Uncategorized
ನಿಮ್ಮ ಮೂತ್ರದ ಬಣ್ಣ ಬದಲಾಗಿದೆಯೇ? ವೈದ್ಯರು ಏನು ಹೇಳುತ್ತಾರೆ ಗೊತ್ತಾ?

Health Tips : ನಿಮ್ಮ ಮೂತ್ರ ಪಾರದರ್ಶಕವಾಗಿದೆ ಎಂದರೆ ನಿಮ್ಮ ಆರೋಗ್ಯದಲ್ಲಿ ಯಾವುದೇ ಏರುಪೇರಾಗಿಲ್ಲ ಎಂದು ಅರ್ಥ. ಅದೇ ಒಂದು ವೇಳೆ ನಿಮ್ಮ ಮೂತ್ರ ಬೂದು, ಕೆಂಪು, ಹಸಿರು, ಕೆಲವೊಮ್ಮೆ ನೀಲಿ ಬಣ್ಣಕ್ಕೆ ತಿರುಗುತ್ತದೆ. ಈ ಕುರಿತು ವೈದ್ಯರು ಮಹತ್ವದ ಮಾಹಿತಿ ನೀಡಿದ್ದಾರೆ. ಈ ರೀತಿ ಮೂತ್ರ ಬಣ್ಣ ಬದಲಾಗಲು ನೀವು ಸೇವಿಸುವ ಔಷಧಿಗಳು, ಸೇವಿಸುವ ಆಹಾರ, ನಿಮ್ಮ ಆರೋಗ್ಯದಲ್ಲಿ ಬದಲಾಣೆ ಕುರಿತು ಮೂತ್ರದ ಮೂಲಕ ತಿಳಿದುಕೊಳ್ಳಬಹುದು.
ಕೆಂಪು ಅಥವಾ ನಸುಗೆಂಪು ನಿಮ್ಮ ಮೂತ್ರ ಕೆಂಪು ಅಥವಾ ನಸುಗೆಂಪು ಬಣ್ಣದಲ್ಲಿದೆ ಎಂದರೆ ನಿಮ್ಮ ಮೂತ್ರ ಕೋಶದಲ್ಲಿ ರಕ್ತಸ್ರಾವ ಆಗುತ್ತಿರುವ ಸೂಚನೆ ಎಂದು ವೈದ್ಯರು ಹೇಳಿದ್ದಾರೆ. ಮೂತ್ರಕೋಶದ ಉರಿಯೂತ, ಕಿಡ್ನಿಯಲ್ಲಿ ಕಲ್ಲು ಮತ್ತಿತ್ತರ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ರಕ್ತನಾಳಗಳ ಮೇಲೆ ತೀವ್ರ ಒತ್ತಡ ಬೀಳುತ್ತದೆ. ಇದರ ಪರಿಣಾಮವಾಗಿ ರಕ್ತ ನಾಳಗಳು ಒಡೆಯುವುದರಿಂದ ಮೂತ್ರ ರಕ್ತ ಸೇರಿಕೊಳ್ಳುವ ಪರಿಣಾಮ ಮೂತ್ರದ ಬಣ್ಣ ಕೆಂಪು ಅಥವಾ ನಸುಗೆಂಪಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಕಿತ್ತಳೆ ಉರಿಯೂತಕ್ಕೆ ತೆಗೆದುಕೊಳ್ಳುವ ಔಷಧಗಳಿಂದ ನಿಮ್ಮ ಮೂತ್ರದ ಬಣ್ಣ ಕಿತ್ತಳೆ ಬಣ್ಣಕ್ಕೆ ತಿರುಗಿರುತ್ತದೆ. ಏಝಡ್ಒ ಹೆಸರಿನಲ್ಲಿ ಮಾರಾಟವಾಗು ಪೆನಾಜೋಪೈರೈಡಿನ್ ಔಷಧಿಯಲ್ಲಿ ಕಿತ್ತಳೆ ಬಣ್ಣವನ್ನು ಬಳಸಲಾಗಿರುತ್ತದೆ. ಹೀಗಾಗಿ ಮೂತ್ರ ಕಿತ್ತಳೆ ಬಣ್ಣಕ್ಕೆ ತಿರುಗಿರುತ್ತದೆ. ಮಲಬದ್ಧತೆಗೆ ತೆಗೆದುಕೊಳ್ಳುವ ಔಷಧಿಗಳಿಂದಲೂ ಮೂತ್ರದ ಬಣ್ಣ ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಹಸಿರು ಅಥವಾ ನೀಲಿ ನೀವು ಓದುತ್ತಿರುವುದು ಅಕ್ಷರಶಃ ನಿಜ. ಇದಕ್ಕೆ ದೇಹ ಸಂಬಂಧಿತ ಕಾಯಿಲೆಗಳು ಕಾರಣವಲ್ಲ. ಬದಲಿಗೆ ಕಾಯಿಲೆಗಳಿಗೆ ತೆಗೆದುಕೊಳ್ಳುವ ಔಷಧಿಗಳಲ್ಲಿ ಬಳಸಲಾಗುವ ರಾಸಾಯನಿಕ ಬಣ್ಣಗಳು ಕಾರಣವಾಗುತ್ತವೆ ಎಂದು ವೈದ್ಯುರು ಮಾಹಿತಿ ನೀಡಿದ್ದಾರೆ. ಅಪರೂಪಕ್ಕೆ ಕಂಡು ಬರುವ ರಕ್ತ ಸಂಬಂಧಿತ ಕಾಯಿಲೆಗಳನ್ನು ಗುಣಪಡಿಸುವ ಔಷಧಿಗಳಿಗೆ ರಾಸಾಯನಿಕ ಬಣ್ಣಗಳನ್ನು ಸೇರಿಸುವುದರಿಂದ ಹಸಿರು ಅಥವಾ ನೀಲಿ ಮೂತ್ರ ಬರುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಬೂದು ಬಣ್ಣ ಹೆಚ್ಚಿನ ಪ್ರಮಾಣದಲ್ಲಿ ಸೊಪ್ಪು ಮತ್ತು ತರಕಾರಿಗಳನ್ನು ಸೇವಿಸಿದರೆ ಮೂತ್ರ ಬೂದು ಬಣ್ಣಕ್ಕೆ ತಿರುಗುತ್ತದೆ. ಇದರ ಜೊತೆಗೆ ಮಲೇರಿಯಾ, ಮಲಬದ್ಧತೆ, ಕೊಬ್ಬು ಕರಗುವಿಕೆ ಮತ್ತು ಫಿಟ್ಸ್ನಂತಹ ಕಾಯಿಲೆಗಳಿಗೆ ನೀಡುವ ಔಷಧಗಳನ್ನು ಸೇವಿಸುವುದರಿಂದಲೂ ಮೂತ್ರ ಕಡು ಬೂದು ಬಣ್ಣಕ್ಕೆ ತಿರುಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?














