Featured
ದಾವಣಗೆರೆ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಉಚಿತ ಮಾಸ್ಕ್ ವಿತರಣೆ

ರೈಸಿಂಗ್ ಕನ್ನಡ:
ದಾವಣಗೆರೆ:
ಕೋವಿಡ್ 19 ಹಿನ್ನೆಲೆ ಸುಕ್ಷತಾ ದೃಷ್ಟಿಯಿಂದ ದಾವಣಗೆರೆ ಕೆ. ಎಸ್. ಆರ್. ಟಿಸಿ ವಿಭಾಗದ ಕಂಡಕ್ಟರ್, ಚಾಲಕರು ಹಾಗೂ ತಾಂತ್ರಿಕ ವರ್ಗದ ಸಿಬ್ಬಂದಿಗಳಿಗೆ ಉಚಿತ ಎನ್ – 95 ಮಾಸ್ಕ್ ವಿತರಣೆ ಮಾಡಲಾಯಿತು.
ಜೆಡಿಎಸ್ ಯುವ ಮುಖಂಡ ಶ್ರೀಧರ್ ಪಾಟೀಲ್ ಅವರ ಅಭಿಮಾನಿ ಬಳಗದಿಂದ ಸುಮಾರು 200 ಸಿಬ್ಬಂದಿಗೆ ಉತ್ತಮ ಗುಣ ಮಟ್ಟದ ಮಾಸ್ಕ್ ನೀಡಲಾಯಿತು.
ಈ ವೇಳೆ ಮಾತನಾಡಿದ ಶ್ರೀಧರ್ ಪಾಟೀಲ್ ಕೆ.ಎಸ್.ಆರ್.ಟಿ.ಸಿ ಎಲ್ಲಾ ಸಿಬ್ಬಂದಿ ವರ್ಗ ಕೊರೊನಾ ವಾರಿಯರ್ಸ್ ನಂತೆ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು. ಬಸ್ನಲ್ಲಿ ಕಾರ್ಯನಿರ್ವಹಿಸುವಾಗ ಆರೋಗ್ಯ ದೃಷ್ಟಿಯಿಂದ ಎಲ್ಲಾ ಸಿಬ್ಬಂದಿಗಳು ಸಹ ಸುರಕ್ಷತಾ ಕ್ರಮ ಅನುಸರಿಸಿ ತಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ಅಭಿಮಾನಿ ಬಳಗದಿಂದ ಅಳಿಲು ಸೇವೆ ಮಾಡಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಕೆ ಎಸ್ ಆರ್ ಟಿ ಸಿ ಎಲ್ಲಾ ಸಿಬ್ಬಂದಿಗೂ ಮಾಸ್ಕ್ ವಿತರಣೆ ಮಾಡುತ್ತೇವೆ ಎಂದರು. ಬಳಿಕ ಮಾತನಾಡಿದ ದಾವಣಗೆರೆ ಕೆ ಎಸ್ ಆರ್ ಟಿಸಿ ವಿಭಾಗದ ಡಿಸಿ ಸಿದ್ದೇಶ್ವರ ಅವರು ಇಲಾಖೆವತಿಯಿಂದ ಸಿಬ್ಬಂದಿ ವರ್ಗಕ್ಕೆ ಕೋವಿಡ್ 19 ನಿಯಮಾನುಸಾರ ಅಗತ್ಯ ಸುರಕ್ಷತೆಗೆ ಮಾಸ್ಕ್ ಸ್ಯಾನಿಟೇಸರ್ ನೀಡಲಾಗುತ್ತಿದೆ.
ನಮ್ಮ ಇಲಾಖೆ ಸಿಬ್ಬಂದಿ ಕೋವಿಡ್ ಹಿನ್ನೆಲೆ ಕಷ್ಟದ ಸಮಯದಲ್ಲಿ ಭಯಪಡದೇ ಜಾಗೃತರಾಗಿ ಕೆಲಸ ಮಾಡುತ್ತಿದ್ದಾರೆ. ಶ್ರೀಧರ್ ಪಾಟೀಲ್ ಅವರು ನಮ್ಮ ಸಿಬ್ಬಂದಿಗೆ ಉತ್ತಮ ಗುಣ ಮಟ್ಟ ಮಾಸ್ಕ್ ವಿತರಣೆ ಮಾಡಿದ್ದು ಶ್ಲಾಘನೀಯ ಎಂದರು. ಬಳಿಕ ಮಾತಾಡಿದ ಡಿಫೋ ಮ್ಯಾನೇಜರ್ ನೀತಾ ಮಂಜುನಾಥ್ ಕೊರೊನಾ ಸಂದರ್ಭದ ಸಾರ್ವಜನಿಕರೊಂದಿಗೆ ಕೆ ಎಸ್ ಆರ್ ಟಿಸಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ ಇಲಾಖೆ ವತಿಯಿಂದಲೂ ಎಲ್ಲಾ ಸಿಬ್ಬಂದಿಗೆ ಪ್ರತಿ ತಿಂಗಳು 2 ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಲಾಗುತ್ತದೆ.
ಪ್ರಯಾಣಿಕರು ಸಹ ಕೋವಿಡ್ ನಿಯಮ ಪಾಲನೆ ಮಾಡಿ ನಮ್ಮ ಸಿಬ್ಬಂದಿಗೆ ಸಹಕಾರ ನೀಡಬೇಕು. ಸರ್ಕಾರದ ಆದೇಶದಂತೆ ಮಾಸ್ಕ್ ಇಲ್ಲದೆ ಪ್ರಯಾಣಿಸುವಂತವರಿಗೆ ಬಸ್ನಲ್ಲಿ ಅವಕಾಶ ನೀಡಬಾರದೆಂದು ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ. ಈ ಹಿನ್ನೆಲೆ ಎಲ್ಲಾರೂ ಸುರಕ್ಷತಾ ಕ್ರಮ ಕೈಗೊಳ್ಳಬೇಕೆಂದರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?
















