ರೈಸಿಂಗ್ ಕನ್ನಡ:
ANI ವರದಿಗಾರ ಉದಯಸಾಗರ, FB ಪೇಜ್ನಿಂದ
ನಾನು ಹುಟ್ಟಿ ಬೆಳೆದ ಊರು ಶೈಕ್ಷಣಿಕವಾಗಿ ಮುಂದುವರಿದ ಊರು ನರಸೀಪುರ. ಎರಡು ದಶಕಗಳ ಹಿಂದೆ ಅಂತೇನು ಹೆಸರಿರಲಿಲ್ಲ. ಮಲೆನಾಡಿನ ಒಂದು ಹಳ್ಳಿಯಷ್ಟೇ ಆಗಿತ್ತು. ಕ್ರಮೇಣ ಔಷಧಿಪುರ, ಬೇರುಪುರ ಅಂತೆಲ್ಲಾ ವಿಶ್ವಪ್ರಸಿದ್ಧಿ ಪಡೀತು. ಗಿಡಮೂಲಿಕೆಗಳಿಂದ ಸಣ್ಣಪುಟ್ಟ ಔಷಧಗಳಿಗೆ ಮದ್ದು ನೀಡ್ತಿದ್ದ ನಾರಾಯಣಮೂರ್ತಿ ಮಾರಣಾಂತಿಕ ಖಾಯಿಲೆಗಳಿಗೆ ಔಷಧ ನೀಡಲು ಆರಂಭಿಸಿ ಅದು BBC documentaryವರೆಗೆ ವ್ಯಾಪಿಸಿತು.
ನಮ್ಮೂರಿನ ಸಣ್ಣ ಓಣಿಯಲ್ಲಿ ನಟರಾದ ಸುಧೀರ್, ವಜ್ರಮುನಿ ತರಹದವರು ಓಡಾಡೋದನ್ನ ಚಿಕ್ಕವರಿಂದಲೇ ಬೆರಗಿನಿಂದ ನೋಡ್ತಿದ್ವಿ. ಅವಾಗ ನಮಗೆಲ್ಲಾ ಊರು ಜಾತ್ರೆ ಆಗುತ್ತೆ, ರೋಗಿಗಳ ಸಂತೆ ಆಗುತ್ತೆ ಅನ್ನೋ ಭಾವನೆ ಇರಲಿಲ್ಲ. ಅದು ಬೆಳೆಯುತ್ತಲೇ ಹೋಯ್ತು. ನಾವೆಲ್ಲಾ ಅಂದರೆ ನಮ್ಮ ಹಿರಿಯರೂ ಕೂಡ ಪ್ರೀತಿಯಿಂದ ನಾರಾಯಣಮೂರ್ತಿಗಳಿಗೆ ಕರೀತಾ ಇದ್ದಿದ್ದು ಸಣ್ಣಯ್ಯ ಅಂತಲೇ.
ನಮಗೆ ಯಾವಾಗಲೂ ಔಷಧಿಗೆಂದು ಅವರ ಮನೆಗೆ ಹೋಗಿದ್ದಿಲ್ಲ. ನನ್ನ ಫ್ಯಾಮಿಲಿ ತೋಟ ಇರೋಕಡೆ ಊರಿಗೆ ಶಿಫ್ಟ್ ಆಯ್ತು. ಇಪ್ಪತ್ತು ವರ್ಷದ ನಂತರ ಅವರ ಮನೆಗೆ 2018 ರಲ್ಲಿ ಹೋಗಿದ್ದೆ ಆಗ ಅಪ್ಪನ ಹೆಸರು ಅಷ್ಟೇ ಅವರಿಗೆ ನೆನಪಿತ್ತು. ಮಗ ರಾಘುಗೆ ಮಾತ್ರ ನನ್ನ ಗುರುತು ಸಿಕ್ಕಿತು.
ಇಷ್ಟು ವರ್ಷಗಳಲ್ಲಿ ಸಣ್ಣಯ್ಯ ಜೊತೆ ಸಾಕಷ್ಟು ಜನ ಸೇರಿಕೊಂಡರು. ಔಷಧ ಎಲ್ಲಾ ಕಡೆ (ಹೊರದೇಶಗಳೂ) ಬೇಡಿಕೆ ಇತ್ತು. ಊರಿನವರ ವಿರೋಧ ಆರಂಭ ಆಯ್ತು. ಈ ಕಡೆ ಸಣ್ಣಯ್ಯನವರ ವೈದ್ಯ ಪದ್ಧತಿಯನ್ನೂ ಪ್ರಶ್ನೆ ಮಾಡುವ ಹಾಗಿಲ್ಲ. ಊರಿನವರ ಕಾಳಜಿಯನ್ನು ತಿರಸ್ಕರಿಸುವ ಹಾಗಿಲ್ಲ. ಖಾಸಗಿ ಚಾನೆಲ್ ಮರಗಳ ತೊಗಟೆ ಇರಿಯುತ್ತಿದ್ದಾರೆ, ಕಾಡು ನಾಶಕ್ಕೆ ಕಾರಣ ಆಗಿದ್ದಾರೆಂದೂ ಸ್ಟೋರಿ ಮಾಡಿತ್ತು. ಅದಕ್ಕೆ ಊರಿನವರು ( ನನ್ನ ದೊಡ್ಡಪ್ಪನೂ) ಬೈಟ್ ಕೊಟ್ಟಿದ್ದರು.
ಕೆಲವು ದಿನಗಳ ಹಿಂದೆ ಶಿವಮೊಗ್ಗದ ಕಮಂಗಿ ಜರ್ನಲಿಸ್ಟ್ ಗಳು ನಾಟಿ ವೈದ್ಯರು ಕರೋನಾಕ್ಕೆ ಔಷಧಿ ಕಂಡು ಹಿಡಿದಿದ್ದಾರೆ ಅಂತ ಸ್ಟೋರಿ ಮಾಡಿ ಊರಿನವರ ವಿರೋಧಕ್ಕೆ ಮತ್ತೆ ಕಾರಣರಾದರು. ಮಲೆನಾಡಿನಲ್ಲಿ ಆಯುರ್ವೇದ ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಸಣ್ಣಯ್ಯನ ತರಹ ಸಾಕಷ್ಟು ಜನರು ವಿವಿಧ ಖಾಯಿಲೆಗಳಿಗೆ ಔಷಧ ನೀಡ್ತಾರೆ. ಸಣ್ಣಯ್ಯ ಮಾತ್ರ ಹಲವು ಕಾರಣಗಳಿಂದ ಸುಪ್ರಸಿದ್ಧರಾದರು. ಅವರು ನಮಗೆಲ್ಲ ಈಗಲೂ ಸಣ್ಣಯ್ಯ ಅಂತಾಲೇ ನೆನಪು.
#ಶ್ರದ್ಧಾಂಜಲಿಗಳುಅಜ್ಜ #ಸದ್ಗತಿ
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?