Featured
ಕೊರೊನಾ ಭಯ – ತಳ್ಳೋ ಗಾಡಿಯಲ್ಲಿ ಶವ ಸಾಗಾಟ – ಎಂಥಾ ದುರ್ವಿಧಿ..!

ರೈಸಿಂಗ್ ಕನ್ನಡ :
ಬೆಳಗಾವಿ :
ಇಂಥದ್ದೊಂದು ಸಂದರ್ಭ ಯಾರ ಬದುಕಿನಲ್ಲೂ ಬರಬಾರದು. ಕೊರೊನಾ ಅನ್ನೋ ಮಹಾಮಾರಿ ಸಾಮಾನ್ಯ ರೋಗಿಗಳನ್ನೂ ಅನುಮಾನದಿಂದ ನೋಡುವಂತೆ ಮಾಡಿದೆ. ಸೋಂಕಿತರು ಯಾರೋ, ಸೋಂಕಿಲ್ಲದೇ ಮಡಿದವರು ಯಾರೋ, ಯಾವುದೂ ತಿಳಿಯುತ್ತಿಲ್ಲ. ಬೇರೆ ಖಾಯಿಲೆಯಿಂದ ಮೃತಪಟ್ಟವರನ್ನೂ ಅಮಾನವೀಯವಾಗಿ ನೋಡೋ ಪರಿಸ್ಥಿತಿ ಬಂದೊದಗಿದೆ.
ಇದಕ್ಕೆ ಉದಾಹರಣೆ ಅಥಣಿಯ ಈ ಅಮಾನವೀಯ ಘಟನೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಥಣಿ ಇಂತದ್ದೊಂದು ಅಮಾನವೀಯ ಘಟನೆಯ ಸಾಕ್ಷಿಯಾಯ್ತು ಎನ್ನಲಾಗಿದೆ. ವ್ಯಕ್ತಿಯೊಬ್ಬರು ಎರಡು ದಿನಗಳ ಹಿಂದೆ ಅನಾರೋಗ್ಯದಿಂದ ಮನೆಯಲ್ಲೇ ಮೃತಪಟ್ಟಿರುತ್ತಾರೆ. ಆದ್ರೆ, ಕೊರೊನಾ ಶಂಕೆ ಹಿನ್ನಲೆಯಲ್ಲಿ ಅಂತ್ಯಸಂಸ್ಕಾರಕ್ಕೆ ಯಾರೂ ಕೂಡ ಸಾಥ್ ನೀಡೋದಿಲ್ಲ .
ಅಂತ್ಯಸಂಸ್ಕಾರ ಮಾಡಲು ಪರದಾಡಿದ ಕುಟುಂಬ ಸದಸ್ಯರು, ಕಡೆಗೆ ವಿಧಿಯಿಲ್ಲದೇ ತಳ್ಳೋ ಗಾಡಿಯಲ್ಲಿ ಶವವನ್ನ ತೆಗೆದುಕೊಂಡು ಹೋಗಿದ್ದಾರೆ. ಮಹಿಳೆ ಮತ್ತು ಬಾಲಕನಿಂದ ಶವ ಸಾಗಿಸಲಾಗಿದೆ ತಳ್ಳೋ ಗಾಡಿಯಲ್ಲಿ ಶವವನ್ನ ಸಾಗಿಸಲಾಗಿದೆ. ಅಥಣಿಯ ಅಂಬೇಡ್ಕರ್ ವೃತ್ತದ ಬಳಿ ಕಂಡುಬಂದು ಈ ಹೃದಯ ವಿದ್ರಾವಕ ದೃಶ್ಯ, ಎಂತವರ ಕಣ್ಮಂಚಲ್ಲೂ ನೀರು ಬರುವಂತೆ ಮಾಡಿದ್ದಂತೂ ಸುಳ್ಳಲ್ಲ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?