ನವದೆಹಲಿ : 2016ರ ನವೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್ ಮಾಡಿ, ಎಲ್ಲರಿಗೂ ಶಾಕ್ ನೀಡಿದ್ರು. ಇದೀಗ ಮನೆಯಲ್ಲಿರೋ ಚಿನ್ನದ ಮೇಲೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಣ್ಣು ಬಿದ್ದಿದೆ. ಹೌದು, ನಿಮ್ಮ ಮನೆಯಲ್ಲಿ ಹೆಚ್ಚಿನ ಚಿನ್ನ ಇದ್ರೆ ನಿಮಗೆ ಖಂಡಿತ ಶಾಕ್ ಆಗೋದು ಕ್ಯಾರೆಂಟಿ. ಅಕ್ರಮ ಸಕ್ರಮ ಯೋಚನೆ ಎನ್ನುವಂತೆ, ಮೋದಿ ಸರ್ಕಾರ ಇದೀಗ ಚಿನ್ನ ಕ್ಷಮಾದಾನ ಯೋಚನೆ ಜಾರಿಗೆ ಮುಂದಾಗಿದೆ..?
ಏನಿದು ಚಿನ್ನ ಕ್ಷಮಾದಾನ..?
ಕಪ್ಪು ಹಣ ತಡೆಯುವ ಉದ್ದೇಶದಿಂದ ಚಿನ್ನ ಕ್ಷಮಾದಾನ ಎಂಬ ಮಹತ್ವದ ಯೋಚನೆಯನ್ನ ಶೀಘ್ರ ಜಾರಿಗೆ ತರಲು ಮೋದಿ ಮುಂದಾಗಿದ್ದಾರೆ. ಇದು ಅಪಾರ ಹಾಗೂ ಅಘೋಷಿತ ಚಿನ್ನ ಇಟ್ಟುಕೊಂಡ ಕಾಳಧನಿಕರಿಗೆ ಸಂಕಷ್ಟವನ್ನ ತಂದೊಡಲಿದೆ. ಇದರ ಪ್ರಕಾರ ನಿಮ್ಮ ಮನೆಯಲ್ಲಿರೋ ಚಿನ್ನದ ಲೆಕ್ಕ ನೀಡಬೇಕಿದೆ. ಚಿನ್ನಕ್ಕೆ ಸೂಕ್ತ ದಾಖಲಾತಿಗಳನ್ನ ಒದಗಿಸಬೇಕಿದೆ. ಒಂದು ವೇಳೆ ದಾಖಲಾಗಿ ಇಲ್ಲದೇ ಇದ್ರೆ, ಅದಕ್ಕೆ ಸಕ್ರಮವಾಗಿ ದಾಖಲಾತಿಗಳನ್ನ ಪಡೆದುಕೊಳ್ಳಬೇಕಿದೆ. ಇದೇ ಚಿನ್ನ ಕ್ಷಮಾದಾನ ಯೋಚನೆ.
ಈ ಕುರಿತು ಕೇಂದ್ರ ಹಣಕಾಸು ಸಚಿವಾಲಯ ಹಾಗೂ ಕಂದಾಯ ಸಚಿವಾಲಯ ಎರಡೂ ಕೂಡ ಜಂಟಿ ಪ್ರಸ್ತಾವನೆಯನ್ನ ಕೇಂದ್ರ ಸಚಿವ ಸಂಪುಟ ಸಮಿತಿಗೆ ಕಳುಹಿಸಿವೆ. ಸಂಪುಟ ಸಭೆಯಲ್ಲಿ ಈ ಕುರಿತು ಶೀಘ್ರವೇ ಚರ್ಚೆ ನಡೆಯಲಿದ್ದು, ಬಳಿಕ ಅನುಮೋದನ ದೊರೆಯುವ ಸಾಧ್ಯತೆ ಇದೆ. ಒಂದು ವೇಳೆ ಅನುಮೋದನ ದೊರೆತ್ರೆ, ಚಿನ್ನವನ್ನು ಅಕ್ರಮವಾಗಿ ಇಟ್ಟುಕೊಂಡಿರೋವ್ರಿಗೆ ಸಂಷಕ್ಟ ಗ್ಯಾರೆಂಟಿ.
ಹಾಗಿದ್ರೆ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು..?
ಯೆಸ್, ಬಹುತೇಕರಿಗೆ ಇದು ಕಾಡುವ ಪ್ರಶ್ನೆ. ಸಾಮಾನ್ಯವಾಗಿ ಎಲ್ಲಾ ಚಿನ್ನಕ್ಕೂ ದಾಖಲೆಗಳು ಇರೋದಿಲ್ಲ. ಒಂದು ವೇಳೆ ನಿಮ್ಮ ಮನೆ ಮೇಲೆ ಐಟಿ ಅಥವಾ ಇನ್ಯಾವುದೇ ದಾಳಿಗಳು ನಡೆದಾಗ ಎಷ್ಟು ಚಿನ್ನ ಇರಬೇಕು..? ಎಷ್ಟು ಚಿನ್ನ ಇದ್ದರೆ ಅಕ್ರಮ ಅಲ್ಲ ಅನ್ನೋದಕ್ಕೆ ಇಂತಿಷ್ಟೇ ಅನ್ನೋ ಸೂಕ್ತ ನಿಯಮಗಳು ಕೂಡ ಇಲ್ಲ. ಆದ್ರೆ, ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ಹಾಗೂ ದಾಖಲೆಗಳನ್ನ ಒದಗಿಸಬೇಕು.
ಇಷ್ಟಾದ್ರೂ, ಐಟಿ ಹಾಗೂ ಇತರೆ ಸಂಸ್ಥೆಗಳು ಕೆಲವು ಸ್ವಯಂ ಮಾನದಂಡಗಳನ್ನ ಹೊಂದಿವೆ. ಅದೇನಪ್ಪ ಅಂದ್ರೆ, ವಿವಾಹಿತ ಮಹಿಳೆ 500 ಗ್ರಾಂ ಚಿನ್ನ ಹಾಗೂ ಅವಿವಾಹಿತ ಮಹಿಳೆ 250 ಗ್ರಾಮ್ ಚಿನ್ನವನ್ನ ಇಟ್ಟುಕೊಳ್ಳಬಹುದು. ಅದೇ ರೀತಿಯಾಗಿ ಪುರುಷ ಕೂಡ 100 ಗ್ರಾಮ್ ಚಿನ್ನವನ್ನ ಇಟ್ಟುಕೊಳ್ಳಬಹುದು. ಇದಕ್ಕೆ ಯಾವುದೇ ರೀತಿಯ ದಾಖಲೆಗಳನ್ನ ಅಧಿಕಾರಿಗಳು ಕೇಳುವುದಿಲ್ಲ ಎನ್ನಲಾಗಿದೆ. ಜೊತೆಗೆ ವಂಶಪರಂಪರೆಯಾಗಿ ಬಂದಿರೋ ಚಿನ್ನಕ್ಕೂ ದಾಖಲೆ ಕೇಳುವುದಿಲ್ಲ. ಅದನ್ನ ಅಧಿಕಾರಿಗಳು ವಶಕ್ಕೆ ಪಡೆದುಕೊಳ್ಳುವುದಿಲ್ಲ.
ಸೋ, ಇನ್ಯಾಕೆ ತಡ, ನಿಮ್ಮ ಮನೆಯಲ್ಲಿ ಹೆಚ್ಚಿನ ಚಿನ್ನ ಇದ್ರೆ, ಈಗಲೇ ದಾಖಲೆಗಳನ್ನ ರೆಡಿ ಮಾಡಿಕೊಳ್ಳಿ. ಇಲ್ಲದೇ ಇದ್ರೆ, ಐಟಿಗೋ ಅಥವಾ ಮತ್ಯಾವುದೋ ಸಂಸ್ಥೆಗೋ ನಿಮ್ಮ ಚಿನ್ನ ಪಾಲಾಗುತ್ತೆ ಹುಷಾರ್..
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?