Featured
ಅತೃಪ್ತರು ಗ್ಯಾಂಗ್ರೀನ್ ಇದ್ದಂತೆ : ಜೆಡಿಎಸ್ ಟ್ವೀಟ್ಗೆ ಅನರ್ಹರು ಹೇಳಿದ್ದೇನು..? ದರಿದ್ರ ಮಕ್ಕಳು ಯಾರು..?

ರೈಸಿಂಗ್ ಕನ್ನಡ : ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳಲು ಕಾರಣರಾದ ಅನರ್ಹ ಶಾಸಕರಿಗೆ ಜೆಡಿಎಸ್ ಹೊಸ ಪಟ್ಟ ಕೊಟ್ಟಿದೆ. ಅನರ್ಹ ಶಾಸಕರು ಗ್ಯಾಂಗ್ರೀನ್ ಇದ್ದಂತೆ ಎಂದು ಟ್ವೀಟ್ ಮಾಡಿ ಕೆದಕಿ ವ್ಯಂಗ್ಯ ಮಾಡಿದೆ ಜೆಡಿಎಸ್. ಹಣದ ಆಸೆಗಾಗಿ ಮೈತ್ರಿ ಸರ್ಕಾರವನ್ನು ಬೀಳಿಸಿದ ಅತೃಪ್ತ ಶಾಸಕರು ಆಗ, ಬಿಜೆಪಿಯ ಕಣ್ಣಿಗೆ ದೇವರಂತೆ ಕಂಡಿದ್ದರು. ಆದ್ರೀಗ, ಅದೇ ಅತೃಪ್ತರನ್ನು ಎರಡೇ ತಿಂಗಳಿನಲ್ಲಿ ಬಿಜೆಪಿಯ ಉಪಮುಖ್ಯಮಂತ್ರಿಗಳು “ದರಿದ್ರ ಮಕ್ಕಳು” ಎಂದು ಕರೆಯುತ್ತಾ ತಿರುಗಾಡುತ್ತಿದ್ದಾರೆ ಎಂದು ಜೆಡಿಎಸ್ ಟ್ವಿಟ್ಟರ್ ಪೇಜ್ನಲ್ಲಿ ಟ್ವೀಟ್ ಮಾಡಲಾಗಿದೆ.
ಹಣದ ಆಸೆಗಾಗಿ ಮೈತ್ರಿ ಸರ್ಕಾರವನ್ನು ಬೀಳಿಸಿದ ಅತೃಪ್ತ ಶಾಸಕರು ಬಿಜೆಪಿಯ ಕಣ್ಣಿಗೆ ದೇವರಂತೆ ಕಂಡಿದ್ದರು.
ಈಗ ಅದೇ ಅತೃಪ್ತರನ್ನು ಎರಡೇ ತಿಂಗಳಿನಲ್ಲಿ ಬಿಜೆಪಿಯ ಉಪಮುಖ್ಯಮಂತ್ರಿಗಳು "ದರಿದ್ರ ಮಕ್ಕಳು" ಎಂದು ಕರೆಯುತ್ತ ತಿರುಗಾಡುತ್ತಿದ್ದಾರೆ. ಅತೃಪ್ತರು ಗ್ಯಾಂಗ್ರೀನ್ ಇದ್ದ ಹಾಗೆ, ಬಿಜೆಪಿಗೂ ಇದೀಗ ಅದರ ಅರಿವಾದಂತಿದೆ.— Janata Dal Secular (@JanataDal_S) September 27, 2019
ಅತೃಪ್ತರು ಗ್ಯಾಂಗ್ರೀನ್ ಇದ್ದಂತೆ. ಬಿಜೆಪಿಗೂ ಇದೀಗ ಅದರ ಅರಿವಾದಂತಿದೆ ಎಂದು ಟ್ವೀಟ್ನಲ್ಲಿ ಹೇಳಲಾಗಿದೆ. ಈ ಕುರಿತು ಪ್ರತಿಕ್ರಿಯೆ ಕೊಟ್ಟಿರೋ ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್, ನಮ್ಮ ಬಗ್ಗೆ ಏಕೆ ಮಾತಾಡ್ತಾರೆ. ಜೆಡಿಎಸ್ನವರು ವಿಶ್ವನಾಥ್, ಗೋಪಾಲಯ್ಯ, ನಾರಾಯಣಗೌಡ ಉತ್ತರ ಕೊಡ್ತಾರೆ ಎಂದು ಗರಂ ಆಗಿದ್ದಾರೆ.
ಜೆಡಿಎಸ್ನವರು ತಮ್ಮ ಶಾಸಕರನ್ನ ಕೇಳಿಕೊಳ್ಳಲಿ. ನಮ್ಮ ತಂಟೆಗೆ ಏಕೆ ಬರ್ತಾರೆ. ನಮ್ಮ ಪ್ರಶ್ನೆ ಮಾಡುವ ಹಕ್ಕು ಜೆಡಿಎಸ್ಗೆ ಇಲ್ಲ. ನಾವಿನ್ನೂ ಕಾಂಗ್ರೆಸ್ನಲ್ಲೇ ಇದ್ದೇವೆ. ಕಾಂಗ್ರೆಸ್ನಿಂದ ನಮ್ಮನ್ನ ಯಾವನ್ ಉಚ್ಛಾಟನೆ ಮಾಡ್ತಾನೆ ಎಂದು ಗರಂ ಆಗಿಯೇ ಪ್ರಶ್ನೆ ಮಾಡಿ, ಆಕ್ರೋಶ ಹೊರಹಾಕಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?