Featured
ಜನರೇ ನನಗೆ ಹೈಕಮಾಂಡ್ : ಬೈ ಎಲೆಕ್ಷನ್ನಲ್ಲಿ ಯಾರಿಗೆ ಸಪೋರ್ಟ್..? ಸುಮಲತಾ ಹೆಜ್ಜೆ ನಿಗೂಢ

ಮಂಡ್ಯ : ರಾಜ್ಯದಲ್ಲೂ ಬೈ ಎಲೆಕ್ಷನ್ಗೆ ದಿನಗಣನೆ ಶುರುವಾಗಿದೆ. ಲೋಕಸಭಾ ಚುನಾವಣೆ ವೇಳೆ ಇಡಿ ದೇಶದ ಗಮನ ಸೆಳೆದಿದ್ದ ಮಂಡ್ಯ, ಈಗಲೂ ಎಲ್ಲರ ಕುತೂಹಲವನ್ನ ಸೆಳೆದಿದೆ. ಅದಕ್ಕೆ ಕಾರಣ, ಮಂಡ್ಯದ ಕೆ.ಆರ್.ಪೇಟೆ ಬೈ ಎಲೆಕ್ಷನ್. ಕೆ.ಆರ್. ಪೇಟೆ ಬೈ ಎಲೆಕ್ಷನ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ಯಾರಿಗೆ ಬೆಂಬಲ ಕೊಡ್ತಾರೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.
ಇದೇ ವಿಚಾರವಾಗಿ ಮಾತ್ನಾಡಿರೋ ಸುಮಲತಾ, ನನ್ನನ್ನು ಇನ್ನೂ ಯಾರು ಭೇಟಿ ಮಾಡಿ ಬೆಂಬಲ ಕೇಳಿಲ್ಲ. ಇನ್ನು ಸಮಯ ಇದೆ. ಸುಪ್ರೀಂಕೋರ್ಟ್ ನಲ್ಲಿ ತೀರ್ಪು ಬರಬೇಕಿದೆ. ಯಾವುದು ಸೂಕ್ತ ನಿರ್ಧಾರ ಎಂಬುದನ್ನು ಜನ ಹೇಳಬೇಕು. ನಾನು ತೀರ್ಮಾನ ತೆಗೆದುಕೊಳ್ಳುವುದಲ್ಲ ಎಂದಿದ್ದಾರೆ. ಅಲ್ಲದೆ, ನನಗೆ ಗೌರವ, ಸ್ಥಾನ ಮಾನ ಕೊಟ್ಪಿದ್ದು ಜನ. ನನಗೆ ಹೈಕಮಾಂಡ್ ಇಲ್ಲ. ನಾನೇ ಹೈಕಮಾಂಡ್, ಜನರೇ ನನ್ನ ಹೈಕಮಾಂಡ್. ನಾನು ಯಾರನ್ನೂ ಕೇಳಬೇಕಿಲ್ಲ. ಜನರೇ ಬಂದು ಹೇಳ್ತಾರೆ. ಆಗಲೇ ಜನ ಏನ್ ಇಷ್ಟ ಪಡುತ್ತಿದ್ದಾರೆಂದು ಗೊತ್ತಾಗುತ್ತೆ. ನಾನು ಪಕ್ಷೇತರಳು, ಬೆಂಬಲ ಕೊಡಲೇಬೇಕು ಅಂತ ಬಲವಂತ ಇಲ್ಲ. ಯಾರೂ ಬಲವಂತ ಮಾಡಲು ಆಗಲ್ಲ ಎಂದು ಸ್ಪಷ್ಟನೆ ನೀಡಿದ್ರು.
ನಾನು ತಟಸ್ಥವಾಗಿಯೂ ಇರಬಹುದು. ಬೆಂಬಲ ಕೊಡುವ ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದ್ರು. ಈ ಮೂಲಕ ವಿವಾದ ಆಗುವುದಾದರೆ ತಟಸ್ಥ ನಿಲುವು ತಾಳುವ ಸುಳಿವು ನೀಡಿದ್ರು ಸಂಸದೆ ಸುಮಲತಾ.
ಸುಮಲತಾ ನಿರ್ಧಾರದ ಮೇಲೆ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಯ ಭವಿಷ್ಯ ನಿಂತಿದೆ ಅನ್ನೋ ಚರ್ಚೆ ಆಗ್ತಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?