Featured
ಅನರ್ಹ ಶಾಸಕರಿಗೆ ಸೋಮವಾರದವರೆಗೆ ಢವಢವ : ವಿಚಾರವಣೆಯಿಂದ ನ್ಯಾಯಮೂರ್ತಿ ಹಿಂದೆ ಸರಿದಿದ್ದು ಯಾಕೆ..?

ನವದೆಹಲಿ : 17 ಅನರ್ಹ ಶಾಸಕರಿಗೆ ಸದ್ಯಕ್ಕೆ ರಿಲೀಫ್ ಸಿಗೋ ಲಕ್ಷಣಗಳು ಕಾಣ್ತಿಲ್ಲ. ಇವತ್ತು ಸುಪ್ರೀಂಕೋರ್ಟ್ನಲ್ಲಿ ಅರ್ನಹ ಶಾಸಕರ ಪ್ರಕರಣ ವಿಚಾರಣೆ ನಡೆಯಬೇಕಿತ್ತು. ಆದ್ರೆ, ನ್ಯಾಯ ಪೀಠದಲ್ಲಿದ್ದ ನ್ಯಾಯಮೂರ್ತಿ ಶಾಂತನಗೌಡರ್, ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ್ರು. ಇದರಿಂದಾಗಿ ಪ್ರಕರಣದ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ ಆಯ್ತು.
ನ್ಯಾಯಮೂರ್ತಿ ಶಾಂತನಗೌಡರ್ ಕರ್ನಾಟಕ ಮೂಲದವರು. ಪೂರ್ಣ ಹೆಸರು ಮೋಹನ್ ಶಾಂತನಗೌಡರ್. ಕರ್ನಾಟಕದ ಹಾವೇರಿ ಜಿಲ್ಲೆಯವರು. ಇನ್ನೂ ಪ್ರಮುಖವಾದ ವಿಚಾರ ಅಂದ್ರೆ, ಅನರ್ಹ ಶಾಸಕರಾಗಿರೋ ಬಿ.ಸಿ. ಪಾಟೀಲ್ ಸಂಬಂಧ. ಹೀಗಾಗಿ, ಈ ಪ್ರಕರಣವನ್ನ ವಿಚಾರಣೆ ನಡೆಸುವುದು ಸರಿಯಲ್ಲ ಎಂದ, ನ್ಯಾಯಮೂರ್ತಿ ಶಾಂತನಗೌಡರ್, ಹಿಂದೆ ಸರಿದರು.
ಈಗ ನ್ಯಾಯಮೂರ್ತಿ ಶಾಂತನಗೌಡರ್, ಪ್ರಕರಣದಿಂದ ಹಿಂದೆ ಸರಿದಿರೋದ್ರಿಂದ ಅನರ್ಹ ಶಾಸಕರ ಪ್ರಕರಣ ಹೊಸ ಪೀಠದಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಒಟ್ಟಿನಲ್ಲಿ, 17 ಅನರ್ಹ ಶಾಸಕರ ರಾಜಕೀಯ ಪರಿಸ್ಥಿತಿ ಡೋಲಾಯಮಾನವಾಗಿದೆ. ಏನಾಗುತ್ತೋ ಏನೋ ಅನ್ನೋ ರೀತಿಯಲ್ಲಿ ಅನರ್ಹರು ಚಿಂತೆಗೀಡಾಗಿದ್ದಾರೆ. ಸೋಮವಾರದವರೆಗೆ ಮತ್ತಷ್ಟು ಟೆನ್ಷನ್ನಲ್ಲೇ ಇರಬೇಕಿದೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















