ಆರೋಗ್ಯ
ಪರೀಕ್ಷೆ ಸಮಯದಲ್ಲಿ ಮಕ್ಕಳ ಮೆದುಳು ಚುರುಕಾಗಲು ಈ ಆಹಾರ ಕೊಡಿ

Health tips : ಇದು ಪರೀಕ್ಷಾ ಸಮಯ. ಈ ವೇಳೆ ಮಕ್ಕಳ ಮೇಲೆ ಅಪಾರ ಒತ್ತಡ ಇರುತ್ತದೆ. ಪ್ರತಿಯೊಂದು ವಿಷಯದ ಪರೀಕ್ಷೆಗೆ ಹಾಜರಾಗಲು ಮಕ್ಕಳು ಸಾಕಷ್ಟು ಶ್ರಮ ವಹಿಸುತ್ತಾರೆ. ಇದರಿಂದ ಮೆದುಳಿನ ಮೇಲೆ ಅಸಾಧ್ಯವಾದ ಒತ್ತಡ ಬೀಳುವುದರಿಂದ ನಿದ್ರೆಯ ಕೊರತೆ ಅನುಭವಿಸುತ್ತಾರೆ.
ನಿದ್ರೆಯ ಕೊರತೆಯಿಂದ ಹಲವಾರು ಸಮಸ್ಯೆಗಳು ಉದ್ಭವಿಸುತ್ತವೆ. ಇವೆಲ್ಲವನ್ನು ತಡೆಯುವ ಕೆಲಸವನ್ನು ಮೆದುಳು ಮಾಡುತ್ತದೆ. ಇಂತಾ ಮೆದುಳು ಚುರುಕಾಗಲು ಮಕ್ಕಳಿಗೆ ನೀಡುವ ದೈನಂದಿನ ಆಹಾರದಲ್ಲಿ ಈ ಹಣ್ಣು-ತರಕಾರಿಗಳನ್ನು ಸೇರಿಸಿದರೆ ಮಕ್ಕಳ ಮೆದುಳಿನ ಮೇಲೆ ಬೀಳುವ ಒತ್ತಡವನ್ನು ನಿಭಾಯಿಸಲು ನೆರವಾಗುತ್ತವೆ.
ಬಾಳೆಹಣ್ಣು : ಬಾಳೆಹಣ್ಣಿನಲ್ಲಿ ಪೊಟಾಷಿಯಂ ಅಂಶ ಹೆಚ್ಚಾಗಿದ್ದು ಮೆದುಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ಸಹಕಾರಿಯಾಗುವ ಜೊತೆಗೆ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ಹಸಿರು ಸೊಪ್ಪು : ಹಸಿರು ಸೊಪ್ಪಿನಲ್ಲಿ ವಿಟಮಿನ್ ಎ, ವಿಟಮಿನ್ ಕೆ ಹೆಚ್ಚಾಗಿದ್ದು, ಮೆದುಳಿನ ಸಮರ್ಪಕ ಕಾರ್ಯನಿರ್ವಹಣೆಗೆ ಈ ವಿಟಮಿನ್ ಗಳ ಅವಶ್ಯಕತೆ ಹೆಚ್ಚಾಗಿರುತ್ತದೆ. ಮೆದುಳಿನ ಜೀವಕೋಶಗಳ ಉತ್ಪತ್ತಿಗೆ ವಿಟಮಿನ್ ಎ ಅವಶ್ಯಕವಾಗಿದ್ದು, ವಿಟಮಿನ್ ಕೆ ಬುದ್ಧಿಶಕ್ತಿ ಹೆಚ್ಚಿಸಲು ನೆರವಾಗುತ್ತದೆ.
ಕಿತ್ತಳೆ ಹಣ್ಣು : ಕಿತ್ತಳೆ ಹಣ್ಣಿನಲ್ಲಿ ಅಪಾರ ಪ್ರಮಾಣದ ವಿಟಮಿನ್ ಸಿ ಇರುತ್ತದೆ. ವಿಟಮಿನ್ ಸಿ ಮೆದುಳಿನ ಸಂವಹಕ್ರಿಯೆಗೆ ಕಾರಣವಾಗು ಸೆರೊಟೊನಿನ್ ಮತ್ತು ಡೊಪಮೈನ್ ಉತ್ಪತ್ತಿಗೆ ನೆರವಾಗುತ್ತದೆ.
ಅವಕಾಡೋ : ಅವಕಾಡೋದಲ್ಲಿ ಮೆದುಳಿನ ಸಮರ್ಪಕ ಕಾರ್ಯ ನಿರ್ವಹಣೆ ಮತ್ತು ಮೆದುಳಿನ ಅಭಿವೃದ್ಧಿಗೆ ಬೇಕಾದ ಕೊಬ್ಬಿನಾಂಶ ಹೆಚ್ಚಾಗಿರುತ್ತದೆ.
ಬ್ಲೂಬೆರಿಸ್ : ಬ್ಲೂಬೆರಿಽಯನ್ನು ಮಕ್ಕಳ ಮೆದುಳಿನ ಕಾರ್ಯ ನಿರ್ವಹಣೆ ಹೆಚ್ಚಿಸುವ ಅತ್ಯುತ್ತಮ ಆಹಾರ ಎಂದು ಕರೆಯಲಾಗುತ್ತದೆ. ಏಕೆಂದರೆ ಬ್ಲೂಬೆರಿಽಯಲ್ಲಿ ಹೆಚ್ಚಿನ ಪ್ರತ್ಯಾಮ್ಲೀಯಗಳು ಇರುತ್ತವೆ. ವಿಶೇಷವಾಗಿ ಫ್ಲೇವನೋಯ್ಡ್ಸ್ ಎಂದು ಕರೆಸಿಕೊಳ್ಳುವ ಪ್ರತ್ಯಾಮ್ಲೀಯಗಳು ಹೆಚ್ಚಾಗಿರುತ್ತವೆ.
ಗಡ್ಡೆಕೋಸು : ಗಡ್ಡೆಕೋಸಿನಲ್ಲಿ ಅನೇಕ ರೀತಿಯ ಪೋಷಕಾಂಶಗಳು ಇರುತ್ತವೆ. ನೆನಪಿನ ಶಕ್ತಿ ಮತ್ತು ಕಲಿಕಾ ಶಕ್ತಿಗೆ ನೆರವಾಗುವ ಮೆದುಳಿನ ಸಂವಹನ ಗ್ರಂಥಿಗಳ ಬಿಡುಗಡೆಯಾಗುವ ಅಸಿಟೈಲ್ ಕೊಲಿನ್ ಬಿಡುಗಡೆಗೆ ನೆರವಾಗುವ ಕೊಲಿನ್ ಅಂಶ ಹೆಚ್ಚಾಗಿರುತ್ತದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?