Featured
ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗ್ತಾರಾ..? ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದು ಆಯ್ಕೆ ಮಾಡಿದ್ದು ಯಾಕೆ..?

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಪ್ರತಿಪಕ್ಷ ನಾಯಕ ಸ್ಥಾನವನ್ನ ಅಲಂಕರಿಸಿದ್ದಾರೆ. ಸಾಕಷ್ಟು ವಿರೋಧ, ಪಿತೂರಿ ಮಧ್ಯೆಯೂ ಸಿದ್ದುಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದೆ. ಇದರಿಂದಾಗಿ ಸಿದ್ದು ವಿರೋಧಿಗಳು ಥಂಡ ಹೊಡೆದಿದ್ದಾರೆ. ಸಾಕಷ್ಟು ಲಾಬಿ, ಷಡ್ಯಂತ್ರ ನಡೆದ್ರೂ, ಕಾಂಗ್ರೆಸ್ ಹೈಕಮಾಂಡ್ ಮಾತ್ರ ಸಿದ್ದು ಕೈಬಿಟ್ಟಿಲ್ಲ. ಹೀಗಾಗಿ, ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗ್ತಾರಾ ಅನ್ನೋ ಚರ್ಚೆ ಶುರುವಾಗಿದೆ.
ಸದ್ಯ ಕಾಂಗ್ರೆಸ್ನಲ್ಲಿ ಮಾಸ್ ಲೀಡರ್ ಅಂದ್ರೆ ಅದು ಸಿದ್ದರಾಮಯ್ಯ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಹೆಚ್.ಕೆ. ಪಾಟೀಲ್, ಡಾ.ಜಿ. ಪರಮೇಶ್ವರ್, ಕೆ.ಹೆಚ್, ಮುನಿಯಪ್ಪ, ಬಿ.ಕೆ. ಹರಿಪ್ರಸಾದ್, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಘಟಾನುಘಟಿ ನಾಯಕರೇ ಸಿದ್ದು ವಿರುದ್ಧ ವಲಸಿಗ ಕಾಂಗ್ರೆಸ್ ಅಸ್ತ್ರ ಪ್ರಯತ್ನಿಸಿದ್ರು. ಆದ್ರೆ, ಸಿದ್ದುಗೆ ಅದ್ಯಾವುದು ಮುಳುವಾಗಲಿಲ್ಲ.
ಸಿದ್ದರಾಮಯ್ಯ ಅವರ ಮಾತು, ನೇರೆ ನಡೆ, ನುಡಿ, ವ್ಯಕ್ತಿತ್ವವೇ ಇವತ್ತು ಮತ್ತೊಮ್ಮೆ ಪ್ರತಿಪಕ್ಷ ನಾಯಕ ಆಗೋದಕ್ಕೆ ಕಾರಣ. ಪ್ರಧಾನಿ ನರೇಂದ್ರ ಮೋದಿಯನ್ನೂ ಸೇರಿದಂತೆ ಯಾವೊಬ್ಬ ನಾಯಕನನ್ನೂ ಬಿಡದೆ ಕರಾರುವಕ್ಕಾಗಿ ಟೀಕಿಸೋ ವಾಗ್ಮಿ ಸಿದ್ದರಾಮಯ್ಯ. ಸಿದ್ದರಾಮಯ್ಯ ಮಾತಾಡ್ತಿದ್ರೆ, ಅದಕ್ಕೆ ಅರ್ಥ ಇರುತ್ತೆ. ತೂಕ ಇರುತ್ತೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ನಲ್ಲಿ ಸಾಕಷ್ಟು ನಾಯಕರಿದ್ರೂ, ಸಿದ್ದರಾಮಯ್ಯ ಅವರಂತ ಒಬ್ಬರೇ ಒಬ್ಬರು ಇಲ್ಲ.
ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗೋದ್ರಿಂದ ಸದನದಲ್ಲಿ ಮತ್ತಷ್ಟು ಚರ್ಚೆ ಆಗೋದ್ರಲ್ಲಿ ಸಂದೇಹವಿಲ್ಲ. ಸಿಎಂ ಯಡಿಯೂರಪ್ಪ ಅವರನ್ನ ತರಾಟೆಗೆ ತೆಗೆದುಕೊಳ್ಳಲು ಸಿದ್ದರಾಮಯ್ಯ ಒಬ್ಬರ ಕೈಯಲ್ಲೇ ಆಗುತ್ತೆ. ಒಂದ್ವೇಳೆ, ಸಿದ್ದು ಬಿಟ್ಟು ಬೇರೆ ಯಾರನ್ನಾದ್ರೂ ಪ್ರತಿಪಕ್ಷ ನಾಯಕರನ್ನಾಗಿ ಮಾಡಿದ್ದಿದ್ರೆ, ಕಾಂಗ್ರೆಸ್ ಖಂಡತ ಎಡವಟ್ಟು ಮಾಡಿಕೊಳ್ತಿತ್ತು ಅನ್ನೋದ್ರಲ್ಲಿ ಡೌಟೇ ಇಲ್ಲ.
ಅದೇನೇ ಆಗ್ಲಿ, ಪ್ರತಿಪಕ್ಷ ನಾಯಕರಾಗಿರೋ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯೂ ಆಗ್ತಾರೆ ಅನ್ನೋ ಮನೋಭಾವನೆ ಕಾಂಗ್ರೆಸ್ ಹಾಗೂ ಸಿದ್ದು ಅಭಿಮಾನಿಗಳಲ್ಲಿ ಚಿಗುರೊಡೆದಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?