ರೈಸಿಂಗ್ ಕನ್ನಡ :
ಸ್ಪೋರ್ಟ್ಸ್ ಡೆಸ್ಕ್ :
ಕ್ರಿಕೆಟ್ನಲ್ಲಿ ಒಂದಿಲ್ಲೊಂದು ಬದಲಾವಣೆಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸದಾ ಹಾತೊರೆಯುತ್ತಲೇ ಇರ್ತಾರೆ. ಇದೀಗ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯಗಳ ಬಗ್ಗೆ ದಾದಾ ಮಾತನಾಡಿದ್ದಾರೆ. ಹೊನಲು ಬೆಳಕಿನ ಟೆಸ್ಟ್ನಲ್ಲಿ ಸಾಕಷ್ಟು ಬದಲಾವಣೆಗಳು ಆಗಬೇಕು ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಭಾರತ-ಬಾಂಗ್ಲಾ ನಡುವಿನ ನಡೆದ ಮೊದಲ ಹೊನಲು-ಬೆಳಕಿನ ಟೆಸ್ಟ್ ಪಂದ್ಯದ ಮೂಲಕ ಇದು ಸಾಕಾರಗೊಂಡಿದೆ ಎಂದಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲೂ ಹೆಚ್ಚಿನ ಅಭಿಮಾನಿಗಳು ಬರುವಂತಾಗಬೇಕು ಅನ್ನೋ ಉದ್ದೇಶದಿಂದಲೇ ಹೆಚ್ಚೆಚ್ಚು ಡೇ ಅಂಡ್ ನೈಟ್ ಟೆಸ್ಟ್ ಪಂದ್ಯಗಳನ್ನ ಆಯೋಜಿಸಬೇಕು ಎಂದಿದ್ದಾರೆ ಗಂಗೂಲಿ.
ಟೆಸ್ಟ್ ಸರಣಿಯಲ್ಲಿ ಒಂದು ಡೇ& ನೈಟ್ ಪಂದ್ಯ ನಡೆಯುವುದು ಮುಖ್ಯ, ಯಾಕೆಂದರೆ ಕ್ರಿಕೆಟ್ ಮೈದಾನಗಳತ್ತ ಜನರನ್ನು ಆಕರ್ಷಿಸಬೇಕಿದೆ ಎಂದು ಬಿಸಿಸಿಐ ವೆಬ್ ಸೈಟ್ ನಲ್ಲಿ ಮಯಾಂಕ್ ಅಗರ್ವಾಲ್ ಜೊತೆಗಿನ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಟೆಸ್ಟ್ ಆವೃತ್ತಿಯಲ್ಲಿ ಕೆಲವು ಬದಲಾವಣೆಗಳನ್ನು ಜಾರಿಗೆ ತರಲು ಐಸಿಸಿ ಸಹ ಚಿಂತನೆ ನಡೆಸಿದ್ದು ಟೆಸ್ಟ್ ಪಂದ್ಯಗಳನ್ನು 5 ದಿನಗಳ ಬದಲಿಗೆ 4 ದಿನಗಳಿಗೆ ಇಳಿಕೆ ಮಾಡುವ ಸಲಹೆ ನೀಡಿತ್ತು. ಆದರೆ ಗಂಗೂಲಿ ತಾವು ಈ ಚಿಂತನೆಯ ಪರವಾಗಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಈ ವರ್ಷಾಂತ್ಯದ ವೇಳೆಗೆ ಆಸ್ಟ್ರೇಲಿಯಾ-ಭಾರತ ನಡುವೆ ನಡೆಯಲಿರುವ ಎರಡನೇ ಟೆಸ್ಟ್ ಸರಣಿಯಲ್ಲಿ ಹೊನಲು-ಬೆಳಕಿನ ಪಂದ್ಯ ನಡೆಯಲಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?