Featured
ಮಾತಿನಲ್ಲಿ ಕಾಲಕಳೆಯೋದು ಬಿಟ್ಟು ಕೆಲಸ ಮಾಡಿ- ಕೊರೊನಾ ವಿಚಾರದಲ್ಲಿ ಹುಡುಗಾಟ ಬೇಡ- ಸರ್ಕಾರಕ್ಕೆ ಮಾಜಿ ಸಿಎಂ ಹೆಚ್ಡಿಕೆ ಸಲಹೆ
ರೈಸಿಂಗ್ ಕನ್ನಡ:
ಬೆಂಗಳೂರು:
ಕೊರೊನಾ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ. ಮಹಾಮಾರಿಯನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಸರ್ಕಾರದ ಕೆಲಸ ಕೇವಲ ಮಾತಿಗೆ ಮಾತ್ರ ಸೀಮಿತವಾಗಿದೆ. ಕೋವಿಡ್ ವಿಚಾರದಲ್ಲಿ ಸರ್ಕಾರ ಹಣ ಲೂಟಿ ಮಾಡಿದೆ ಅಂತ ಆರೋಪ ಕೇಳಿ ಬರ್ತಿದೆ. ಕಳೆದ 3 ತಿಂಗಳಿಂದ ಕೇವಲ ಸಭೆ ಮತ್ತು ಮಾತಿಗೆ ಮಾತ್ರ ನಿಮ್ಮ ಆಡಳಿತ ಸೀಮಿತವಾಗಿದೆ. ಈಗಾಲಾದ್ರು ಎಲ್ಲಿ ಲೋಪ ಆಗಿದೆ ಅಂತ ತಿಳಿದುಕೊಂಡು ಅದನ್ನ ಸರಿಪಡಿಸಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ಸಾಮಾಗ್ರಿ ಖರೀದಿಯಲ್ಲಿ ಅಕ್ರಮ ಅಂತ ವಿಪಕ್ಷ ನಾಯಕರು ಆರೋಪ ಮಾಡಿದ್ದಾರೆ. ವಿಪಕ್ಷ ನಾಯಕರು, ಸಿಎಂಗೆ ನನ್ನ ಮನವಿ. ಇಬ್ಬರು ಆರೋಪ ಪ್ರತ್ಯಾರೋಪ ಮಾಡೋದು ಬಿಟ್ಟು ಜನ ಪರ ಕೆಲಸ ಮಾಡಿ. ಸಿಎಂ ಕೂಡಾ ಕೆಲ ಜಿಲ್ಲೆಯಲ್ಲಿ ಪರಿಸ್ಥಿತಿ ಕೈ ಮೀರಿದೆ ಅಂತ ಹೇಳಿದ್ದಾರೆ. ಜನ ಇದನ್ನ ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ. ಮತ್ತೆ ಇಂತಹ ಆರೋಪ ಕೇಳಿ ಬರಬಾರದು. ಇದಕ್ಕಾಗಿ ವಿಪಕ್ಷ ನಾಯಕರನ್ನ ಕೋವಿಡ್ ಸಭೆ, ಟಾಸ್ಕ್ ಫೋರ್ಸ್ ಸಭೆಯಲ್ಲಿ ಸೇರಿಸಿಕೊಳ್ಳಿ.
- ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಇದೇ ವೇಳೆ ಕುಮಾರಸ್ವಾಮಿ, ನಮ್ಮ ಪಕ್ಷದಿಂದ ನಾವು ಯಾವುದೇ ಆರೋಪ ಮಾಡೊಲ್ಲ. ನಮಗೆ ನಂಬಿಕೆ ಇದೆ ಜನರ ಹಣ ದುರುಪಯೋಗ ಆಗೊಲ್ಲ ಅಂತಾ. ಹೀಗಾಗಿ ನಮ್ಮ ಪಕ್ಷದಿಂದ ಆರೋಪ ಮಾಡೊಲ್ಲ . 8 ವಲಯಗಳ ಉಸ್ತುವಾರಿ, ಸಚಿವರಿಗೆ ನೀಡಿರುವ ವಿಚಾರದ ಬಗ್ಗೆ ಕುಮಾರಸ್ವಾಮಿ ಪ್ರಶ್ನೆಗಳನ್ನು ಎತ್ತಿದ್ದಾರೆ. ಅಷ್ಟೇ ಅಲ್ಲ ಈ ಸಮಿತಿ ಕೇವಲ ಕಾಟಾಚಾರಕ್ಕೆ ಆಗಬಾರದು. ಖಾಸಗಿ ಆಸ್ಪತ್ರೆ ವೈದ್ಯರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಅದು ಬಿಟ್ಟು ನೀರು, ಕರೆಂಟ್ ಕಟ್ ಮಾಡ್ತೀವಿ ಅಂತ ಬೆದರಿಕೆ ಹಾಕಬೇಡಿ. ಖಾಸಗಿ ಆಸ್ಪತ್ರೆ ವೈದ್ಯರು, ನರ್ಸ್ ಗಳಿಗೆ ಸರ್ಕಾರದ ಸವಲತ್ತು ಮತ್ತು ವಿಮೆ ಮಾಡಿಸಿ. ಎಕ್ಸಿಬಿಷನ್ ಸೆಂಟರ್ ನಲ್ಲಿ 10 ಸಾವಿರ ಬೆಡ್ ಅಂತ ಹೇಳ್ತಿದ್ದೀರಾ, ಇದರ ನಿರ್ವಹಣೆಗೆ ಎಷ್ಟು ವೈದ್ಯರು, ಸಹಾಯಕರು ಬೇಕಾಗುತ್ತದೆ ಅಂತ ಪ್ಲಾನ್ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಕೋವಿಡ್ ವಿಚಾರದಲ್ಲಿ ಹುಡುಗಾಟಿಕೆ ಮಾಡಬೇಡಿ. ಪಿಜಿ ಸ್ಟೂಡೆಂಟ್, ಮೆಡಿಕಲ್ ಸ್ಟೂಡೆಂಟ್ ತಂದೆ ತಾಯಿಗಳಿಗೂ ಆತಂಕ ಇರುತ್ತದಎ. ಅವ್ರಿಗೂ ಸರ್ಕಾರದ ಸವಲತ್ತು ಒದಗಿಸಿ. ಸಣ್ಣ ಪುಟ್ಟ ಆಸ್ಪತ್ರೆ ಗಳು ಸಾಲ ಮಾಡಿ ಆಸ್ಪತ್ರೆ ಮಾಡಿರುತ್ತಾರೆ. ಅವ್ರಿಗೂ ಸರ್ಕಾರ ಸವಲತ್ತು ಕೊಡಬೇಕು. ತಜ್ಞರು ಕೊಟ್ಟ ವರದಿ ಪ್ರಕಾರ ಅಂತರ್ ಜಿಲ್ಲಾ ವಾಹನಗಳ ಓಡಾಟ ನಿಷೇಧ ಮಾಡಿದರೆ ಕೋವಿಡ್ ನಿಯಂತ್ರಣ ಮಾಡಬಹುದು ಎಂದು ಕುಮಾರಸ್ವಾಮಿ ಹೇಳಿದರು.
ಈ ಮಧ್ಯೆ ಹೆಚ್ಡಿಕೆ ಟೆಸ್ಟ್ ರಿಪೋರ್ಟ್ ತಡ ಆಗ್ತಿರೋದು ಕೊರೊನಾ ಹರಡೋಕೆ ಕಾರಣ ಆಗ್ತಿದೆ, ಆದಷ್ಟು ಬೇಗವೇ ಟೆಸ್ಟ್ ರಿಪೋರ್ಟ್ ಬರೋ ಹಾಗೆ ಮಾಡಿ. ಕೊರೊನಾ ಟೆಸ್ಟ್ ಗೆ ಯಾವುದೇ ಹಣ ಪಡೆಯದೇ ಫ್ರೀ ಮಾಡಿ ಎಂದು ಮಾಜಿ ಸಿಎಂ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?