Connect with us

Featured

ನರಸೀಪುರದ ಕ್ಯಾನ್ಸರ್​​ ವೈದ್ಯ ದೈವಾಧೀನ- “ಸಣ್ಣಯ್ಯ”ಅಜ್ಜನಿಗೆ ಶ್ರದ್ಧಾಂಜಲಿ

ರೈಸಿಂಗ್​ ಕನ್ನಡ:

ANI ವರದಿಗಾರ ಉದಯಸಾಗರ, FB ಪೇಜ್​ನಿಂದ

Advertisement

ನಾನು ಹುಟ್ಟಿ ಬೆಳೆದ ಊರು ಶೈಕ್ಷಣಿಕವಾಗಿ ಮುಂದುವರಿದ ಊರು ನರಸೀಪುರ. ಎರಡು ದಶಕಗಳ ಹಿಂದೆ ಅಂತೇನು ಹೆಸರಿರಲಿಲ್ಲ. ಮಲೆನಾಡಿನ ಒಂದು ಹಳ್ಳಿಯಷ್ಟೇ ಆಗಿತ್ತು. ಕ್ರಮೇಣ ಔಷಧಿಪುರ, ಬೇರುಪುರ ಅಂತೆಲ್ಲಾ ವಿಶ್ವಪ್ರಸಿದ್ಧಿ ಪಡೀತು. ಗಿಡಮೂಲಿಕೆಗಳಿಂದ ಸಣ್ಣಪುಟ್ಟ ಔಷಧಗಳಿಗೆ ಮದ್ದು ನೀಡ್ತಿದ್ದ ನಾರಾಯಣಮೂರ್ತಿ ಮಾರಣಾಂತಿಕ ಖಾಯಿಲೆಗಳಿಗೆ ಔಷಧ ನೀಡಲು ಆರಂಭಿಸಿ ಅದು BBC documentaryವರೆಗೆ ವ್ಯಾಪಿಸಿತು.

ನಮ್ಮೂರಿನ ಸಣ್ಣ ಓಣಿಯಲ್ಲಿ ನಟರಾದ ಸುಧೀರ್, ವಜ್ರಮುನಿ ತರಹದವರು ಓಡಾಡೋದನ್ನ ಚಿಕ್ಕವರಿಂದಲೇ ಬೆರಗಿನಿಂದ ನೋಡ್ತಿದ್ವಿ. ಅವಾಗ ನಮಗೆಲ್ಲಾ ಊರು ಜಾತ್ರೆ ಆಗುತ್ತೆ, ರೋಗಿಗಳ ಸಂತೆ ಆಗುತ್ತೆ ಅನ್ನೋ ಭಾವನೆ ಇರಲಿಲ್ಲ. ಅದು ಬೆಳೆಯುತ್ತಲೇ ಹೋಯ್ತು. ನಾವೆಲ್ಲಾ ಅಂದರೆ ನಮ್ಮ ಹಿರಿಯರೂ ಕೂಡ ಪ್ರೀತಿಯಿಂದ ನಾರಾಯಣಮೂರ್ತಿಗಳಿಗೆ ಕರೀತಾ ಇದ್ದಿದ್ದು ಸಣ್ಣಯ್ಯ ಅಂತಲೇ.

ನಮಗೆ ಯಾವಾಗಲೂ ಔಷಧಿಗೆಂದು ಅವರ ಮನೆಗೆ ಹೋಗಿದ್ದಿಲ್ಲ. ನನ್ನ ಫ್ಯಾಮಿಲಿ ತೋಟ ಇರೋಕಡೆ ಊರಿಗೆ ಶಿಫ್ಟ್ ಆಯ್ತು. ಇಪ್ಪತ್ತು ವರ್ಷದ ನಂತರ ಅವರ ಮನೆಗೆ 2018 ರಲ್ಲಿ ಹೋಗಿದ್ದೆ ಆಗ ಅಪ್ಪನ ಹೆಸರು ಅಷ್ಟೇ ಅವರಿಗೆ ನೆನಪಿತ್ತು. ಮಗ ರಾಘುಗೆ ಮಾತ್ರ ನನ್ನ ಗುರುತು ಸಿಕ್ಕಿತು.

Advertisement

ಇಷ್ಟು ವರ್ಷಗಳಲ್ಲಿ ಸಣ್ಣಯ್ಯ ಜೊತೆ ಸಾಕಷ್ಟು ಜನ ಸೇರಿಕೊಂಡರು. ಔಷಧ ಎಲ್ಲಾ ಕಡೆ (ಹೊರದೇಶಗಳೂ) ಬೇಡಿಕೆ ಇತ್ತು. ಊರಿನವರ ವಿರೋಧ ಆರಂಭ ಆಯ್ತು. ಈ ಕಡೆ ಸಣ್ಣಯ್ಯನವರ ವೈದ್ಯ ಪದ್ಧತಿಯನ್ನೂ ಪ್ರಶ್ನೆ ಮಾಡುವ ಹಾಗಿಲ್ಲ. ಊರಿನವರ ಕಾಳಜಿಯನ್ನು ತಿರಸ್ಕರಿಸುವ ಹಾಗಿಲ್ಲ. ಖಾಸಗಿ ಚಾನೆಲ್ ಮರಗಳ ತೊಗಟೆ ಇರಿಯುತ್ತಿದ್ದಾರೆ, ಕಾಡು ನಾಶಕ್ಕೆ ಕಾರಣ ಆಗಿದ್ದಾರೆಂದೂ ಸ್ಟೋರಿ ಮಾಡಿತ್ತು. ಅದಕ್ಕೆ ಊರಿನವರು ( ನನ್ನ ದೊಡ್ಡಪ್ಪನೂ) ಬೈಟ್ ಕೊಟ್ಟಿದ್ದರು.

ಕೆಲವು ದಿ‌ನಗಳ ಹಿಂದೆ ಶಿವಮೊಗ್ಗದ ಕಮಂಗಿ ಜರ್ನಲಿಸ್ಟ್ ಗಳು ನಾಟಿ ವೈದ್ಯರು ಕರೋನಾಕ್ಕೆ ಔಷಧಿ ಕಂಡು ಹಿಡಿದಿದ್ದಾರೆ ಅಂತ ಸ್ಟೋರಿ ಮಾಡಿ ಊರಿನವರ ವಿರೋಧಕ್ಕೆ ಮತ್ತೆ ಕಾರಣರಾದರು. ಮಲೆನಾಡಿನಲ್ಲಿ ಆಯುರ್ವೇದ ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಸಣ್ಣಯ್ಯನ ತರಹ ಸಾಕಷ್ಟು ಜನರು ವಿವಿಧ ಖಾಯಿಲೆಗಳಿಗೆ ಔಷಧ ನೀಡ್ತಾರೆ. ಸಣ್ಣಯ್ಯ ಮಾತ್ರ ಹಲವು ಕಾರಣಗಳಿಂದ ಸುಪ್ರಸಿದ್ಧರಾದರು. ಅವರು ನಮಗೆಲ್ಲ ಈಗಲೂ ಸಣ್ಣಯ್ಯ ಅಂತಾಲೇ ನೆನಪು.

#ಶ್ರದ್ಧಾಂಜಲಿಗಳುಅಜ್ಜ #ಸದ್ಗತಿ

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ