Featured
ನಾವು ರಾಜೀನಾಮೆ ಕೊಟ್ಟಿದ್ದು ಥರ್ಡ್ ರೇಟ್, ಚೀಪ್ ರೇಟ್ ರಾಜಕಾರಣದ ವಿರುದ್ಧ : ಸಿದ್ದು, HDK ವಿರುದ್ಧ ವಿಶ್ವನಾಥ್ ಕೆಂಡ

ಮೈಸೂರು : ಉಪ ಚುನಾವಣೆ ಘೋಷಣೆ ಆಗ್ತಿದ್ದಂತೆ ಅನರ್ಹ ಶಾಸಕರು ಫುಲ್ ಆ್ಯಕ್ಟೀವ್ ಆಗಿದ್ದಾರೆ. ಮೈಸೂರಿನಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿ ಮಾತ್ನಾಡಿದ ಅನರ್ಹ ಶಾಸಕ ಹೆಚ್.ವಿಶ್ವನಾಥ್, ನಾವು ರಾಜೀನಾಮೆ ಕೊಟ್ಟಿದ್ದು ಅಧಿಕಾರಕ್ಕಾಗಿ ಅಲ್ಲ. ರಾಜ್ಯದಲ್ಲಿ ನಡೆಯುತ್ತಿದ್ದ ರಾಕ್ಷಸ ರಾಜಕಾರಣದಿಂದ. ಥರ್ಡ್ ರೇಟ್, ಚೀಪ್ ರೇಟ್ ರಾಜಕಾರಣದ ವಿರುದ್ಧ ನಾವು ರಾಜೀನಾಮೆ ನೀಡಿದ್ದು ಎಂದು ಆಕ್ರೋಶ ಹೊರ ಹಾಕಿದ್ದಾರೆ.
ದುಡ್ಡಿಗಾಗಿ ಮಾರಿಕೊಂಡ್ರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿರೋದು ಸರಿಯಲ್ಲ. ಎಂಟಿಬಿ ನಾಗರಾಜ್ ಪಕ್ಷದಲ್ಲಿ ಹೇಗಿದ್ದರೂ ಅನ್ನೋದು ಸಿದ್ದರಾಮಯ್ಯಗೆ ಗೊತ್ತಿದೆ. ಹಣಕ್ಕಾಗಿ ಮಾರಿಕೊಂಡ್ರು ಎನ್ನುವ ಸಿದ್ದು ಮಾತು ಸರಿಯಲ್ಲ ಎಂದು ವಿಶ್ವನಾಥ್ ಹೇಳಿದ್ರು.
ವಿಶ್ವನಾಥ್ ವಿಷ ಇಟ್ರು ಅಂತ ಯಾರೋ ಹೇಳಿದ್ರು. ಆದ್ರೆ, ಆ ಒಂದು ಕುಟುಂಬಕ್ಕೆ ವಿಷ ಹಾಕಿದ್ದು ಯಾರು..? ಆ ಕುಟುಂಬ ಇವತ್ತು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ ಎಂದು ವಿಶ್ವನಾಥ್ ಆರೋಪಿಸಿದ್ರು. ಆ ಒಂದು ಕುಟುಂಬ ಯಾವುದು ಅನ್ನೋದನ್ನ ಮಾತ್ರ ವಿಶ್ವನಾಥ್ ಹೇಳಲಿಲ್ಲ. ಇದೇ ವೇಳೆ, ಮೈಸೂರು ಪ್ರೆಸ್ ಕ್ಲಬ್ಗೆ ಬನ್ನಿ, ಮಾರಾಟದ ಬಗ್ಗೆ ಚರ್ಚೆ ಮಾಡೋಣ ಎಂದು ಸಾ.ರಾ. ಮಹೇಶ್ಗೆ ವಿಶ್ವನಾಥ್ ಸವಾಲು ಹಾಕಿದ್ರು.
ಉಪಚುನಾವಣೆ ಘೋಷಣೆ ಆಗಿರೋದ್ರಿಂದ ಆತಂಕ ಪಡುವ ಅಗತ್ಯವಿಲ್ಲ. ಸುಪ್ರೀಂಕೋರ್ಟ್ ನಮಗೆ ನ್ಯಾಯ ನೀಡುವ ಭರವಸೆ ಇದೆ, ಹೀಗಾಗಿ ಆತಂಕ, ಹೆದರುವ ಅಗತ್ಯವಿಲ್ಲ ಎಂದು ವಿಶ್ವನಾಥ್ ಹೇಳಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?