ಜೀವನ ಶೈಲಿ : ನಮ್ಮ ಉತ್ತಮ ಆರೋಗ್ಯವನ್ನು ನಿರ್ವಹಣೆ ಮಾಡುವಲ್ಲಿ ನಾವು ತಿನ್ನುವ ತಿಂಡಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಯಾರು ಅಷ್ಟೇ ಬೆಳಗಿನ ಬ್ರೇಕ್ ಫಾಸ್ಟ್ ಮಿಸ್ ಮಾಡಬೇಡಿ.
ಬೆಳಗ್ಗೆ ಎದ್ದ ತಕ್ಷಣ ನಮ್ಮ ಖಾಲಿ ಹೊಟ್ಟೆಗೆ ಅಲ್ಪ ಸ್ವಲ್ಪ ಆಹಾರ ನೀಡಿದರೆ ಅದು ಕೂಡ ಖುಷಿಯಾಗುತ್ತದೆ. ನಮ್ಮ ದೇಹದ ಎಲ್ಲಾ ಅಂಗಾಗಗಳು ಚೆನ್ನಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಆದರೆ ಖಾಲಿ ಹೊಟ್ಟೆಗೆ ಕೊಡುವ ಆಹಾರ ಆರೋಗ್ಯಕರವಾಗಿರಬೇಕು. ನೀರು ಕೂಡ ತುಂಬಾ ತುಂಬಾ ಆರೋಗ್ಯಕರ.
ಪ್ರತಿ ದಿನ ಬೆಳಗ್ಗೆ ಬ್ರೇಕ್ ಫಾಸ್ಟ್ ಬದಲು ನೀರು ಕುಡಿದು ಸುಮ್ಮನಾಗಲು ಶಾಧ್ಯವಿಲ್ಲ. ಹೀಗಾಗಿ ಬೇಳಗಿನ ಸಮಯದಲ್ಲಿ ತಿಂಡಿ ತಿನ್ನುವುದನ್ನ ಮೆಇಬೇಡಿ. ಬೇರೆ ಬೇರೆ ಕಾರಣಗಳಿಗಾಗಿ ತಿಂಡಿ ತಿನ್ನದೇ ಬಿಟ್ಟರೆ ಏನಾಗುತ್ತದೆ, ಮಧ್ಯಾಹ್ನ ಒಂದೇ ಸರಿ ಊಟ ಮಾಡಿದರಾಯಿತು ಎಂದು ತಿಳಿದುಕೊಂಡು ಪ್ರತಿದಿನ ಇದೇ ಅಭ್ಯಾಸ ಮಾಡಿಕೊಂಡರೆ ಈ ಕೆಳಗಿನ ತರಹ ಆರೋಗ್ಯದ ಲಕ್ಷಣಗಳನ್ನು ನೀವು ಕಾಣಬಹುದು.
ಸಮತೋಲನದ ಆಹಾರ ಪದ್ಧತಿಯನ್ನು ನಾವು ಅನುಸರಿಸಿದರೆ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಎಲ್ಲಾ ಬಗೆಯ ಪೈಷ್ಟಿಕಾಂಶಗಳು ನಮಗೆ ಸುಲಭವಾಗಿ ಸಿಗುತ್ತವೆ. ವಿಟಮಿನ್ ಮತ್ತು ಖನಿಜಾಂಶಗಳು ಸೇರಿದಂತೆ ಎಲ್ಲಾ ಆಹಾರ ನಮ್ಮ ದೇಹಕ್ಕೆ ಬೇಕು.
ಬೆಳಗ್ಗೆ ತಿಂಡಿ ತಿನ್ನುವುದನ್ನು ಬಿಡುವುದರಿಂದ ಇವೆಲ್ಲವೂ ನಮಗೆ ಮಿಸ್ ಆಗುತ್ತದೆ. ಇದರಿಂದ ನಮ್ಮ ಶುಗರ್ ಲೆವೆಲ್ ತುಂಬಾ ಕಡಿಮೆಯಾಗಿ ಬಿಡುತ್ತದೆ. ಸಂಶೋಧನೆ ಹೇಳುವಂತೆ ಶುಗರ್ ಇಲ್ಲದೇ ಇರುವವರಿಗೂ ಕೂಡ ಇದರಿಂದ ಸಕಕ್ಕರೆ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ.
ಬೆಳಗಿನ ಸಮಯದ ಬ್ರೇಕ್ ಫಾಸ್ಟ್ ನಿರಂತರವಾಗಿ ಮಿಸ್ ಮಾಡುವವರಿಗೆ ಮಾನಸಿಕವಾಗಿ ಹಲವಾರು ಬದಲಾವಣೆಗಳು ಉಂಟಾಗುತ್ತದೆ.
ನಮ್ಮ ಬ್ಲಡ್ ಶುಗರ್ ಲೆವೆಲ್ ಅನ್ನು ಕಡಿಮೆ ಮಾಡುವುದು ಮಾತ್ರವಲ್ಲದೇ ಇಡೀ ದಿನ ಮಾನಸಿಕ ಬದಲಾವಣೆಗಳನ್ನು ತರುತ್ತದೆ. ಅಂದರೆ ನಾವು ತಿನ್ನುವ ತಿಂಡಿ ಬೆಳಗ್ಗೆ ಮಿಸ್ ಆದ್ರೆ ಅದರಿಂದ ಮೆದುಳಿನ ಕಾರ್ಯ ಚಟುವಟಿಕೆಯ ಮೇಲೆ ಕೂಡ ಪ್ರಭಾವ ಉಂಟಾಗುತ್ತದೆ.
ಸಾಮಾನ್ಯವಾಗಿ ನೀವು ಬೇಕರಿ ಆಹಾರಗಳನ್ನು ತಿನ್ನುತ್ತೀರಿ. ಇದರಿಂದ ನಿಮ್ಮ ಹೊಟ್ಟೆ ಹಸಿವು ಕಡಿಮೆ ಆದಂತೆ ಆಗಿ ಮತ್ತಷ್ಟು ಜಾಸ್ತಿ ಆಗುತ್ತದೆ. ಬೆಳಗಿನ ಸಮಯದ ಬ್ರೇಕ್ ಫಾಸ್ಟ್ ಪ್ರೋಟೀನ್ ಭರಿತವಾಗಿದ್ದರೆ, ನಮ್ಮ ಹೊಟ್ಟೆ ಕೂಡ ತುಂಬುತ್ತದೆ ಮತ್ತು ಇಡೀ ದಿನ ಶಕ್ತಿ ಕೂಡ ಇರುತ್ತದೆ.
ಬೆಳಗ್ಗೆ ತಿಂಡಿ ತಿನ್ನುವುದನ್ನು ಬಿಡುವುದರಿಂದ ಶುಗರ್ ಲೆವೆಲ್ ಕಡಿಮೆಯಾಗಿ ಅದು ಹೃದಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಹೆಚ್ಚು ಕಾಲ ನಿಮ್ಮ ಹೃದಯ ಆರೋಗ್ಯವಾಗಿರಬೇಕು ಎಂದರೆ ನೀವು ಬೆಳಗಿನ ಸಮಯದಲ್ಲಿ ಆರೋಗ್ಯಕರವಾದ ತಿಂಡಿ ತಿನ್ನಬೇಕು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?