Featured
JCB ಚಾಲಕನ ಮೇಲೆ ಮಾಜಿ MLA ದರ್ಪ- ಅಧಿಕಾರಿಗಳು ಹೇಳಿದ ಕೆಲಸ ಮಾಡಿದ್ದೇ ತಪ್ಪಾ..?

ರೈಸಿಂಗ್ ಕನ್ನಡ:
ಮಂಡ್ಯ:
ಶಾಸಕರು, ಲೋಕಸಭಾ ಸದಸ್ಯರು ಅಥವಾ ಯಾವುದೇ ಜನಪ್ರತಿನಿಧಿ ಇರಲಿ. ಅವರು ಅಭಿವೃದ್ಧಿಯ ಪರ ಇರಬೇಕು. ಆದರೆ ಮಂಡ್ಯ ಜಿಲ್ಲೆಯ ಮಾಜಿ MLA ಒಬ್ಬರು ಇದಕ್ಕೆಲ್ಲಾ ಒಪ್ಪಲ್ಲ. ನೀವೇನಾದ್ರೂ ಅಭಿವೃದ್ಧಿ ಕೆಲಸ ಮಾಡಿಸ್ತೀನಿ ಅಂದ್ರೆ ಸಾಕು ಅದನ್ನು ವಿರೋಧಿಸ್ತಾರೆ. ಅದಕ್ಕೊಂದು ಪಕ್ಕಾ ಉದಾಹರಣೆ ಶ್ರೀರಂಗಪಟ್ಟದ ಅರಕೆರೆಯಲ್ಲಿ ಸಿಕ್ಕಿದೆ.
ಅಭಿವೃದ್ಧಿ ಕಾಮಗಾರಿಗಾಗಿ ತಾಲೂಕು ಪಂಚಾಯ್ ಕಾರ್ಯನಿರ್ವಹಣ ಅಧಿಕಾರಿ PWD ಜಾಗದಲ್ಲಿದ್ದ ಬಸ್ ನಿಲ್ದಾಣ ಕೆಡವಲು ಅನುಮತಿ ನೀಡಿದ್ದರು. ಅದರಂತೆ ಗುರುವಾರ ಜೆಸಿಬಿ ಮೂಲಕ ಬಸ್ ನಿಲ್ದಾಣ ಕೆಡವಲಾಗುತ್ತಿತ್ತು. ಕೆಲಸ ನಡೆಯುತ್ತಿದ್ದ ವೇಳೆ ಶ್ರೀರಂಗಪಟ್ಟಣದ ಮಾಜಿ ಎಂಎಲ್ಎ ರಮೇಶ್ ಬಂಡಿಸಿದ್ದೇ ಗೌಡ ಬಂದೇ ಬಿಟ್ರು. ಅಷ್ಟೇ ಅಲ್ಲ ಕೆಲಸ ಮಾಡ್ತಿದ್ದ JCB ಚಾಲಕನನ್ನು ಮಾಜಿ ಶಾಸಕರು ಎಳೆದಾಡಿದರು.
ಅರಕೆರೆ ಗ್ರಾಮದ ರಸ್ತೆ ಅಗಲೀಕರಣ ಹಿನ್ನೆಲೆ ಹಳೆಯ ಬಸ್ ನಿಲ್ದಾಣ ಕೆಡವಲಾಗ್ತಿತ್ತು. ಅಧಿಕಾರಿಗಳ ಅನುಮತಿ ಮೇರೆಗೆ ಹಳೆಯ ಬಸ್ ನಿಲ್ದಾಣ ಕೆಡವುತ್ತಿದ್ದ JCB ಚಾಲಕನ ಮೇಲೆ ಹಲ್ಲೆ ಮಾಡಿದ್ದು ನಿಜಕ್ಕೂ ಅಮಾನವೀಯ. ಮಾಜಿ ಎಂಎಲ್ಎಯವರ ಈ ವರ್ತನೆ ಬಗ್ಗೆ ಸ್ಥಳೀಯರು ಬೇಸರ ಮಾಡಿಕೊಂಡಿದ್ದು ನಿಜ.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್