Featured
ನಮ್ಮೂರ ನಮ್ಮ ಹಳ್ಳ ವನಮಹೋತ್ಸವಕ್ಕೆ ಹಾಸ್ಯ ದಿಗ್ಗಜ ಗಂಗಾವತಿ ಪ್ರಾಣೇಶ್ ಚಾಲನೆ

ರೈಸಿಂಗ್ ಕನ್ನಡ:
ನಾಗಾರಾಜ್. Y, ಕೊಪ್ಪಳ

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಮಹತ್ವಾಕಾಂಕ್ಷೆ ಯೋಜನೆಯಾದ ನಮ್ಮೂರ ನಮ್ಮ ಹಳ್ಳ ಸ್ವಚ್ಛತೆಯ ಜೊತೆ ಜೊತೆಗೆ ಪರಿಸರ ಕಾಳಜಿ ಇಟ್ಟುಕೊಂಡು ಇಂದು ವನಮಹೋತ್ಸವ ಕಾರ್ಯಕ್ಕೆ ಹಾಸ್ಯ ದಿಗ್ಗಜ, ಗಂಗಾವತಿಯ ಬಿಚಿ ಪ್ರಾಣೇಶ್ ಚಾಲನೆ ನೀಡಿದ್ರು. ಇದೇ ವೇಳೆ ಮಾತನಾಡಿದ ಅವರು, ಡಾ.ಶಿವಕುಮಾರ್ ಪಾಟೀಲ್ ಮತ್ತು ಉದ್ಯಮಿ ಕಳಕನಗೌಡ ಪಾಟೀಲ್ ಅವರ ಕಾಳಜಿಯಿಂದ ಇಡೀ ದುರ್ಗಮ್ಮ ಹಳ್ಳ ಸ್ವಚ್ಚವಾಗಿತ್ತು. ಅದರ ಜೊತೆ ಇಂದು ಸಹ ಹಳ್ಳದ ಉದ್ದಕ್ಕೂ ಸಸಿ ನೆಡುತ್ತಿರುವುದು ಬಹಳ ಸಂತೋಷದ ಅರ್ಥಪೂರ್ಣ ಕೆಲಸವಾಗಿದೆ. ಈ ಕೆಲಸ ಸದಾ ಮುಂದುವರೆಯಲಿ ಎಂದ್ರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತಾಲೂಕ್ ಪಂಚಾಯತ್ ಅಧ್ಯಕ್ಷ ಮಹಮ್ಮದ್ ರಫಿ ಮಾತನಾಡಿ, ಸೂರ್ಯಗ್ರಹಣ ಗೋಚರಿಸುವ ದಿನದಂದೇ ಇಂತಹ ಪರಿಸರ ಕಾಳಜಿ ಇರೋ ಕೆಲಸ ನಾವು ಮಾಡುತ್ತಿದ್ದು, ಸಸಿ ನಡೆವುದೇ ಕೆಲಸವಲ್ಲದೇ ಇದರ ರಕ್ಷಣೆ ಅತ್ಯಮುಖ್ಯವಾಗಿದ್ದು, ದುರ್ಗಮ್ಮ ಹಳ್ಳ ಸ್ವಚ್ಚತೆಗೆ ನಮ್ಮ ಸಹಕಾರ ಸದಾ ಇರುತ್ತೆ ಅಂದ್ರು. ಈ ಸಂಧರ್ಭದಲ್ಲಿ ತಾಲೂಕ್ ಪಂಚಾಯತ್ ಇಓ ಡಾ. ಮೋಹನ್, ಡಿವೈಎಸ್ಪಿಗಳಾದ ಆರ್.ಎಸ್ ಉಜ್ಜನಕೊಪ್ಪ, ಬಿ.ಪಿ ಚಂದ್ರಶೇಖರ್, ನಗರಸಭೆ ಸದಸ್ಯರಾದ ಉಮೇಶ್ ಸಿಂಗನಾಳ್, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಕಳಕನಗೌಡ ಪಾಟೀಲ್, ನಮ್ಮೂರ ನಮ್ಮ ಹಳ್ಳದ ಉಸ್ತುವಾರಿ ಡಾ.ಶಿವಕುಮಾರ್ ಪಾಟೀಲ್, ಪ್ರಗತಿಪರ ರೈತ ಹಾಗೂ ಹಿರಿಯ ಮುಖಂಡರಾದ ಜೋಗದ ನಾರಾಯಣಪ್ಪ ನಾಯಕ, ಕರವೇ ಜಿಲ್ಲಾಧ್ಯಕ್ಷರಾದ ಪಂಪಣ್ಣ ನಾಯಕ, ಯುವ ಮುಖಂಡ ಯಂಕಪ್ಪ ಕಟ್ಟಿಮನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
You may like

ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ 21 ಕುರಿಗಳ ಬಲಿ

ಅಗ್ನಿಗೆ 5 ಬಣವಿಗಳು ಆಹುತಿ, ರೈತರಿಗೆ ಪರಿಹಾರ ನೀಡುವುದೇ ಸರಕಾರ

ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಯಾಕಾಯ್ತು ಗೊತ್ತಾ?

ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ

ಕೊಪ್ಪಳದಲ್ಲಿ ನೀರಿನ ಬರ : ಶಾಲೆ ಬಿಟ್ಟರೂ ಕೊಡ ಹಿಡಿದು ನಿಂತರು

ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!






















