Featured
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಈಶ್ವರ್ ಖಂಡ್ರೆ ಕಿಡಿ..!

ರೈಸಿಂಗ್ ಕನ್ನಡ
ಬೀದರ್ ಪ್ರತಿನಿಧಿ, ವಿಶ್ವಕುಮಾರ್ :
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಮೇಲೆ ಮೃಧುಧೋರಣೆ ತೊರುತ್ತಿದೆ. ರಾಜ್ಯದಲ್ಲಿನ ಸಂಸದರು ಏನು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಈಶ್ವರ್ ಖಂಡ್ರೆ ಭಾಲ್ಕಿಯಲ್ಲಿ ಕಿಡಿಕಾರಿದ್ದಾರೆ. ಕೊರೊನಾದಿಂದಾಗಿ, ಕಲ್ಯಾಣ ಕರ್ನಾಟಕದ 200ಕ್ಕೂ ಹೆಚ್ಚು ಯುವಕರು, ಕುವೈತ್ನಲ್ಲಿ ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಅವರುಗಳ ವೀಸಾ ಅವಧಿಯೂ ಮುಗಿದಿದೆ. ಕರೆದುಕೊಂಡು ಹೋದವರು ಅವರ ಪಾಲಿಗೆ ಈಗ ಇಲ್ಲ, ಅಲ್ಲದೆ ಬೋಗಸ್ ಟಿಕೆಟ್ ನೀಡುತ್ತಿರೋ ಆರೋಪವೂ ಕೇಳಿಬಂದಿದೆ. ಇಷ್ಟಾದ್ರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ.
ಕುವೈತ್ನಲ್ಲಿ ಸಿಲುಕಿದ ಯುವಕರು ನನ್ನೊಂದಿಗೆ ವಿಡಿಯೊ ಮೂಲಕ ನೇರವಾಗಿ ಸಂಪರ್ಕಿಸಿದ್ದಾರೆ. ವಾಟ್ಯಾಪ್ನಲ್ಲೂ ವಿಡಿಯೋ ಹರಿಬಿಟ್ಟಿದ್ದಾರೆ. ಇದೆಲ್ಲ ಗಮನಕ್ಕಿದ್ದರೂ ಕೇಂದ್ರ, ರಾಜ್ಯ ಸರ್ಕಾರಗಳು ಏನು ಮಾಡುತ್ತಿವೆ? ಕರ್ನಾಟಕದ ಸಂಸದರು ಏನು ಮಾಡುತ್ತಿದ್ದಾರೆ ? ಮೋಸ ಮಾಡಿರುವ ಕಂಪನಿ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಕೇರಳದ ಜನರಿಗಾಗಿ 800 ವಿಮಾನ ಕಳುಹಿಸಿದ್ದೀರಾ. ಆದರೆ ರಾಜ್ಯದ ಜನತೆಗೆ ಕೊನೆಗೆ 100 ವಿಮಾನ ಕಳುಹಿಸೋಕ್ಕು ಆಗೊಲ್ವಾ. ಇದು ಕೇಂದ್ರ ಸರ್ಕಾರ ಕೋವಿಡ್ನಲ್ಲೂ ತಾರತಮ್ಯ ಮಾಡುತ್ತಿದ್ದಾರೆ ಎಂದಿರುವ ಈಶ್ವರ್ ಖಂಡ್ರೆ, ಕರ್ನಾಟಕದ ಜನತೆ ಮೃದು ಸ್ವಭಾವದವರು ಅಂತಾ ನಮ್ಮ ಜನರನ್ನ ತಾರತಮ್ಯ ಮಾಡುತ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?