ರಾಜಕೀಯ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಒಕ್ಕಲಿಗರಿಗೆ ಆಧ್ಯತೆ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಒಕ್ಕಲಿಗರಿಗೆ ಆಧ್ಯತೆ ನೀಡಬೇಕು ಅಂತಾ ಮಾಜಿ ಡಿವೈಎಸ್ಪಿ ಹಾಗೂ ಒಕ್ಕಲಿಗರ ಸಂಘದ ಕಾರ್ಯದರ್ಶಿ ಆದ ಕೋನಪ್ಪರೆಡ್ಡಿ ಇವತ್ತು ಆಗ್ರಹಿಸಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಾಗಿದೆ.
ಮತದಾರರ ಸಂಖ್ಯೆಯೂ ಕೂಡ ಅತಿ ಹೆಚ್ಚು ಇದೆ. ಹೀಗಾಗಿ ಒಕ್ಕಲಿಗ ಸಮುದಾಯ ಹಾಗೂ ಕೆಂಪೇಗೌಡ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು ಅಂತಾ ಆಗ್ರಹಿಸಿದ್ದಾರೆ. ಸುಮಾರು 18 ಲಕ್ಷಕ್ಕೂ ಹೆಚ್ಚು ಮತದಾರರಿರುವ ಕ್ಷೇತ್ರದಲ್ಲಿ ಸುಮಾರು 7 ಲಕ್ಷಕ್ಕೂ ಹೆಚ್ಚು ಮತದಾರರು ಈ ಕ್ಷೇತ್ರದಲ್ಲಿ ಇದ್ದಾರೆ.
ಹೀಗಾಗಿ ಸ್ಥಳೀಯರಾದ ಹಾಗೂ ಒಕ್ಕಲಿಗರಿಗೆ ನೀಡಬೇಕು. ಅತ್ಯಂತ ಪ್ರಭಾವಿ ನಾಯಕ ಸಜ್ಜನ ನಾಯಕ ಸದಾನಂದಗೌಡರನ್ನು ಮತ್ತು ಅತ್ಯಂತ ದಕ್ಷ ಮತ್ತು ಕ್ರಿಯಾಶೀಲ ವ್ಯಕ್ತಿ, ಪ್ರಾಮಾಣಿಕ, ದಕ್ಷ ವ್ಯಕ್ತಿ ಪ್ರತಾಪ್ ಸಿಂಹರನ್ನು ಕೈಬಿಡಲಾಗಿದೆ. ಇದರಿಂದ ಒಕ್ಕಲಿಗ ಸಮುದಾಯ ಬೇಸರಗೊಂಡಿದೆ. ಸಮುದಾಯದ ಪ್ರಮುಖ ನಾಯಕನಾಗಿರುವುದರಿಂದ ನಮ್ಮ ಸಮುದಾಯದ ವ್ಯಕ್ತಿಯ ಪರವಾಗಿ ನಿಲ್ಲಲೇಬೇಕಿದೆ. ಹೀಗಾಗಿ ಎಲ್ಲಾ ಪಕ್ಷಗಳೂ ಒಕ್ಕಲಿಗ ಸಮುದಾಯಕ್ಕೆ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸದಾನಂದಗೌಡರನ್ನು ವಿನಾಕಾರಣ ತೆಗೆದಿದ್ದಾರೆ. ಇದು ಸರಿಯಿಲ್ಲ. ಇಲ್ಲಿ ಡಾ.ಕೆ.ಸುಧಾಕರ್ ಅಥವಾ ಅಲೋಕ್ ವಿಶ್ವನಾಥ್ ಇಬ್ಬರಲ್ಲಿ ಯಾರಿಗೆ ಕೊಟ್ಟರೂ ಸಂತೋಷವೇ. ಆದ್ರೆ ಒಕ್ಕಲಿಗರಿಗೆ ಟಿಕೇಟ್ ನೀಡದೆ ಹೋದ್ರೆ ಬೇಸರ ಅಂತಾ ನುಡಿದಿದ್ದಾರೆ. ಯಾಕಂದ್ರೆ ನಿನ್ನೆಯಷ್ಟೇ ಸದಾನಂದಗೌಡರ ವಿಚಾರದಲ್ಲಿ ಬೇಸರವಾಗಿದೆ. ಅಂತಹುದೇ ಸನ್ನಿವೇಶ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಅಗಬಾರದು ಎನ್ನುವುದು ನಮ್ಮ ಬೇಡಿಕೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?