ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಅಂಬಾಟಿ ರಾಯ್ಡು ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್ಗಳ ಭರ್ಜರಿ ಗೆಲುವು ಪಡೆಯುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಅಬುಧಾಬಿಯಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತ್ತು. ಮುಂಬೈ ಪರ ನಾಯಕ ರೋಹಿತ್ ಶರ್ಮಾ (12) ಮತ್ತು ಕ್ವಿಂಟಾನ್ ಡಿ ಕಾಕ್ (33) ಉತ್ತಮ ಆರಂಭ ನೀಡಿದ ಹೊರತಾಗಿಯೂ ಚೆನ್ನೈ ಬೌಲರ್ಗಳ ಕರಾರುವಕ್ ದಾಳಿಗೆ ತತ್ತರಿಸಿ ಹೋಯ್ತು.
ಸೂರ್ಯ ಕುಮಾರ್ಮಧ್ಯಮ ಕ್ರಮಾಂದಲ್ಲಿ ಸೌರಭ್ ತಿವಾರಿ 42,ಹಾರ್ದಿಕ್ ಪಾಂಡ್ಯ 14,ಕಿರಾನ್ ಪೊಲರ್ಡ್ 18,ಕೃನಾಲ್ ಪಾಂಡ್ಯ 3,ಪ್ಯಾಟಿನ್ಸನ್ 11 ರನ್ಗಳಿಸಿದರು.ಕೊನೆಯಲ್ಲಿ ಮುಂಬೈ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 162 ರನ್ ಕಲೆ ಹಾಕಿತು.
170 ರನ್ಗಳ ಸವಾಲಿನ ಮೊತ್ತ ಬೆನ್ನತ್ತಿದ ಚೆನ್ನೈ ತಂಡ ಆರಂಭಿಕರಾದ ಮುರಳಿ ವಿಜಯ್ (1)ಮತ್ತು ಶೇನ್ ವ್ಯಾಟ್ಸನ್(4) ಅವರ ವಿಕೆಟ್ಗಳನ್ನ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಮೂರನೇ ವಿಕೆಟ್ಗೆ ಜೊತೆಗೂಡಿದ ಅಂಬಾಟಿ ರಾಯ್ಡು ಮತ್ತು ಫಾಫ್ ಡುಪ್ಲೆಸಿಸ್ ಮುಂಬೈ ಬೌಲರ್ಸ್ಗಳನ್ನ ಚೆಂಡಾಡಿದರು.
ಕ್ರೀಸ್ಗೆ ನೆಲಕಚ್ಚಿ ನಿಂತ ಈ ಜೋಡಿ ನಾಲ್ಕನೆ ವಿಕೆಟ್ಗೆ 115 ರನ್ ಸೇರಿಸಿ ಗೆಲುವಿನತ್ತ ಕೊಂಡೊಯ್ದರು.ಅಂಬಾಟಿ ರಾಯ್ಡು 48 ಎಸೆತದಲ್ಲಿ 6 ಬೌಂಡರಿ 3 ಸಿಕ್ಸರ್ ಸಿಡಿಸಿ ಒಟ್ಟು 71 ರನ್ ಕಲೆ ಹಾಕಿದರು.
ಕೊನೆಯಲ್ಲಿ ಬಂದ ರವೀಂದ್ರ ಜಡೇಜಾ (10), ಸ್ಯಾಮ್ ಕರನ್(14) ರನ್ಗಳಿಸಿದರು. ಕೊನೆಯಲ್ಲಿ ಫಾಫ್ ಡುಪ್ಲೆಸಿಸ್ (58*) ಜೊತೆಗೂಡಿದ ಧೋನಿ ತಂಡವನ್ನ ಗೆಲುವಿನ ದಡ ಸೇರಿಸಲು ನೆರವಾದರು. ಚೆನ್ನೈ ತಂಡ 19.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು.ಸ್ಪೋಟಕ ಬ್ಯಾಟಿಂಗ್ ಮಾಡಿದ ಅಂಬಾಟಿ ರಾಯ್ಡು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?