International News
ಚೀನಾದಲ್ಲಿ ಶುರು ‘ಡಿಲೀಟ್ ಎ’ ಅಭಿಯಾನ : ಹಿಂದಿನ ಸೀಕ್ರೆಟ್ ಏನು ಗೊತ್ತಾ..?

ಚೀನಾ : ಮಾಹಿತಿ ತಂತ್ರಜ್ಞಾನ ರಂಗದಲ್ಲಿ ಸ್ವಾವಲಂಬನೆ ಸಾಧಿಸಲು ಚೀನಾ ‘ಡಿಲೀಟ್ ಎ’ ಅಭಿಯಾನ ಶುರು ಮಾಡಿದೆ. ಡಿಲೀಟ್ ಅಮೆರಿಕ ಎಂಬುದೇ ‘ಡಿಲೀಟ್ ಎ’ ಅಭಿಯಾನದ ಉದ್ದೇಶವಾಗಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನು ಆದೇಶ 79 ಎಂದು ಕರೆಯಲಾಗುತ್ತದೆ ಎಂದು ಹೇಳಲಾಗಿದೆ.
ಈ ಆದೇಶವನ್ನು ಚೀನಾದ ಅತ್ಯುನ್ನತ ಅಧಿಕಾರಿಗಳಿಗೆ ತೋರಿಸಲಾಗಿದ್ದು, ಆದೇಶ ಪ್ರತಿಗಳನ್ನು ನಕಲು ಮಾಡಲು ಕೂಡ ಅವಕಾಶ ಮಾಡಿಕೊಟ್ಟಿಲ್ಲವಂತೆ. ‘ಡಿಲೀಟ್ ಎ’ ಅಭಿಯಾನದಡಿ ಚೀನಾ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಅಮೆರಿಕ ಮೂಲದ ಡೆಲ್, ಹೆಚ್ ಪಿ, ಐಬಿಎಂ, ಸಿಸ್ಕೋ ಸೇರಿ ಯಾವುದೇ ಕಂಪನಿಯ ಕಂಪ್ಯೂಟರ್ ಹಾರ್ಡ್ ವೇರ್ ಕೊಂಡು ಕೊಳ್ಳದಂತೆ ನಿಷೇಧ ಹೇರಲಾಗಿದೆ. ಈಗಾಗಲೇ ಇದರ ಬಿಸಿ ಅಮೆರಿಕ ಮೂಲದ ದೊಡ್ಡ ಕಂಪನಿಗಳಿಗೆ ತಗುಲಿದೆ. 2027ರ ವೇಳೆಗೆ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಚೀನಾ ಈ ನಿರ್ಧಾರಕ್ಕೆ ಬಂದಿದೆ.
ಚೀನಾ ಅಮೆರಿಕ ಮೂಲದ ಹಾರ್ಡ್ ವೇರ್ ನಿಷೇಧ ಮಾಡಿದ್ದರೂ, ಸಾಫ್ಟ್ ವೇರ್ ವಲಯದಲ್ಲಿ, ಸೆಮಿ ಕಂಡಕ್ಟರ್ ಉತ್ಪಾದನೆ ವಲಯದಲ್ಲಿ ಸ್ವಾವಲಂಬನೆ ಸಾಧಿಸುವುದು ಕಷ್ಟವಾಗಿದೆ. ಏಕೆಂದರೆ ಇಡೀ ಜಗತ್ತಿನಲ್ಲಿ ನೆದರ್ ಲೆಂಡ್ ಮೂಲದ ಒಂದೇ ಒಂದು ಕಂಪನಿ ಸೆಮಿ ಕಂಡಕ್ಟರ್ ಉತ್ಪಾದನಾ ಯಂತ್ರಗಳನ್ನು ತಯಾರಿಸುತ್ತದೆ. ಚೀನಾ ಈಗಾಗಲೇ ರಕ್ಷಣಾ ವಲಯದಲ್ಲಿ, ಬಾಹ್ಯಾಕಾಶ ಜಗತ್ತಿನಲ್ಲಿ ಸ್ವಾವಲಂಬನೆ ಸ್ಥಾಪಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಹೀಗೆಂದ ಮಾತ್ರಕ್ಕೆ ಎಲ್ಲ ವಲಯಗಳಲ್ಲಿ ಸ್ವಾವಲಂಬನೆ ಸ್ಥಾಪಿಸುವುದು ಕಷ್ಟ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಆಹಾರ ಮತ್ತು ಎಣ್ಣೆ ಕಾಳುಗಳ ಉತ್ಪಾದನೆಯಲ್ಲಿಯೂ ಸ್ವಾವಲಂಬನೆ ಸ್ಥಾಪಿಸಲು ಚೀನಾ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಸೆಮಿ ಕಂಡಕ್ಟರ್ ವಲಯದಲ್ಲಿ ಬೇರಾವುದೇ ದೇಶ ಅಮೆರಿಕಕ್ಕಿಂತ ಅತ್ಯುನ್ನತ ತಂತ್ರಜ್ಞಾನ ಬಳಸದಂತೆ ಅಮೆರಿಕ ಏಕಸ್ವಾಮ್ಯತೆಯನ್ನು ಸಾಧಿಸಿದೆ. ಇಷ್ಟಾದರೂ ಇತ್ತೀಚಿಗಷ್ಟೇ ಚೀನಾ ಮೂಲದ ಹುವಾವೇ ಕಂಪನಿ 7 ಎನ್ ಎಂ ಮೈಕ್ರೋ ಪ್ರೊಸೆಸರ್ ಅಭಿವೃದ್ಧಿ ಮಾಡಿದೆ. ಇದು ಅಮೆರಿಕದ ಹಲವು ತಜ್ಞರಿಗೆ ಅಚ್ಚರಿ ತರಿಸಿದೆ. ಇದಾದ ಬಳಿಕ ಸೆಮಿ ಕಂಡಕ್ಟರ್ ವಲಯದಲ್ಲಿ ಅಮೆರಿಕ ಬಿಗಿ ಹಿಡಿತ ಸಾಧಿಸಲು ಹಲವು ತಂತ್ರಗಳನ್ನು ರೂಪಿಸಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?