Featured
ಅನರ್ಹರಿಗೆ ಸುಪ್ರೀಂಕೋರ್ಟ್ ಶಾಕ್ : ಎಲೆಕ್ಷನ್ಗೆ ನಿಲ್ಲೋಕೆ ಆಗಲ್ವಾ..?

ನವದೆಹಲಿ/ಬೆಂಗಳೂರು : ಈ ಮೊದಲೇ ಹೇಳಿದಂತೆ 17 ಅನರ್ಹ ಶಾಸಕರ ಸ್ಥಿತಿ ಡೋಲಾಯಮಾನವಾಗೋ ಎಲ್ಲಾ ಲಕ್ಷಣಗಳು ಕಾಣ್ತಿವೆ. ಯಾಕಂದ್ರೆ, ಡಿಸೆಂಬರ್ನಲ್ಲಿ ಕರ್ನಾಟಕದಲ್ಲಿ 17 ಕ್ಷೇತ್ರಗಳಿಗೆ ಬೈ ಎಲೆಕ್ಷನ್ ಇದೆ. ಈ ಉಪ ಚುನಾವಣೆಗೆ ತಡೆ ನೀಡುವಂತೆ ಅನರ್ಹರು ಸಲ್ಲಿಸಿದ್ದ ಅರ್ಜಿಗೆ ಸುಪ್ರೀಂಕೋರ್ಟ್ ಕ್ಯಾರೆ ಎಂದಿಲ್ಲ. ಚುನಾವಣೆಗೆ ತಡೆ ನೀಡುವಂತೆ ನಿರ್ದೇಶನ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಚುನಾವಣೆಗೆ ತಡೆ ನೀಡಲು ನಿರ್ದೇಶನ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿರೋದ್ರಿಂದ ಅನರ್ಹರಿಗೆ ಈಗ ಢವ ಢವ ಶುರುವಾಗಿದೆ. ಅಲ್ಲದೆ, ಮುಂದಿನ ನಾಲ್ಕು ದಿನ ಸುಪ್ರೀಂಕೋರ್ಟ್ ರಜೆ ಇದೆ. ಅನರ್ಹರ ಅರ್ಜಿ ವಿಚಾರಣೆ ಮತ್ತೆ ಬುಧವಾರ ಬರಲಿದೆ. ಅಲ್ಲಿವರೆಗೆ ಮುಂದೇನು ಅನ್ನೋದು ಗೊತ್ತಿಲ್ಲ. ಇದರ ಜೊತೆ ಇದೇ ತಿಂಗಳ 17ರೊಳಗೆ ಅಯೋಧ್ಯೆ ತೀರ್ಪು ಬರಲಿದೆ. ಹೀಗಾಗಿ, ಅಯೋಧ್ಯೆ ತೀರ್ಪಿನ ಮುಂದೆ ಅನರ್ಹರ ಪ್ರಕರಣ ತುಂಬಾ ಚಿಕ್ಕದಾಗಿ ಕಾಣುತ್ತೆ.
ಈ ಮಧ್ಯೆ, ಮುಂದಿನ ವಾರದಿಂದ ನಾಮಿನೇಷನ್ ಪ್ರಕ್ರಿಯೆ ಶುರುವಾಗಲಿದ್ದು, ನಾಮಿನೇಷನ್ ಹಾಕಬೇಕೋ..? ಬೇಡ್ವೋ..? ಚುನಾವಣೆಗೆ ನಿಲ್ಲಬಹುದೋ..? ಇಲ್ಲವೋ ಅನ್ನೋ ಗೊಂದಲದಲ್ಲೇ ಅನರ್ಹರು ಕಾಲ ಕಳೆಯುವಂತಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?