ರೈಸಿಂಗ್ ಕನ್ನಡ:
ತುಮಕೂರು :
ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ 81 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ದೃಡಪಟ್ಟಿದ್ದು ಸೊಂಕಿತರ ಸಂಖ್ಯೆ 1,617 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಮಕೂರು 38, ಚಿಕ್ನನಾಯಕನ ಹಳ್ಳಿ 1, ಪಾವಗಡ 5, ತಿಪಟೂರು 10, ಮದುಗಿರಿ 8, ಕೊರಟಗೆರೆ 1, ಕುಣಿಗಲ್ 11, ತುರುವೇಕೆರೆ 2, ಶಿರಾ 1, ಗುಬ್ಬಿ 4, ಸೊಂಕಿತರು ಪತ್ತೆಯಾಗಿದ್ದಾರೆ.
ಇಂದು ಕಂಡು ಬಂದಿರುವ ಸೊಂಕಿತರಲ್ಲಿ 5 ವರ್ಷದ ಒಳಗಿನ ಒಂದು ಮಗು ಹಾಗೂ 16 ವೃದ್ಧರು ಸೇರಿದಂತೆ ಸೇರಿದಂತೆ 52 ಜನ ಪುರುಷರು ಹಾಗೂ 29 ಜನ ಮಹಿಳೆಯರಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಇಂದು 11 ಜನ ಸೋಂಕಿತರು ಗುಣಮುಖರಾಗಿ ಇಂದು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಈವರೆಗೆ 736 ಜನರು ಕೊವಿಡ್ ನಿಂದ ಗುಣಮುಖರಾಗಿ ಮನೆ ಸೇರಿದ್ದಾರೆ. ಉಳಿದ 844 ಮಂದಿ ಸಕ್ರಿಯ ಸೋಂಕಿತರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುರುವಾರ ಜಿಲ್ಲೆಯಲ್ಲಿ ನಾಲ್ವರು ಸೊಂಕಿತರು ಬಲಿ
ಜಿಲ್ಲೆಯ ತುಮಕೂರು ನಗರ, ಗ್ರಾಮಾಂತರ, ಹಾಗೂ ಗುಬ್ಬಿ, ಚಿಕ್ಕನಾಯಕಹಳ್ಳಿ ತಾಲ್ಲೂಕುಗಳಲ್ಲಿ ಒಬ್ಬರಂತೆ ಒಟ್ಟು ನಾಲ್ವರು ಸೊಂಕಿತರು ಇಂದು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 52 ಜನರು ಕೊರನಾಗೆ ಬಲಿಯಾಗಿದ್ದಾರೆ.
ಇನ್ನೂ ಸೋಂಕಿತರ ಪ್ರಥಮ ಹಾಗೂ ದ್ವಿತಿಯ ಸಂಪರ್ಕದಲ್ಲಿದ್ದ 3,494 ಜನರನ್ನ ನಿಗಾವಣೆಯಲ್ಲಿಡಲಾಗಿದ್ದು ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾದ್ಯತೆ ದಟ್ಟವಾಗಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?