ರೈಸಿಂಗ್ ಕನ್ನಡ :
ಬೀದರ್ :
ಗಣೇಶೋತ್ಸವ ಸಂಭ್ರಮದ ಜೊತೆಗೆ ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಮಣ್ಣಿನ ವಿಗ್ರಹ ಮಾಡುವ ಜೊತೆಗೆ ಹೂವಿನ ಕುಂಡ್ಲ ಅಥವಾ ಮನೆಯಂಗಳದಲ್ಲಿ ವಿಗ್ರಹವಿಟ್ಟಲ್ಲಿ ಸಸಿ ಬೆಳೆದು ಹೂವು ಕೊಡುತ್ತದೆ. ಇದರಿಂದ ಪರಿಸರ ಉಳಿದಂತಷ್ಟೆ ಮನೆಯಂಗಳ ಅಂದವೂ ಹೆಚ್ಚುತ್ತದೆ.
ಜಿಲ್ಲೆಯ ಮರಖಲ್ ಗ್ರಾಮದ ನಿವಾಸಿ ಕಲಾವಿದ ಸಿದ್ದಪ್ಪ ಸಂಗಶೆಟ್ಟಿ ಸವದಲ್ಲಿ ಚಾಂಬೋಳೆ ಈ ರೀತಿಯ ಹೊಸ ಚಿಂತೆನೆ ಮಾಡಿದ್ದಾರೆ. ಗಣೇಶ್ ವಿಸರ್ಜನೆ ನಂತರ ಒಂದು ಹೂ ಕುಂಡ್ಲ ಅಥವಾ ಮನೆಯ ಮುಂದಿನ ಖಾಲಿ ಸ್ಥಳದಲ್ಲಿ ಈ ಗಣೇಶ ವಿಗ್ರಹವನ್ನಿಟ್ಟು ಪ್ರತಿ ದಿನ ನೀರು ಹಾಕುವುದರಿಂದ ಐದಾರು ದಿನಗಳ ನಂತರ ಮೊಳಕೆ ಬರುತ್ತದೆ.
ಗಿಡ ಬೆಳೆದ ನಂತರ ನಮ್ಮ ಮೆನಯಲ್ಲಿ ಸುಂದರವಾದ ವಾತಾವರಣವನ್ನು ನೋಡಬಹುದೆಂದು ತಿಳಿಸಿದ್ದಾರೆ. ವರ್ಷದಲ್ಲಿ ಒಂದು ಬಾರಿಯಾದರೂ ಈ ಕಾರ್ಯವನ್ನ ಕೈಗೊಂಡರೆ ಪರಿಸರವನ್ನ ಬೆಳೆಸುವ ಮತ್ತು ಸಂರಕ್ಷಿಸುವ ಒಂದು ಸಣ್ಣ ಕೊಡುಗೆ ನೀಡಬಹುದು.
ನಾವು ಆರೋಗ್ಯಕರ ಜೀವನ ನಡೆಸಲು ಶುದ್ಧವಾದ ಗಾಳಿ, ನೀರು ಎಷ್ಟು ಉಪಯೋಗಕರವಾಗಿದೆ. ಇಷ್ಟೆಲ್ಲ ಉಪಯೋಗಳಿದ್ದರೂ ನಮ್ಮ ಜನ ಪಿಒಪಿ ಗಣೇಶ್ ವಿಗ್ರಹಗಳನ್ನ ಖರೀದಿ ಮಅಡುತ್ತಾರೆ ಎಂದು ಬೇಸರ ಮಾಡಿಕೊಂಡರು.
ಪಿಒಪಿ ಗಣೇಶ ವಿಗ್ರಹದಿಂದ ಜಲಮಾಲಿನ್ಯ ಉಂಟಾಗಿ ಮಾನವನ ಮೇಲಷ್ಟೆ. ಅಲ್ಲ ಪ್ರಾಣಿಗಳ ಮೇಲೂ ದುಷ್ಪಾರಿಣಮ ಬೀರಲಿದೆ. ಹೀಗಾಗಿ ಮಣ್ಣಿನ ಗಣೇಶ ಯಾವುದೇ ದುಷ್ಪಾರಿಣಾಮ ಬೀರುವುದಿಲ್ಲ.
ನಮ್ಮ ಸಂಸ್ಕೃತಿಯಲ್ಲಿ ವೃಕ್ಷಗಳಿಗೆ ದೇವತ್ವದ ಮಹತ್ವ ಕೊಡಲಾಗಿದೆ. ಇದನ್ನ ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದಿದ್ದಾರೆ ಸಿದ್ದಪ್ಪ ಸಂಗಶೆಟ್ಟಿ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?