ರೈಸಿಂಗ್ ಕನ್ನಡ : ಜಾಗತಿಕ ತಾಪಮಾನ ಏರಿಕೆ ಬಿಸಿ, ಇದೀಗ ಕರ್ನಾಟಕ ಸೇರಿದಂತೆ ಭಾರತಕ್ಕೂ ತಟ್ಟುವ ಭೀತಿ ಎದುರಾಗಿದೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಸಮುದ್ರದ ಮಟ್ಟ ಏರಿಕೆ ಆಗ್ತಿದೆ. ಇದರಿಂದಾಗಿ 2050ರ ವೇಳೆಗೆ ಭಾರತದ ಕರಾವಳಿ ತೀರಿಗೆ ಕಂಟಕ ಕಾದಿದೆ ಅನ್ನೋ ಶಾಕಿಂಗ್ ಸತ್ಯ ಬಯಲಾಗಿದೆ. ಅದರಲ್ಲೂ ಮುಂಬೈ, ಕೋಲ್ಕತ್ತಾ, ಒಡಿಶಾ, ಬಂಗಾಳದ ಕರಾವಳಿ ಪ್ರದೇಶ ಬಹುತೇಕ ಮುಳುಗಡೆ ಆಗಲಿದೆ ಎಂದು ಅಧ್ಯಯನ ಎಚ್ಚರಿಸಿದೆ.
ವಿಶೇಷ ಅಂದ್ರೆ, ಇದರಲ್ಲಿ ನಮ್ಮ ಮಂಗಳೂರುಗೂ ಭೀತಿ ಇದ್ದು, ಮುಂಬೈ ಹಾಗೂ ಕೋಲ್ಕತ್ತಾಗೆ ಇರುವಷ್ಟು ಆತಂಕ ಇಲ್ಲ. ಆದ್ರೆ, ಮುಂದಿನ ದಿನಗಳಲ್ಲಿ ಮಂಗಳೂರಿಗೂ ಅಪಾಯ, ಗಂಡಾಂತರ ಕಾದಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಭಾರತವಷ್ಟೇ ಅಲ್ಲದೆ, ಏರುತ್ತಿರುವ ಸಮುದ್ರ ಮಟ್ಟವು ವಿಶ್ವವ್ಯಾಪಿ ಪರಿಣಾಮ ಬೀರಲಿದೆ. ಈ ಶತಮಾನದ ಅಂತ್ಯಕ್ಕೆ 2 ಸೆಂಟಿ ಮೀಟಿರ್ ಹಾಗೂ 20ನೇ ಶತಮಾನದಲ್ಲಿ 11 ರಿಂದ 16 ಸೆಂಟಿ ಮೀಟರ್ನಷ್ಟು ಸಮುದ್ರದ ನೀರು ಏರಿಕೆಯಾಗಲಿದೆ. 2050ಕ್ಕೆ ವಿಶ್ವದ 34 ಕೋಟಿ ಜನ ಹಾಗೂ 2100ಕ್ಕೆ 63 ಕೋಟಿ ಜನ ಸಮುದ್ರದ ಏರಿಕೆಗೆ ತತ್ತರಿಸಲಿದ್ದಾರೆ. ಅಮೆರಿಕದ ನ್ಯೂ ಜೆರ್ಸಿಯ ಕ್ಲೈಮೇಟ್ ಸೆಂಟ್ರಲ್ ಎಂಬ ಸಂಸ್ಥೆ ಈ ಕುರಿತು ಅಧ್ಯಯನ ವರದಿ ಸಿದ್ಧಪಡಿಸಿದೆ.
ಅದರಲ್ಲೂ ಚೀನಾದ 9 ಕೋಟಿ, ಭಾರತದ 3.6 ಕೋಟಿ, ಬಾಂಗ್ಲಾದೇಶದ 4 ಕೋಟಿ, ವಿಯೇಟ್ನಾಂನ 3 ಕೋಟಿ, ಇಂಡೋನೇಷ್ಯಾದ 2.3 ಕೋಟಿ ಸೇರಿದಂತೆ ಒಟ್ಟು 2050ಕ್ಕೆ 34 ಕೋಟಿ ಜನ ಮುಳುಗುವ ಭೀತಿ ಇದೆ ಎನ್ನಲಾಗಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?