Cinema : ಕನ್ನಡ ಸಿನಿಮಾ ಇಂಡಸ್ಟ್ರಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಪ್ರಕಾಶ್ ರಾಜ್ ಹೆಚ್ಚಿನ ಮನ್ನಣೆ ಗಳಿಸಿದ್ದು, ತಮಿಳು, ತೆಲುಗು ಸಿನಿಮಾಗಳಿಂದ ಹಿಂದಿಯಲ್ಲೂ ತಮ್ಮದೇ ಚಾಪು ಮೂಡಿಸಿದ್ದಾರೆ. 90ರ ದಶಕದಲ್ಲಿ ಸಿನಿ ಪ್ರಿಯರಿಗೆ ವಿಲನ್ ಪಾತ್ರ ಅಂದ್ರೆ ಪ್ರಕಾಶ್ ರಾಜ್ ಅವರೇ ಸೂಕ್ತ ಎನ್ನುತ್ತಿದ್ದರು. ಅಷ್ಟೇ ಅಲ್ಲದೇ ಅನೇಕ ಒಳ್ಳೆಯ ಅಪ್ಪನಾಗಿ ತೆರೆ ಮೇಲೆ ಕಾಣಿಸಿಕೊಂಡು ಅಭಿಮಾನಿಗಳ ಮನಗೆದ್ದರು. ಹೀರೋ ಆಗಲು ಸೈ, ಪೋಷಕ ಪಾತ್ರಗಳಿಗೂ ಜೈ ಎಂದ ಪ್ರಕಾಶ್ ರಾಜ್, ದುಡ್ಡಿಗಾಗಿಯೂ ಕೆಲ ಸಿನಿಮಾಗಳನ್ನು ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಫಿಲ್ಮ್ ಕಂಪಾನಿಯನ್ ಸೌತ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಕಾಶ್ ರಾಜ್, ಹಣಕ್ಕಾಗಿ ಸ್ಟುಪಿಡ್ ಸಿನಿಮಾಗಳನ್ನೂ ಕೂಡ ಮಾಡಿದ್ದೇನೆ ಎಂದಿದ್ದಾರೆ. ಅನೇಕರು ದುಡ್ಡಿಗಾಗಿಯೇ ಸಿನಿಮಾ ಮಾಡ್ತಾರೆ ಆದ್ರೆ ಎಲ್ಲರೂ ಒಪ್ಪಿಕೊಳ್ಳೋದಿಲ್ಲ. ಆದ್ರೆ ಪ್ರಕಾಶ್ ರಾಜ್ ಆಗಲ್ಲ. ನೇರ ಹಾಗೂ ದಿಟ್ಟ ಮಾತಿನಿಂದಲೇ ಅಭಿಮಾನಿಗಳಿಗೆ ಇಷ್ಟವಾಗ್ತಾರೆ.
ಈ ಸಿನಿಮಾ ಮಾಡಿದ್ರೆ ನನಗೆ ಹೆಚ್ಚು ಸಿಗುತ್ತೆ ಅಂತ ಯಾವಾಗಲಾದ್ರೂ ಯೋಚನೆ ಮಾಡಿದ್ರಾ ಎಂಬ ಆ್ಯಂಕರ್ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರಾಜ್, ನಾನು ಹಣಕ್ಕಾಗಿ ಸ್ಟುಪಿಡ್ ಸಿನಿಮಾಗಳನ್ನು ಮಾಡಿದ್ದೂ ಇದೆ. ನನಗೆ ಬ್ಯಾಲೆನ್ಸ್ ಮಾಡುವ ಅಗತ್ಯವಿಲ್ಲ. ಕಮರ್ಷಿಯಲ್ ಚಿತ್ರಗಳನ್ನು ನಾನು ಹೇಟ್ ಮಾಡೋದಿಲ್ಲ. ಅವುಗಳಿಗೂ ದೊಡ್ಡ ಪ್ರೇಕ್ಷಕ ವರ್ಗ ಇದೆ. ಎಲ್ಲರೂ ಎಷ್ಟು ಶ್ರಮ ಹಾಕುತ್ತಾರೋ ಅಷ್ಟೇ ಶ್ರಮವನ್ನು ಅವರೂ ಹಾಕುತ್ತಾರೆ ಎಂದ್ರು. ಕೆಲ ಸಿನಿಮಾಗಳಲ್ಲಿ ನನ್ನನ್ನು ವಿಲನ್ ಆಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ನನ್ನ ಮನಸ್ಸು ಎಂಥಾ ಸಿನಿಮಾ ಮಾಡ್ತೀಯಾ ಎನ್ನುತ್ತದೆ. ನನಗೂ ಹಣ ಬೇಕಲ್ಲಾ ಎಂದು ಪ್ರಕಾಶ್ ರಾಜ್ ಹೇಳಿದ್ರು.
ಹಣಕ್ಕಾಗಿ ಅಷ್ಟೇ ಅಲ್ಲ ಕಥೆ ಇಷ್ಟವಾಗಿದ್ರೆ ಪ್ರಕಾಶ್ ರೈ ಸಿನಿಮಾ ಫ್ರೀ ಆಗಿ ಮಾಡಿರೋದಾಗಿ ಹೇಳಿದ್ರು. ಸಿನಿಮಾನ ಉಚಿತವಾಗಿ ಏಕೆ ಮಾಡ್ತೀಯಾ ಎಂದು ಅನೇಕರು ನನ್ನನ್ನು ಕೇಳಿದ್ದಾರೆ. ಒಂದು ಸಿನಿಮಾ ಮಾಡುವುದರಿಂದ ಸಿಗುವ ರಿವಾರ್ಡ್ಗಳು ಅವರಿಗೆ ಕಾಣುವುದಿಲ್ಲ ಎಂದು ಪ್ರಕಾಶ್ ರೈ ಹೇಳಿದ್ರು. ಮರದ ಸುತ್ತುತ್ತಾ ಡ್ಯಾನ್ಸ್ ಮಾಡೋದನ್ನು ಮಿಸ್ ಮಾಡಿಕೊಳ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರಾಜ್, ಅದು ಇಷ್ಟ ಆಗುವುದಿಲ್ಲ ಎಂದರ್ಥವಲ್ಲ. ನನಗೆ ಕಂಫರ್ಟ್ ಇಲ್ಲ ಪ್ರಕಾಶ್ ರೈ ಎಂದಿದ್ರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?