ಟಾಪ್ ನ್ಯೂಸ್
ಕರ್ನಾಟಕ ಬಂದ್ ಇಲ್ಲ.. ಇಲ್ಲ.. ಇಲ್ಲ : ಬಂದ್ ವಾಪಸ್ ಪಡೆದ ವಾಟಾಳ್ ನಾಗರಾಜ್

ರೈಸಿಂಗ್ ಕನ್ನಡ :
ಬೆಂಗಳೂರು : ಡಿಸೆಂಬರ್ 31ರಂದು ನಡೆಸಲು ಉದ್ದೇಶಿಸಿದ್ದ ಕರ್ನಾಟಕ ಬಂದ್ ವಾಪಸ್ ಪಡೆಯೋದಾಗಿ ವಾಟಾಳ್ ನಾಗರಾಜ್ ಘೋಷಣೆ ಮಾಡಿದ್ದಾರೆ. ಸಿಎಂ ಬೊಮ್ಮಾಯಿ ಜೊತೆ ಚರ್ಚೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ವಾಟಾಳ್ ನಾಗರಾಜ್, ಶುಕ್ರವಾರದ ಬಂದ್ ಇರಲ್ಲ. ಸಿಎಂ ನಮ್ಮ ಬೇಡಿಕೆಗಳಿಗೆ ಒಪ್ಪಿರೋದ್ರಿಂದ ನಾವು ಬಂದ್ ಮಾಡ್ತಿಲ್ಲ, ಕರ್ನಾಟಕ ಬಂದ್ ವಾಪಸ್ ಪಡೆಯೋದಾಗಿ ವಾಟಾಳ್ ಹೇಳಿದ್ರು.
ಎಲ್ಲಾ ಕಡೆಯಿಂದ ಬಂದ್ ಬೇಡ ಅನ್ನೋ ಒತ್ತಡ ಇತ್ತು. ಹೀಗಾಗಿ ಸಿಎಂ ಬೊಮ್ಮಾಯಿ ಭೇಟಿಯಾಗಿ ಚರ್ಚೆ ನಡೆಸಿದ್ವಿ. ಎಂಇಎಸ್ ನಿಷೇಧಿಸೋ ಭರವಸೆಯನ್ನ ಸಿಎಂ ಬೊಮ್ಮಾಯಿ ನೀಡಿದ್ದಾರೆ. ಹೀಗಾಗಿ, ಕರ್ನಾಟಕ ಬಂದ್ ವಾಪಸ್ ಪಡೆಯೋದಾಗಿ ವಾಟಾಳ್ ಹೇಳಿದ್ರು. ಜೊತೆಗೆ ಎಂಇಎಸ್ ಬ್ಯಾನ್ ಮಾಡದೇ ಹೋದ್ರೆ, ಜನವರಿ 22ರಂದು ಬಂದ್ ಮಾಡೋದಾಗಿ ವಾಟಾಳ್ ಎಚ್ಚರಿಕೆ ನೀಡಿದ್ರು.
ಇದೇ ವೇಳೆ ಮಾತ್ನಾಡಿದ ಸಿಎಂ ಬೊಮ್ಮಾಯಿ, ಬಂದ್ ಬೇಡ ಅಂತ ನಾನು ಮನವಿ ಮಾಡಿದ್ದೆ. ನನ್ನ ಮನವಿಗೆ ಸ್ಪಂದಿಸಿ ಇವತ್ತು ಭೇಟಿಯಾಗಿ, ಬಂದ್ ವಾಪಸ್ ಪಡೆದಿದ್ದಾರೆ. ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡ ಪರ ಸಂಘಟನೆಗಳಿಗೆ ಧನ್ಯವಾದ ತಿಳಿಸೋದಾಗಿ ಸಿಎಂ ಬೊಮ್ಮಾಯಿ ಹೇಳಿದ್ರು.
ಒಟ್ನಲ್ಲಿ ಹೊಸ ವರ್ಷದ ಆಚರಣೆಗೆ ಬಂದ್ ಅಡ್ಡಿ ಆಗುತ್ತೆ ಅನ್ನೋ ಆತಂಕದಲ್ಲಿದ್ದ ಎಲ್ಲರಿಗೂ ನಿರಾಳವಾಗಿದೆ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?