Featured
ಪ್ರವಾಹ ಭೀತಿ ಎದುರಿಸಿದ್ದ ಯಾದಗಿರಿಗೆ ಮತ್ತೊಂದು ಶಾಕ್: ಕೃಷ್ಣಾ ನದಿ ದಡದಲ್ಲಿ ಮೊಸಳೆಗಳ ಹಾವಳಿ

ರೈಸಿಂಗ್ ಕನ್ನಡ:
ಯಾದಗಿರಿ:
ಮೊನ್ನೆಯಷ್ಟೆ ಪ್ರವಾಹ ಭೀತಿ ಎದುರಿಸಿದ್ದ ಜಿಲ್ಲೆಯ ಜನರಿಗೆ ಇದೀಗ ಕೃಷ್ಣ ದಡದಲ್ಲಿ ಮೊಸಳೆ ಕಾಣಿಸಿಕೊಂಡು ಮತ್ತೊಂದು ಆತಂಕ ಸೃಷ್ಟಿಸಿದೆ.
ಒಂದು ಕಡೆ ಕೊರೊನಾ ಭಯ ಇರುವಾಗಲೇ ಈಗ ಮೊಸಳೆ ಕಾಟ ಶುರುವಾಗಿದೆ. ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಟ್ಟ ಕಾರಣ, ನದಿ ತೀರದಲ್ಲಿ ಮೊಸಳೆಗಳ ಸಾಮ್ರಾಜ್ಯ ನಿರ್ಮಾಣವಾಗಿದೆ.
ಕಳೆದ 15 ದಿನಗಳಿಂದ ಮೊಸಳೆಗಳು ಕೃಷ್ಣ ನದಿ ಪಾತ್ರದ ಜನರಿಗೆ ಉಪಟಳ ನೀಡುತ್ತಿವೆ. ಕಳೆದ 15 ಅಂತರದಲ್ಲಿ ಓರ್ವ ವ್ಯಕ್ತಿ ಸೇರಿದಂತೆ ಹತ್ತಾರು ಮೂಕ ಜೀವಿಗಳನ್ನು ಮೊಸಳೆಗಳು ಬಲಿ ಪಡೆದಿವೆ.
ಜಿಲ್ಲೆಯ ವಡಗೇರಾ ತಾಲೂಕಿನ ಭೀಮಾ ಮತ್ತು ಕೃಷ್ಣ ಸಂಗಮ, ಬೆಂಡಬಂಳಿ, ಕೊಡಾಲ,ಶಿವಪುರ ನದಿ ಪಾತ್ರದಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿದೆ. ಆಹಾರ ಹರಸಿ ನದಿ ತೀರಕ್ಕೆ ಬರುತ್ತಿರುವ ಮೊಸಳೆಗಳಿಗೆ, ಆಡು,ಕುರಿ, ಆಕಳು, ಎಮ್ಮೆ ಬಲಿಯಾಗುತ್ತಿವೆ.
ಇದರ ಜೊತೆಗೆ ನದಿ ತೀರದ ಜಮೀನಿನ ಹೊಂದಿರುವ ರೈತರ ಮೇಲೂ ದಾಳಿ ಮಾಡುತ್ತಿರುವ ಮೊಸಳೆಗಳು,ಮಾರಣಾಂತಿಕ ಹಲ್ಲೆ ನಡೆಸುತ್ತಿವೆ. ಇದರಿಂದಾಗಿ ಜನರು ಭಯ ಭೀತರಾಗಿದ್ದು,ನದಿ ತೀರಕ್ಕೆ ತೆರಳಲು ಭಯ ಪಡುತ್ತಿವಂತಾಗಿದೆ.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್