Featured
501 ಗಣ್ಯರಿಗೆ ಶ್ರೀರಂಗಪಟ್ಟಣದ ಶಾಶ್ವತಿ ನದಿ ತೀರದಲ್ಲಿ ಪಿಂಡ ಪ್ರಧಾನ: ಬಿಜೆಪಿ ಮಾಧ್ಯಮ ಸದಸ್ಯ ಹೇಮಂತ್ರಿಂದ ಸತ್ಕಾರ್ಯ

ರೈಸಿಂಗ್ ಕನ್ನಡ:
ಬೆಂಗಳೂರು :
ಪಿತೃ ಪಕ್ಷ ಸಂದರ್ಭದಲ್ಲಿ ಅಗಲಿದ ಕುಟುಂಬಕ್ಕೆ ಸೇರಿದ ಹಿರಿಯರಿಗೆ ಪಿಂಡ ಪ್ರಧಾನ ಮಾಡುವುದು ಮತ್ತು ತಿಲ ತರ್ಪಣ ಬಿಡುವುದು ಪದ್ಧತಿ.
ಆದರೆ, ನಮ್ಮ ರಾಷ್ಟ್ರಕ್ಕಾಗಿ, ಸಮಾಜದ ಒಳಿತಿಗಾಗಿ, ಸಂಗೀತ, ಸಾಹಿತ್ಯ , ವಿಜ್ಞಾನ, ಪತ್ರಿಕೋದ್ಯಮ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಹೆಸರು ತಂದು, ನಮ್ಮನು ಅಗಲಿದವರಿಗೆ ಪಿಂಡ ಪ್ರಧಾನ ಮಾಡುವುದು ಮತ್ತು ತಿಲ ತರ್ಪಣ ಕೊಟ್ಟು ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಕೊರುವ ಒಬ್ಬ ನಿಸ್ವಾರ್ಥ ವ್ಯಕ್ತಿ ನಮ್ಮ ನಡುವೆ ಇದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಹಿಡಿದು ಅಬ್ದುಲ್ ಕಲಾಂ ತನಕ, ಅನಂತಮೂರ್ತಿ ಅವರಿಂದ ಹಿಡಿದು ಕುವೆಂಪು, ಬೇಂದ್ರೆ, ಕಾರ್ನಾಡ್ ತನಕ, ಅನಂತಕುಮಾರ್ ರಿಂದ ಹಿಡಿದು ಬಿ ಎನ್ ವಿಜಯಕುಮಾರ್ ತನಕ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಿಂದ ಹಿಡಿದು ಕಾರ್ಗಿಲ್ ಹೋರಾಟದಲ್ಲಿ ಮಾಡಿದ ವೀರ ಯೋಧರ ತನಕ ಜೊತೆಗೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ರಾಜನ್ ಬಾಲ, ಅಲೀ ಹಫೀಜ್, ವಿ ಎನ್. ಸುಬ್ಬರಾವ್ ಹೀಗೆ ಒಟ್ಟು 501 ಜನರಿಗೆ ಶ್ರೀರಂಗಪಟ್ಟಣದ ಶಾಶ್ವತಿ ನದಿ ತೀರದಲ್ಲಿ ಗೌರವ ಸಮರ್ಪಣೆ ಮಾಡಲಾಯಿತು.
ವೇದಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮ ಅವರ ಮಾರ್ಗದರ್ಶನದಲ್ಲಿ ಹಿರಿಯ ಪತ್ರಕರ್ತರು ಮತ್ತು ರಾಜ್ಯ ಬಿಜೆಪಿ ಮಾಧ್ಯಮ ವಿಭಾಗದ ಸದಸ್ಯ ಹೇಮಂತ್ ಜಿ. ಈ ಸತ್ಕಾರ್ಯ ನೆರವೇರಿಸಿದರು.
ಪ್ರತಿ ವರ್ಷ ಈ ಕಾರ್ಯ ಎಲೆ ಮರೆ ಕಾಯಿಯಂತೆ ಹೇಮಂತ್ ಜೀ ಮಾಡುತ್ತಾ ಬಂದಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?