ಮೈಸೂರು : ಕರ್ನಾಟಕ ಉಪಚುನಾವಣೆಯಿಂದ ತಾನು ದೂರ ಇರೋದಾಗಿ ಜೆಡಿಎಸ್ ಶಾಸಕ, ಮಾಜಿ ಸಚಿವ ಜಿ.ಟಿ. ದೇವೇಗೌಡ ಘೋಷಣೆ ಮಾಡಿದ್ದಾರೆ. ಈ ಮೂಲಕ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಜಿಟಿಡಿ ಶಾಕ್ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಮಾತ್ನಾಡಿದ ಜಿ.ಟಿ. ದೇವೇಗೌಡರು, ನನ್ನನ್ನ ಸಿಎಂ ಮಾಡಬೇಕಿತ್ತಾ ಅಂತ ಹೆಚ್ಡಿ ಕುಮಾರಸ್ವಾಮಿ ಕೇಳಿದ್ದಾರೆ. ಅವರಿಗೆ ಇಷ್ಟ ಬಂದ ಕಡೆ ಹೋಗಲಿ ಎಂದು ಹೆಚ್ಡಿ ದೇವೇಗೌಡರ ಹೇಳಿದ್ದಾರೆ. ಹೀಗಾಗಿ ನಾನು ಚುನಾವಣೆಯಿಂದ ದೂರ ಇರೋದಾಗಿ ಜಿಟಿಡಿ ಹೇಳಿದ್ದಾರೆ.
ಇದೇ ವೇಳೆ ಮಾತ್ನಾಡಿದ ಜಿಟಿಡಿ, ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಹಲವು ಗುರುತರ ಆರೋಪಗಳನ್ನ ಮಾಡಿ, ಆಕ್ರೋಶ ಹೊರಹಾಕಿದ್ರು. ನಾನು ಉನ್ನತ ಶಿಕ್ಷಣ ಸಚಿವನಾಗಿದ್ದೇ. ನನಗೆ ಈ ಖಾತೆ ಬೇಡ. ನಾನು ಓದಿಲ್ಲ ಅಂದರೂ ಕೇಳಲಿಲ್ಲ. ಖಾತೆ ಬದಲಾವಣೆ ಮಾಡಿ ಎಂದು ಗೋಗರೆದೆ, ಬದಲಾವಣೆ ಮಾಡಲಿಲ್ಲ. ಈಗ ನೋಡಿ, ಬಿಜೆಪಿಯವರು ಡಾ.ಅಶ್ವತ್ಥ ನಾರಾಯಣಗೆ ಶಿಕ್ಷಣ ಖಾತೆ ಕೊಟ್ಟಿದ್ದಾರೆ. ಅವರು ಡಾಕ್ಟರ್ ಓದಿದ್ದಾರೆ. ಹೀಗಾಗಿ, ಖಾತೆ ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರ ಹಾಕಿದ್ರು ಜಿಟಿಡಿ.
ಹುಣಸೂರಿನಲ್ಲಿ ಉಪಚುನಾವಣೆಗೆ ನಮ್ಮ ಕುಟುಂಬದಿಂದ ಯಾರು ಸ್ಪರ್ಧೆ ಮಾಡಲ್ಲ. ನನ್ನ ಮಗ ಹುಣಸೂರಿನಿಂದ ಸ್ಪರ್ಧಿಸಲ್ಲ ಎಂದು ಜಿಟಿಡಿ ಇದೇ ವೇಳೆ ಸ್ಪಷ್ಟ ಪಡಿಸಿದ್ರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?