Featured
ರಾಶಿ ಭವಿಷ್ಯ|ಬುಧವಾರ| ಜುಲೈ25, 2020

ರಾಶಿ ಫಲ 25/07/2020, ಶನಿವಾರ
ಮೇಷ:
ವಿದ್ಯಾಭ್ಯಾಸದಲ್ಲಿ ಅನುಕೂಲ, ಅಲಂಕಾರಿಕ ವಸ್ತುಗಳ ಮೇಲೆ ಆಸೆ, ಹಣಕಾಸು ಲಾಭ ನಿಧಾನ, ಕೆಲಸ ಕಾರ್ಯಗಳಲ್ಲಿ ಅನುಕೂಲ, ರಾಜಕೀಯ ವ್ಯಕ್ತಿಗಳಿಂದ ಪ್ರಶಂಸೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆ ವ್ಯವಹಾರದಲ್ಲಿ ಹಿನ್ನಡೆ.
ವೃಷಭ:
ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷಿತ ಆದಾಯ, ಆತ್ಮಗೌರವಕ್ಕೆ ಧಕ್ಕೆ, ಆತ್ಮ ಸಂಕಟ ಭಯ ಭೀತಿ, ದೈಹಿಕ ಸಮಸ್ಯೆ, ಶತ್ರುಗಳಿಂದ ತೊಂದರೆ, ಕೂಲಿ ಕಾರ್ಮಿಕರ ಕೊರತೆ, ಸಾಲ ಲಭಿಸುವುದಿಲ್ಲ, ಆರೋಗ್ಯ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ಮಿಥುನ:
ನೆರೆಹೊರೆಯವರಿಂದ ಕಿರಿಕಿರಿ, ಇಲ್ಲ ಸಲ್ಲದ ಅಪವಾದ, ಮೋಸದ ತಂತ್ರಕ್ಕೆ ಸಿಲುಕುವಿರಿ, ಅಲಂಕಾರಿಕ ವಸ್ತುಗಳಿಂದ ಸಮಸ್ಯೆ, ಅತಿಯಾದ ಜಿಪುಣತನ, ಪ್ರೀತಿ ಪ್ರೇಮ ವಿಶ್ವಾಸದ ಕೊರತೆ, ದುಶ್ಚಟಗಳಿಂದ ನಷ್ಟ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಕಟಕ:
ಸಹೋದರಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಿತ್ರರು ದೂರಾಗುವರು, ಗೌರವ ಸನ್ಮಾನದ ನಿರೀಕ್ಷೆ, ಮಾನಸಿಕ ನೋವು, ಸ್ಥಿರಾಸ್ತಿ-ವಾಹನದಿಂದ ನಷ್ಟ, ಅಲಂಕಾರಿ ವಸ್ತುಗಳಿಂದ ಸೌಂದರ್ಯ ಹಾಳು, ಆರೋಗ್ಯದಲ್ಲಿ ವ್ಯತ್ಯಾಸ.
ಸಿಂಹ:
ಉದ್ಯೋಗದಲ್ಲಿ ಹಿನ್ನಡೆ, ಗೌರವಕ್ಕೆ ಧಕ್ಕೆ, ಜವಾಬ್ದಾರಿ ಜಾರಿಕೊಳ್ಳುವಿರಿ, ಧಾರ್ಮಿಕ ಕ್ಷೇತ್ರಕ್ಕೆ ಪ್ರಯಾಣ ಮುಂದೂಡಿಕೆ, ಕುಟುಂಬದಲ್ಲಿ ಅಂತರ ಕಾಯ್ದುಕೊಳ್ಳುವಿರಿ, ಅನ್ಯರ ಮಾತುಗಳಿಂದ ಅಶಾಂತಿ, ಮಾನಸಿಕ ಯೋಚನೆ ಬದಲಾವಣೆ.
ಕನ್ಯಾ :
ಹಣಕಾಸು ವಿಚಾರದಲ್ಲಿ ಹಿನ್ನಡೆ, ಕುಟುಂಬದಿಂದ ದೂರ ಉಳಿಯುವ ಚಿಂತೆ, ವಾಗ್ವಾದಗಳಲ್ಲಿ ಸೋಲು, ಅಧಿಕವಾದ ಚಿಮತೆ, ಪ್ರಯಾಣಕ್ಕೆ ಮನಸ್ಸು, ಪಿತ್ರಾರ್ಜಿತ ಆಸ್ತಿ ತಗಾದೆ, ತಂದೆಯಿಂದ ನಷ್ಟ, ಶುಭ ಕಾರ್ಯಗಳಿಗೆ ಅಧಿಕ ಖರ್ಚು.
ತುಲಾ :
ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಅವಕಾಶಗಳು ಕಡಿಮೆಯಾಗುವುದು, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಉದ್ಯೋಗದಲ್ಲಿ ಹಿನ್ನಡೆ, ಸೋಲು-ನಷ್ಟ ನಿರಾಸೆ, ಆರೋಗ್ಯದಲ್ಲಿ ಏರುಪೇರು, ಮಾತೃವಿನಿಂದ ಅಂತರ ಕಾಯ್ದುಕೊಳ್ಳುವಿರಿ, ಶುಭ ಕಾರ್ಯಗಳಲ್ಲಿ ಹಿನ್ನಡೆ.
ವೃಶ್ಚಿಕ :
ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಆತ್ಮೀಯರ ನಡವಳಿಕೆಯಿಂದ ಬೇಸರ, ಪ್ರಯಾಣದಿಂದ ಲಾಭ, ತಂದೆಯಿಂದ ಅನುಕೂಲ, ರಾಜಕೀಯ ವ್ಯಕ್ತಿಗಳಿಂದ ಲಾಭ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಜಯ, ವಾಹನ ಖರೀದಿಯ ಆಸೆ, ವ್ಯಾಮೋಹಗಳಲ್ಲಿ ನಿರಾಸಕ್ತಿ, ಶೃಂಗಾರ ಸಾಧನಗಳಿಗೆ ಅಧಿಕ ಖರ್ಚು.
ಧನಸ್ಸು:
ನಂಬಿಕಸ್ಥರಿಂದ ಗೌರವಕ್ಕೆ ಧಕ್ಕೆ, ಕೆಲಸಗಾರರ ಕೊರತೆ, ಋಣ ಬಾಧೆ, ಬಾಡಿಗೆದಾರರ ಸಮಸ್ಯೆ, ರಾಜಕೀಯ ವ್ಯಕ್ತಿಗಳ ಭೇಟಿ, ತಂದೆಯಿಂದ ಅನುಕೂಲ, ಪುಣ್ಯ ಕ್ಷೇತ್ರಕ್ಕೆ ದರ್ಶನಕ್ಕೆ ಮನಸ್ಸ, ದೂರ ಪ್ರಯಾಣಕ್ಕೆ ತಯಾರಾಗುವಿರಿ.
ಮಕರ:
ಪ್ರೇಮ ವಿಚಾರದಲ್ಲಿ ಹಿನ್ನಡೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅಧಿಕವಾದ ಒತ್ತಡ, ಸಂತಾನ ದೋಷ, ಮಕ್ಕಳಿಂದ ಸೋಲು, ನಷ್ಟ, ನಿರಾಸೆ, ಉದ್ಯೋಗದಲ್ಲಿ ತೊಂದರೆ, ಗೌರವಕ್ಕೆ ಧಕ್ಕೆ, ಆಯುಷ್ಯಕ್ಕೆ ಕಂಟಕವಾಗುವುದೆಂಬ ಆತಂಕ, ಅಹಂಭಾವದಿಂದ ದಾಂಪತ್ಯದಲ್ಲಿ ವೈಮನಸ್ಸು.
ಕುಂಭ:
ಮಾನಸಿಕ ವೇದನೆ, ಗುಪ್ತ ಇಚ್ಛೆಗಳಿಂದ ತೊಂದರೆ, ಮನೆ ವಾತಾವರಣದಲ್ಲಿ ಅಶಾಂತಿ, ವಾಹನದಿಂದ ತೊಂದರೆ, ಕೃಷಿಕರಿಗೆ ನಷ್ಟ, ಗುರು-ದೈವ ನಿಂದನೆ ಮಾಡುವಿರಿ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಸ್ತ್ರೀಯರಿಂದ ಕಳಂಕ.
ಮೀನ:
ಆಕಸ್ಮಿಕ ಸೋಲು, ನಷ್ಟ, ನಿರಾಸೆ, ವಿಶ್ರಾಂತಿ ವೇತನ ಬರುವುದಕ್ಕೆ ವಿಳಂಬ, ವಾಹನ ಚಾಲನೆಯಲ್ಲಿ ಎಚ್ಚರ, ಬಂಧುಗಳಲ್ಲಿ ಶತ್ರುತ್ವ, ಪಿತ್ತ, ಕಫ ಬಾಧೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಉದ್ಯೋಗದಲ್ಲಿ ಕಿರಿಕಿರಿ, ವ್ಯವಹಾರ ಬದಲಾವಣೆಯಿಂದ ತೊಂದರೆ.

You may like
ನಿತ್ಯದ ಕಾರ್ಯವನ್ನು ಬೇರೆ ವಿಧಾನದಲ್ಲಿ ಮಾಡಿ ಯಶಸ್ಸು ಕಾಣುವಿರಿ
ಈ ರಾಶಿಯವರಿಗೆ ಸಂಜೆ ಮೇಲೆ ಕಾದಿದೆ ಕಂಟಕ!
ದಿನಕ್ಕೊಂದು ಹಸಿ ಈರುಳ್ಳಿ ಕತ್ತರಿಸಿಕೊಂಡು ತಿನ್ನಿ; ಈ ಕಾಯಿಲೆಗಳು ನಿಮತ್ತ ಕೂಡ ಸುಳಿಯಲ್ಲ!
ಈ ರಾಶಿಯವರಿಗೆ ಬಹಳ ದಿನಗಳ ಪ್ರಯತ್ನಕ್ಕೆ ಇಂದು ಫಲ ಸಿಗಲಿದೆ
ರವಿ ಗ್ರಹ ಪಿತೃಕಾರಕನಾದರೆ ಚಂದ್ರ ಗ್ರಹ ಮಾತೃಕಾರಕನಾಗಿರುವನು
ಪುರಾಣ ಎಂದರೇನು? ಎಷ್ಟು ಪುರಾಣಗಳಿವೆ ? ಯಾರು ರಚಿಸಿದ್ದಾರೆ?