Featured
ನನ್ನ ನಿವೃತ್ತಿಗೆ ವಿವಿಎಸ್ ಲಕ್ಷ್ಮಣ್ ಕಾರಣ- 12 ವರ್ಷಗಳ ನಂತರ ಸತ್ಯ ಬಿಚ್ಚಿಟ್ಟ ಗಿಲ್ಕ್ರಿಷ್ಟ್..!

ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ವಿಶ್ವದ ಶ್ರೇಷ್ಠ ವಿಕೆಟ್ ಕೀಪರ್ಗಳ ಪೈಕಿ ಆಸ್ಟ್ರೇಲಿಯದ ಮಾಜಿ ವಿಕೆಟ್ ಕೀಪರ್ ಆ್ಯಡಮ್ ಗಿಲ್ಕ್ರಿಷ್ಟ್ಗೆ ಒಂದು ಸ್ಥಾನ ಇದ್ದೇ ಇದೆ. ಬ್ಯಾಟಿಂಗ್ ಇರಲಿ, ಕೀಪಿಂಗ್ ಇರಲಿ ಗಿಲ್ಲಿ ಫರ್ಫೆಕ್ಟ್ ಮ್ಯಾನ್. ಆದ್ರೆ 2008ರಲ್ಲಿ ಆ್ಯಡಮ್ ಗಿಲ್ಕ್ರಿಷ್ಟ್ ಇದ್ದಕ್ಕಿದ್ದಂತೆ ಕ್ರಿಕೆಟ್ಗೆ ವಿದಾಯ ಘೋಷಿಸಿದ್ರು. ಅದ್ಭುತ ಫಾರ್ಮ್ನಲ್ಲಿದ್ದ ಗಿಲ್ಕ್ರಿಷ್ಟ್ ಯಾಕೆ ಕ್ರಿಕೆಟ್ನಿಂದ ದೂರವಾದ್ರೂ ಅನ್ನುವುದರಕ್ಕೆ ಉತ್ತರ ಸಿಕ್ಕಿರಲಿಲ್ಲ. ಆದ್ರೆ ಬರೋಬ್ಬರಿ 12 ವರ್ಷಗಳ ನಂತರ ತಮ್ಮ ವಿದಾಯಕ್ಕೆ ಕಾರಣ ಏನು ಅನ್ನೋದನ್ನ ಬಹಿರಂಗ ಪಡಿಸಿದ್ದಾರೆ. ಗಿಲ್ ವಿದಾಯಕ್ಕೆ ಟೀಮ್ ಇಂಡಿಯಾದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಕಾರಣವಂತೆ..!
ಯಸ್. 2008ರಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿತ್ತು. ಈ ವೇಳೆ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಗಿಲ್ಕ್ರಿಷ್ಟ್ ವಿವಿಎಸ್ ಲಕ್ಷ್ಮಣ್ ನೀಡಿದ ಕ್ಯಾಚ್ ಕೈ ಚೆಲ್ಲಿದ್ದರು. ಇದು ಗಿಲ್ಲಿಯನ್ನು ಕ್ರಿಕೆಟ್ನಿಂದ ದೂರವಾಗುವ ನಿರ್ಧಾರ ಮಾಡುವಂತೆ ಪ್ರೇರೇಪಿಸಿತು. ಟಿವಿ ನಿರೂಪಕಿ ಮಡೋನಾ ಟಿಕ್ಸೀರಾ ಅವರ ‘ಲೈವ್ ಕನೆಕ್ಟ್’ ಗಿಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ಲಕ್ಷ್ಮಣ್ ಮತ್ತು ಹರ್ಭಜನ್ ಸಿಂಗ್ ಆಸ್ಟ್ರೇಲಿಯನ್ನರಿಗೆ ಕಂಟಕವಾಗಿದ್ದರು. ಲಕ್ಷ್ಮಣ್ ದೊಡ್ಡ ಇನ್ನಿಂಗ್ಸ್ಗಳಿಂದ ಕಾಂಗರುಗಳನ್ನು ಕಂಗೆಡಿಸಿದರೆ. ದೂಸ್ರಾ ಸ್ಪೆಷಲಿಸ್ಟ್ ಹರ್ಭಜನ್ ಬೌಲಿಂಗ್ನಲ್ಲಿ ಆಸ್ಸೀಗಳನ್ನು ಕಟ್ಟಿಹಾಕುತ್ತಿದ್ದರು ಎಂದು ಗಿಲ್ಕ್ರಿಷ್ಟ್ ತಿಳಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?