ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ, ದೆಹಲಿ ತಿಹಾರ್ ಜೈಲಿನಲ್ಲಿರೋ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಜಾಮೀನು ಅರ್ಜಿ ಮುಕ್ತಾಯವಾಗಿದೆ. ಆದ್ರೆ, ದೆಹಲಿ ಹೈಕೋರ್ಟ್ ತೀರ್ಪು ಪ್ರಕಟಿಸದೆ, ತೀರ್ಪನ್ನ ಕಾಯ್ದಿರಿಸಿದೆ. ವಿಶೇಷ ಅಂದ್ರೆ, ಯಾವಾಗ ತೀರ್ಪು ಬರುತ್ತೆ ಎಂಬುದನ್ನೂ ಕೂಡ ಹೇಳಿಲ್ಲ.
ಜಾಮೀನು ಕೊಡಬೇಕಾ..? ಬೇಡವೋ ಎಂಬ ವಿಚಾರವಾಗಿ ವಾದ-ಪ್ರತಿವಾದಗಳೂ ಜೋರಾಗಿಯೇ ನಡೆದವು. ಇಡಿ ಪರ ವಕೀಲ ಕೆ.ಎಂ ನಟರಾಜ್ ವಾದ ಮಂಡಿಸಿ, ಈ ಪ್ರಕರಣ ಗಂಭೀರವಾಗಿದ್ದು ಜಾಮೀನು ಸಿಕ್ಕರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ, ಡಿಕೆಶಿಗೆ ಜಾಮೀನು ನೀಡದಂತೆ ಕೋರಿದ್ದರು. ಆದ್ರೆ, ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಪ್ರತಿವಾದ ಮಂಡಿಸಿ, ಜಾಮೀನು ನೀಡುವಂತೆ ಮನವಿ ಮಾಡಿದ್ದರು
ವಿಚಾರಣೆ ಸಂದರ್ಭದಲ್ಲಿ ಇಡಿ ಪರ ವಕೀಲ ನಟರಾಜ್, ಡಿಶಿಕೆ ಅಕ್ರಮ ಆಸ್ತಿ ಗಳಿಕೆಯಲ್ಲಿ ವಿಶ್ವದಾಖಲೆ ಮಾಡಿದ್ದಾರೆ. ಪ್ರಕರಣ ಹಲವು ಆಯಾಮಗಳ ಕುರಿತಾದ ವಿವರಗಳನ್ನು ನ್ಯಾಯಮೂರ್ತಿಗಳ ಮುಂದೆ ತೆರೆದಿಟ್ಟರು. ಡಿಕೆಶಿ ಪ್ರಕರಣ ದೇಶದ ಆರ್ಥಿಕತೆಗೆ ಹೊಡೆತ ನೀಡಿದ ಪ್ರಕರಣವಾಗಿದ್ದು, ಇದರಲ್ಲಿ ಆಳವಾದ ಷಡ್ಯಂತ್ರ ನಡೆದಿದೆ ಎಂದು ಕೋರ್ಟ್ಗೆ ತಿಳಿಸಿದರು.
ಇಡಿ ತನಿಖೆಯಲ್ಲಿ ಡಿಕೆಶಿ ಬಳಿ 300 ಕಡೆಗಳಲ್ಲಿ ಆಸ್ತಿ ಇರುವುದು ಪತ್ತೆಯಾಗಿದೆ. ಆದರೆ, ಇದಕ್ಕೆ ಸೂಕ್ತವಾದ ದಾಖಲೆಗಳಿಲ್ಲ. ಕೃಷಿಯಿಂದ ಆಸ್ತಿ ಸಂಪಾದನೆ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಕೃಷಿಯಿಂದ ಇಷ್ಟು ಪ್ರಮಾಣದಲ್ಲಿ ಹಣ ಸಂಪಾದನೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ವಕೀಲರು, 20 ವರ್ಷಗಳಲ್ಲಿ ಕೃಷಿಯಿಂದ ಗಳಿಕೆಯಾದ ಆದಾಯ 1 ಕೋಟಿ 37 ಲಕ್ಷ ಮಾತ್ರ ಎಂಬ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದರು.
ಇಡಿ ವಕೀಲ ನಟರಾಜ್ ವಿರುದ್ಧ ಜಡ್ಜ್ ಕಿಡಿ..!
ನಿಗದಿಯಂತೆ ಮಧ್ಯಾಹ್ನ 3.30ಕ್ಕೆ ನ್ಯಾಯಮೂರ್ತಿಗಳು ಕೋರ್ಟ್ ಹಾಲ್ಗೆ ಆಗಮಿಸಿದ್ರು. ಆದ್ರೆ, ಇಡಿ ಪರ ವಕೀಲರೇ ಕೋರ್ಟ್ನಲ್ಲಿ ಇರಲಿಲ್ಲ. ಇದರಿಂದ ಕೆಂಡಾಮಂಡಲರಾದ ನ್ಯಾಯಮೂರ್ತಿಗಳು, ಇದೇನು ಆಟ ಅಂದ್ಕೊಂಡ್ಡಿದ್ದೀರಾ. ನ್ಯಾಯಾಲಯವನ್ನೂ ಹಗುರವಾಗಿ ತೆಗೆದುಕೊಳ್ಳಬೇಡಿ ಎಂದು ಇಡಿ ವಕೀಲರ ಪ್ರತಿವಾದ ಇಲ್ಲದೆ ಆದೇಶ ಕಾಯ್ದಿರಿಸಿ, ತಮ್ಮ ಕೊಠಡಿಗೆ ಹೋದ್ರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?