ರೈಸಿಂಗ್ ಕನ್ನಡ
ನವದೆಹಲಿ : ಇಡೀ ದೇಶವಾಸಿಗಳು ಕಾಯ್ತಿದ್ದ ಆ ದಿನ ಬಂದೇ ಬಿಟ್ಟಿದೆ. ಬಹು ನಿರೀಕ್ಷಿತ ಕೊರೋನಾ ಲಸಿಕೆ ವಿತರಣೆಗೆ ಕೇಂದ್ರ ಸರ್ಕಾರ ಮುಹೂರ್ತ ಫಿಕ್ಸ್ ಮಾಡಿದೆ. ನಿರೀಕ್ಷೆಯಂತೆ ಸಂಕ್ರಾಂತಿಗೆ ಲಸಿಕೆ ಸುಗ್ಗಿ ತರ್ತಿದೆ. ಯೆಸ್, ಜನವರಿ 16ರಿಂದ ದೇಶದಲ್ಲಿ ಮೊದಲ ಹಂತದ ಲಸಿಕೆ ವಿತರಣೆ ಶುರುವಾಗಲಿದೆ ಅಂತ ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಇವತ್ತು ಉನ್ನತ ಅಧಿಕಾರಗಳ ಜೊತೆ ಸಭೆ ನಡೆಸಿ, ಅಂತಿಮ ಹಂತದ ಚರ್ಚೆ ನಡೆಸಿದ್ರು. ಈ ವೇಳೆ, ಎಲ್ಲಾ ರೀತಿಯ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದ ಪ್ರಧಾನಿ ಮೋದಿ, ಜನವರಿ 16ರಿಂದ ದೇಶದಲ್ಲಿ ಮೊದಲ ಹಂತದ ಲಸಿಕೆ ನಡೆಸೋದಾಗಿ ಘೋಷಿಸಿದ್ರು.
ಮೊದಲ ಹಂತದಲ್ಲಿ ಸುಮಾರು 30 ಕೋಟಿ ಲಸಿಕೆ ವಿತರಣೆ ಮಾಡೋದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಇದ್ರಲ್ಲಿ 3 ಕೋಟಿ ಕೊರೋನಾ ವಾರಿಯರ್ಸ್ ಇರಲಿದ್ದು, ಉಳಿದ 27 ಕೋಟಿ ಲಸಿಕೆ, 50 ವರ್ಷ ಮೇಲ್ಪಟ್ಟ ಜನರಿಗೆ ನೀಡೋದಾಗಿ ಕೇಂದ್ರ ಸರ್ಕಾರ ಹೇಳಿದೆ. ಆರೋಗ್ಯ ಕಾರ್ಯಕರ್ತರು, ವೈದ್ಯರು, ಪೊಲೀಸರು ಸೇರಿ ಫ್ರಂಟ್ಲೈನ್ ಆರೋಗ್ಯ ಸೇವಕರಿಗೆ ಉಚಿತವಾಗಿ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಮೊದಲ ಹಂತದಲ್ಲಿ ಸುಮಾರು 30 ಕೋಟಿ ಲಸಿಕೆ ವಿತರಣೆ ಮಾಡೋದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಇದ್ರಲ್ಲಿ 3 ಕೋಟಿ ಕೊರೋನಾ ವಾರಿಯರ್ಸ್ ಇರಲಿದ್ದು, ಉಳಿದ 27 ಕೋಟಿ ಲಸಿಕೆ, 50 ವರ್ಷ ಮೇಲ್ಪಟ್ಟ ಜನರಿಗೆ ನೀಡೋದಾಗಿ ಕೇಂದ್ರ ಸರ್ಕಾರ ಹೇಳಿದೆ. ಆರೋಗ್ಯ ಕಾರ್ಯಕರ್ತರು, ವೈದ್ಯರು, ಪೊಲೀಸರು ಸೇರಿ ಫ್ರಂಟ್ಲೈನ್ ಆರೋಗ್ಯ ಸೇವಕರಿಗೆ ಉಚಿತವಾಗಿ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕರ್ನಾಟಕದಲ್ಲೂ ಲಸಿಕೆ ವಿತರಣೆಗೆ ತಯಾರಿ ನಡೆಸಲಾಗಿದೆ. ರಾಜ್ಯದಲ್ಲಿ 325 ಲಸಿಕಾ ವಿತರಣೆ ಕೇಂದ್ರಗಳನ್ನ ರೆಡಿ ಮಾಡಲಾಗಿದೆ. ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಹೋಬಳಿ ಮಟ್ಟದಲ್ಲೂ ಲಸಿಕಾ ವಿತರಣೆ ಕೇಂದ್ರಗಳು ರೆಡಿಯಾಗಿವೆ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಲಸಿಕಾ ವಿತರಣೆ ಕೇಂದ್ರಗಳನ್ನ ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ಚಾಲನೆ ನೀಡಲಿದ್ದಾರೆ.
ಒಟ್ನಲ್ಲಿ, ಲಸಿಕೆ ಯಾವಾಗ ಬರುತ್ತೆ ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಈ ನಡುವೆ, ಬಿಜೆಪಿಯೇತರ ಕಾಂಗ್ರೆಸ್ ಸರ್ಕಾರ ಇರೋ ರಾಜ್ಯಗಳು, ಲಸಿಕೆ ವಿತರಣೆಗೆ ಹಿಂದೆ-ಮುಂದೆ ನೋಡ್ತಿವೆ. ಲಸಿಕೆ ಬಗ್ಗೆ ಹಲವು ಗೊಂದಲ ಹಾಗೂ ನೆಗೆಟಿವ್ ವರದಿ ಬರ್ತಿರೋದ್ರಿಂದ, ಮುಂದೇನು ಮಾಡ್ಬೇಕು ಅಂತ ಯೋಚನೆಯಲ್ಲಿವೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?