Connect with us

Featured

ನಿಮ್ಮ ಮನೆಯಲ್ಲಿ ಹೆಚ್ಚಿನ ಚಿನ್ನ ಇದೆಯಾ..? ಹಾಗಿದ್ರೆ ಮೋದಿ ಕೊಡ್ತಾರೆ ಶಾಕ್​..! ಏನಿದು ಚಿನ್ನ ಕ್ಷಮಾದಾನ.?

ನವದೆಹಲಿ : 2016ರ ನವೆಂಬರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್​ ಮಾಡಿ, ಎಲ್ಲರಿಗೂ ಶಾಕ್ ನೀಡಿದ್ರು. ಇದೀಗ ಮನೆಯಲ್ಲಿರೋ ಚಿನ್ನದ ಮೇಲೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಣ್ಣು ಬಿದ್ದಿದೆ. ಹೌದು, ನಿಮ್ಮ ಮನೆಯಲ್ಲಿ ಹೆಚ್ಚಿನ ಚಿನ್ನ ಇದ್ರೆ ನಿಮಗೆ ಖಂಡಿತ ಶಾಕ್​​ ಆಗೋದು ಕ್ಯಾರೆಂಟಿ. ಅಕ್ರಮ ಸಕ್ರಮ ಯೋಚನೆ ಎನ್ನುವಂತೆ, ಮೋದಿ ಸರ್ಕಾರ ಇದೀಗ ಚಿನ್ನ ಕ್ಷಮಾದಾನ ಯೋಚನೆ ಜಾರಿಗೆ ಮುಂದಾಗಿದೆ..?

ಏನಿದು ಚಿನ್ನ ಕ್ಷಮಾದಾನ..?

ಕಪ್ಪು ಹಣ ತಡೆಯುವ ಉದ್ದೇಶದಿಂದ ಚಿನ್ನ ಕ್ಷಮಾದಾನ ಎಂಬ ಮಹತ್ವದ ಯೋಚನೆಯನ್ನ ಶೀಘ್ರ ಜಾರಿಗೆ ತರಲು ಮೋದಿ ಮುಂದಾಗಿದ್ದಾರೆ. ಇದು ಅಪಾರ ಹಾಗೂ ಅಘೋಷಿತ ಚಿನ್ನ ಇಟ್ಟುಕೊಂಡ ಕಾಳಧನಿಕರಿಗೆ ಸಂಕಷ್ಟವನ್ನ ತಂದೊಡಲಿದೆ. ಇದರ ಪ್ರಕಾರ ನಿಮ್ಮ ಮನೆಯಲ್ಲಿರೋ ಚಿನ್ನದ ಲೆಕ್ಕ ನೀಡಬೇಕಿದೆ. ಚಿನ್ನಕ್ಕೆ ಸೂಕ್ತ ದಾಖಲಾತಿಗಳನ್ನ ಒದಗಿಸಬೇಕಿದೆ. ಒಂದು ವೇಳೆ ದಾಖಲಾಗಿ ಇಲ್ಲದೇ ಇದ್ರೆ, ಅದಕ್ಕೆ ಸಕ್ರಮವಾಗಿ ದಾಖಲಾತಿಗಳನ್ನ ಪಡೆದುಕೊಳ್ಳಬೇಕಿದೆ. ಇದೇ ಚಿನ್ನ ಕ್ಷಮಾದಾನ ಯೋಚನೆ.

ಈ ಕುರಿತು ಕೇಂದ್ರ ಹಣಕಾಸು ಸಚಿವಾಲಯ ಹಾಗೂ ಕಂದಾಯ ಸಚಿವಾಲಯ ಎರಡೂ ಕೂಡ ಜಂಟಿ ಪ್ರಸ್ತಾವನೆಯನ್ನ ಕೇಂದ್ರ ಸಚಿವ ಸಂಪುಟ ಸಮಿತಿಗೆ ಕಳುಹಿಸಿವೆ. ಸಂಪುಟ ಸಭೆಯಲ್ಲಿ ಈ ಕುರಿತು ಶೀಘ್ರವೇ ಚರ್ಚೆ ನಡೆಯಲಿದ್ದು, ಬಳಿಕ ಅನುಮೋದನ ದೊರೆಯುವ ಸಾಧ್ಯತೆ ಇದೆ. ಒಂದು ವೇಳೆ ಅನುಮೋದನ ದೊರೆತ್ರೆ, ಚಿನ್ನವನ್ನು ಅಕ್ರಮವಾಗಿ ಇಟ್ಟುಕೊಂಡಿರೋವ್ರಿಗೆ ಸಂಷಕ್ಟ ಗ್ಯಾರೆಂಟಿ.

Advertisement

ಹಾಗಿದ್ರೆ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು..?

ಯೆಸ್​, ಬಹುತೇಕರಿಗೆ ಇದು ಕಾಡುವ ಪ್ರಶ್ನೆ. ಸಾಮಾನ್ಯವಾಗಿ ಎಲ್ಲಾ ಚಿನ್ನಕ್ಕೂ ದಾಖಲೆಗಳು ಇರೋದಿಲ್ಲ. ಒಂದು ವೇಳೆ ನಿಮ್ಮ ಮನೆ ಮೇಲೆ ಐಟಿ ಅಥವಾ ಇನ್ಯಾವುದೇ ದಾಳಿಗಳು ನಡೆದಾಗ ಎಷ್ಟು ಚಿನ್ನ ಇರಬೇಕು..? ಎಷ್ಟು ಚಿನ್ನ ಇದ್ದರೆ ಅಕ್ರಮ ಅಲ್ಲ ಅನ್ನೋದಕ್ಕೆ ಇಂತಿಷ್ಟೇ ಅನ್ನೋ ಸೂಕ್ತ ನಿಯಮಗಳು ಕೂಡ ಇಲ್ಲ. ಆದ್ರೆ, ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ಹಾಗೂ ದಾಖಲೆಗಳನ್ನ ಒದಗಿಸಬೇಕು.

ಇಷ್ಟಾದ್ರೂ, ಐಟಿ ಹಾಗೂ ಇತರೆ ಸಂಸ್ಥೆಗಳು ಕೆಲವು ಸ್ವಯಂ ಮಾನದಂಡಗಳನ್ನ ಹೊಂದಿವೆ. ಅದೇನಪ್ಪ ಅಂದ್ರೆ, ವಿವಾಹಿತ ಮಹಿಳೆ 500 ಗ್ರಾಂ ಚಿನ್ನ ಹಾಗೂ ಅವಿವಾಹಿತ ಮಹಿಳೆ 250 ಗ್ರಾಮ್​ ಚಿನ್ನವನ್ನ ಇಟ್ಟುಕೊಳ್ಳಬಹುದು. ಅದೇ ರೀತಿಯಾಗಿ ಪುರುಷ ಕೂಡ 100 ಗ್ರಾಮ್​ ಚಿನ್ನವನ್ನ ಇಟ್ಟುಕೊಳ್ಳಬಹುದು. ಇದಕ್ಕೆ ಯಾವುದೇ ರೀತಿಯ ದಾಖಲೆಗಳನ್ನ ಅಧಿಕಾರಿಗಳು ಕೇಳುವುದಿಲ್ಲ ಎನ್ನಲಾಗಿದೆ. ಜೊತೆಗೆ ವಂಶಪರಂಪರೆಯಾಗಿ ಬಂದಿರೋ ಚಿನ್ನಕ್ಕೂ ದಾಖಲೆ ಕೇಳುವುದಿಲ್ಲ. ಅದನ್ನ ಅಧಿಕಾರಿಗಳು ವಶಕ್ಕೆ ಪಡೆದುಕೊಳ್ಳುವುದಿಲ್ಲ.

ಸೋ, ಇನ್ಯಾಕೆ ತಡ, ನಿಮ್ಮ ಮನೆಯಲ್ಲಿ ಹೆಚ್ಚಿನ ಚಿನ್ನ ಇದ್ರೆ, ಈಗಲೇ ದಾಖಲೆಗಳನ್ನ ರೆಡಿ ಮಾಡಿಕೊಳ್ಳಿ. ಇಲ್ಲದೇ ಇದ್ರೆ, ಐಟಿಗೋ ಅಥವಾ ಮತ್ಯಾವುದೋ ಸಂಸ್ಥೆಗೋ ನಿಮ್ಮ ಚಿನ್ನ ಪಾಲಾಗುತ್ತೆ ಹುಷಾರ್​..

Advertisement
ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ