿಲ್ಲಾ ಪಂಚಾಯತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಅವರು ಇತ್ತೀಚೆಗೆ ನೀಡೀರೋ ದೂರಿನ ಪತ್ರಕ್ಕೆ ಸಹಿಹಾಕಲು ಹೇಗೆ ಸಾಧ್ಯ ಎಂಬ ಪ್ರೆಶ್ನೆ ಮಾಡಿದ್ದಾರೆ ಶ್ವೇತಾ ದೇವರಾಜ್.
ಆದ್ರೆ ಶ್ವೇತ ದೇವರಾಜ್ ಮಾಡಿರೋ ಮತ್ತೊದು ಬಲವಾದ ಆರೋಪ ಅಂದ್ರೆ ತಮ್ಮ ಕಾಂಗ್ರೆಸ್ ಜಿಲ್ಲಾ ಪಂಚಾಯತ್ ಸದಸ್ಯೆ ಶ್ವೇತಾ ಆನಂದ್ ಕಾಂಗ್ರೆಸ್ ಪಕ್ಷದವರು. ಆದ್ರೆ ತನ್ನ ವಿರುದ್ಧ ದೂರಿನ ಪತ್ರದಲ್ಲಿ ಅವರ ಸಹಿಯೂ ಇದೆ. ಈಗ ಅವ್ರನ್ನ ಕೇಳಿದ್ರೆ ನಾನು ಸಹಿ ಹಾಕಿಲ್ಲ ಎಂದಿದ್ದಾರೆ ಹೀಗಾಗಿ ಜೆಡಿಎಸ್ ನಾಯಕರೇ ನಖಲಿ ಸಹಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಈ ಬಗ್ಗೆ ಚನ್ನರಾಯಪಟ್ಟಣ ಬಾಗೂರು ಜಿಲ್ಲಾಪಂಚಾಯತ್ ಸದಸ್ಯೆ ಶ್ವೇತಾ ಆನಂದ್ ಪ್ರತಿಕ್ರಿಯೆ ನೀಡಿದ್ದು ನಾನು ಯಾವುದೇ ದೂರಿನ ಪತ್ರಕ್ಕೆ ಸಹಿ ಹಾಕಿಲ್ಲ. ಬದಲಾಗಿ ಎರಡು ವರ್ಷದ ಹಿಂದೆ ನನ್ನನ್ನೂ ಸೇರಿದಂತೆ 23 ಸದಸ್ಯರ ಬಳಿ ಖಾಲಿ ಹಾಳೆಗೆ ರೇವಣ್ಣ ಹಾಗೂ ಭವಾನಿ ರೇವಣ್ಣ ಸಹಿ ಹಾಕಿಸಿಕೊಂಡಿದ್ದರು ಎಂಬ ಸತ್ಯ ಬಾಯ್ ಬಿಟ್ಟಿದ್ದಾರೆ.. ಸದ್ಯ ಈ ವಿಚಾರ ಹಾಸನ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲೂ ಪ್ರಸ್ತಾಪ ಆಗಿದೆ. ಆದ್ರೆ ಇಂತಹ ಒಂದು ಗಂಭೀರ ವಿಚಾರ ಬಗ್ಗೆ ಮುಂದೆ ತನಿಖೆ ನೆಡೆಯಬೇಕಿದೆ.
ಈ ವಿಚಾರದಲ್ಲಿ ಜೆಡಿಎಸ್ ಮುಖಂಡರ ಕೈವಾಡವಿದೆಯೇ? ಅಥವಾ ಹಾಸನ ಜಿಲ್ಲಾ ಪಂಚಾಯತ್ ಅಧ್ಯೆಕ್ಷೆ ಶ್ವೇತಾ ದೇವರಾಜ್ ಹಾಗೂ ಹಾಸನ ಬಾಗೂರು ಜಿಲ್ಲಾ ಪಂಚಾಯತ್ ಸದಸ್ಯೆ ಶ್ವೇತಾ ಆನಂದ್ ನೀಡಿರೋ ಹೇಳಿಕೆ ಸತ್ಯವೇ ಎಂಬುದ ಪರಿಶೀಲನೆ ಆಗಬೇಕಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?