Featured
ತುಮಕೂರಿನಲ್ಲಿ ಕೊರೊನಾಗೆ ಐವರ ಬಲಿ : 101 ಹೊಸ ಕೇಸ್ : 119 ಮಂದಿ ಡಿಸ್ಚಾರ್ಜ್

ರೈಸಿಂಗ್ ಕನ್ನಡ :
ತುಮಕೂರು :
ತುಮಕೂರಿನಲ್ಲಿ ಕೊರೊನಾ ಮರಣ ಮೃದಂಗ ಮುಂದುವರೆಸಿದ್ದು ಒಂದೇ ದಿನ ಐವರನ್ನ ಬಲಿ ಪಡೆದಿದೆ. ಜೊತೆಗೆ ಸೋಂಕಿನಲ್ಲೂ ಶತಕ ಬಾರಿಸಿದೆ.
ಜಿಲ್ಲಾ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಶನಿವಾರದ ವರದಿಯಲ್ಲಿ ಕೊರೋನಾದಿಂದ ಜಿಲ್ಲೆಯಲ್ಲಿ ಐವರು ಸಾವನಪ್ಪಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕ್ರೂರಿ ಏಟಿಗೆ ಬಲಿಯಾದವರ ಸಂಖ್ಯೆ 101ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 1,017 ಸಕ್ರಿಯ ಪ್ರಕರಣಗಳಿವೆ.
ನಗರದ ಶಾಂತಿನಗರ ಬಡಾವಣೆಯ 50 ವರ್ಷದ ವ್ಯಕ್ತಿ,ನಗರದ, ಉಪ್ಪಾರಹಳ್ಳಿ ಬಡಾವಣೆಯ 63 ವರ್ಷದ ವ್ಯಕ್ತಿ.ತುರುವೇಕೆರೆ ತಾಲ್ಲೂಕಿನ ಶಕ್ತಿನಗರ ಬಡಾವಣೆಯ 50 ವರ್ಷದ ವ್ಯಕ್ತಿ.ತುಮಕೂರು ತಾಲ್ಲೂಕು, ಡಿ.ಎಸ್ ಪಾಳ್ಯ ಹೆಬ್ಬೂರು ಗ್ರಾಮದ 63 ವರ್ಷದ ವ್ಯಕ್ತಿ.ಪಾವಗಡ ತಾಲ್ಲೂಕು, ಮರಿದಾಸರಹಳ್ಳಿ ಗ್ರಾಮದ 35 ವರ್ಷದ ವ್ಯಕ್ತಿ ಸಾವನಪ್ಪಿದವರಾಗಿದ್ದಾರೆ.
ಶನಿವಾರ ತುಮಕೂರಿನಲ್ಲಿ ಇಂದು 101 ಮಂದಿಗೆ ಹೊಸ ಕೊರೊನಾ ಸೋಂಕು ದೃಢವಾಗಿದೆ. ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 3,312 ಕ್ಕೆ ಏರಿಕೆಯಾಗಿದೆ.

ತಾಲ್ಲೂಕುವಾರು ಹೊಸ ಕೇಸ್ ಸಂಖ್ಯೆ
ತುಮಕೂರು 38, ಮಧುಗಿರಿ 01, ಚಿಕ್ಕನಾಯಕನಹಳ್ಳಿ 01, ತಿಪಟೂರು 08, ಗುಬ್ಬಿ 11, ಕೊರಟಗೆರೆ 6, ಕುಣಿಗಲ್ 7, ಪಾವಗಡ 12, ಶಿರಾ 7, ತುರುವೇಕೆರೆ 10 ಪ್ರಕರಣಗಳು
ಕೋವಿಡ್ ಆಸ್ಪತ್ರೆಯ ಐಸೊಲೇಷನ್ನ ಐಸಿಯುವಿನಲ್ಲಿ 13 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಶನಿವಾರ ಕೊರೊನಾದಿಂದ ಚೇತರಿಸಿಕೊಂಡು 119 ಮಂದಿ ಬಿಡುಗಡೆಯಾಗಿದ್ದಾರೆ. ಈವರೆಗೂ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 2,194ಕ್ಕೆ ಏರಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?