Uncategorized
ಅಶೋಕ್ ಗೆಹ್ಲೋಟ್ ಸಹೋದರನ ಕಂಪೆನಿ ಮೇಲೆ ಇ.ಡಿ ರೇಡ್: ಮತ್ತೆ ಇಕ್ಕಟ್ಟಿನಲ್ಲಿ ಸಿಲುಕಿದ ರಾಜಸ್ಥಾನ ಸಿಎಂ

ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್ :
ರಸಗೊಬ್ಬರ ಹಗರಣ ಬೆಳಕಿಗೆ ಬರುತ್ತಿದ್ದಂತೆ ಜಾರಿ ನಿರ್ದೇಶನಾಲಯ ಸಿಎಂ ಅಶೋಕ್ ಗೆಹ್ಲೋಟ್ ಸೋದರನಿಗೆ ಸೇರಿದ ಮನೆ ಮೇಲೆ ದಾಳಿ ನಡೆದಿದೆ. ಪಶ್ಚಿಮ ಬಂಗಾಳ, ದೆಹಲಿ ಮತ್ತು ಗುಜರಾತ್ನಲ್ಲೂ ಜಾರಿ ನಿರ್ದೇಶನಾಲಯ ದಾಳಿ ನಡೆಸಿ ರಸಗೊಬ್ಬರ ಹಗರಣವನ್ನ ಬಯಲಿಗೆ ಎಳೆದಿದೆ.

ಕಳೆದ ಕೆಲವು ದಿನಗಳಿಂದ ರಾಜಸ್ಥಾನ ರಾಜಕೀಯದಲ್ಲಿ ದಿನಕೊಂದು ಬೆಳವಣಿಗೆ ಕಂಡು ಬರುತ್ತಿದೆ. ಸಚಿನ್ ಪೈಲೆಟ್ ಮತ್ತು ಅವರ 18 ಶಾಸಕರು ಬಂಡಾಯ ರಾಜಸ್ಥಾನ ರಾಜಕೀಯವನ್ನೆ ಅಲ್ಲೋಲ್ಲ ಕಲ್ಲೋಲ ಮಾಡಿದೆ.ಇದೇ ಸಮಯದಲ್ಲಿ ಜಾರಿ ನಿರ್ದೇರ್ಶನದ ದಾಳಿ ಅಶೋಕ್ ಗೆಹ್ಲೋಟ್ ಅವರನ್ನ ಇಕ್ಕಟಿಗೆ ಸಿಲುಕಿಸುವಂತೆ ಮಾಡಿದೆ.

ಅಶೋಕ್ ಗೆಹ್ಲೋಟ್ ಅವರ ಸಹೋದರ ಅಗ್ರಸೇನ್ ಗೆಹ್ಲೊಟ್ ಅವರ ರಸಗೊಬ್ಬರ ಕಂಪೆನಿ ಎಂಒಪಿ ಬೇರೆ ಬೇರೆ ಕಂಪೆನಿಗಳಿಗೆ ಮಾರಾಟದ ನಿಷೇಧವಿದ್ದರೂ ಅದನ್ನ ಉಲ್ಲಂಘಿಸಿ ರಸಗೊಬ್ಬರಗಳನ್ನ ಮಾರಾಟ ಮಾಡಿದೆ.
ಎಂಒಪಿಯನ್ನ ಆಮದು ಮಾಡಿಕೊಳ್ಳ ಹಕ್ಕು ಇಂಡಿಯನ್ ಪೊಟೇಶ್ ಲಿಮಿಟೆಡ್ ಮಾತ್ರ ಇದೆ. ಯಾಕಂದ್ರೆ ಈ ಕಂಪೆನಿ ರೈತರಿಗೆ ಸಬ್ಸಿಡಿ ರೂಪದಲ್ಲಿ ರಸಗೊಬ್ಬರಗಳನ್ನ ನೀಡುತ್ತಿದೆ.
2007ರಿಂದ 2009ರ ಅವಧಿಯಲ್ಲಿ ಅಗ್ರ ಸೇನ ಗೆಹ್ಲೋಟ್ ಅವರ ಕಂಪೆನಿ ಅನುಪಮ್, ಎಂಒಪಿಯನ್ನ ಸಬ್ಸಿಡಿ ದರಕ್ಕೆ ಪಡೆದು ಮಲೇಷಿಯಾ, ಸಿಂಗಾಪುರಕ್ಕೆ ರಫ್ತು ಮಾಡಿದ್ದರು. ಇದು 2013-14 ಕಂದಾಯ ಇಲಾಖೆಯ ಗುಪ್ತಚರ ಇಲಾಖೆಯಿಂದ ಬೆಳಕಿಗೆ ಬಂದಿತ್ತು.ಆಗ ವಿಚಾರಿಸಿದಾಗ ಅಗ್ರಸೇನಾ ಗೆಹ್ಲೋಟ್ ಮಧ್ಯವರ್ತಿಗಳ ಮೇಲೆ ಗೂಬೆ ಕೂರಿಸಿ ಜಾರಿಕೊಂಡಿದ್ದರು.
















