Featured
ಆ್ಯಂಬುಲೆನ್ಸ್ಗಾಗಿ ಕಾದು ಕಾದು ಕೊನೆಗೆ ಪ್ರಾಣ ಬಿಟ್ಟ ಕೊರೊನಾ ಸೋಂಕಿತ: ತೆಲಾಂಗಣದಲ್ಲಿ ಅವಮಾನೀಯ ಘಟನೆ

ರೈಸಿಂಗ್ ಕನ್ನಡ :
ಹೈದರ್ಬಾದ್ :
ಕೊರೊನಾ ಸೋಂಕಿತನೊರ್ವ ಆ್ಯಂಬುಲೆನ್ಸ್ಗಾಗಿ ಕಾದು ಕಾದು ಕೊನೆಗೆ ಸಾವನಪ್ಪಿರುವ ಘಟನೆ ತೆಲಾಂಗಣದಲ್ಲಿ ನಡೆದಿದೆ.

ಈ ದುರ್ಘಟನೆ ತೆಲಾಂಗಣದ ಸಿದ್ದಿಪೇಟೆಯಲ್ಲಿ ನಡೆದಿದೆ. ಸೋಂಕಿತನ ಕುಟುಂಬ 108 ಆ್ಯಂಬುಲೆನ್ಸ್ ಅವರಿಗೆ ಕರೆ ಮಾಡಿ ಆಸ್ಪತ್ರಗೆ ಕರೆದುಕೊಂಡು ಹೋಗುವಂತೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದ್ರೆ ಆ್ಯಂಬುಲೆನ್ಸ್ ಸಿಬ್ಬಂದಿಯವರು ಕೋವಿಡ್ ರೋಗಿಗಳಿಗೆ ಮಾತ್ರ ಸೇವೆ ನೀಡಲಾಗುವುದು ಎಂದು ಉದ್ದಟತನ ಮೆರೆದಿದ್ದಾರೆ. ಅಷ್ಟರಲ್ಲಿ ಆಗಲೇ ಸೋಂಕಿತ ಚೆರ್ಲಂಚ ಶ್ರೀನಿವಾಸ್ ಕೊನೆಯುಸಿರೆಳೆದಿದ್ದಾರೆ.
ಒಂದು ವೇಳೆ ಆ್ಯಂಬುಲೆನ್ಸ್ ಬಂದಿದ್ದೆ ಆಗಿದ್ದರೆ ಚೆರ್ಲಂಚ ಶ್ರೀನಿವಾಸ್ ಖಂಡಿತವಾಗಿಯು ಉಳಿಯುತ್ತಿದ್ದರು ಎಂದು ಅವರ ಕುಟುಂಬ ಹೇಳಿವೆ.
ನಾಲ್ಕು ದಿನಗಳಲ್ಲಿ ಒಂದೇ ಕುಟುಂಬದ ಇಬ್ಬರ ಸಾವು
ಮೃತ ಚೆರ್ಲಂಚ ಶ್ರೀನಿವಾಸ್ ಸಾಯುವ ಮೂಲಕ ಚೆರ್ಲಂಚ ಕುಟುಂಬ ನಾಲ್ಕು ದಿನಗಳ ಅವಧಿಯಲ್ಲಿ ಇಬ್ಬರನ್ನ ಕಳೆದುಕೊಂಡಿದೆ. ಮೊನ್ನೆ ಜು.16ರಂದು ಮೃತ ಚೆರ್ಲಂಚ ಶ್ರೀನಿವಾಸ್ ಅವರ ತಾಯಿ ಕೂಡ ಕೋವಿಡ್ 19ಗೆ ಬಲಿಯಾಗಿದ್ದರು.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್ಡೌನ್ ಫಿಕ್ಸಾ.?
ಸಿಎಂ ಬೊಮ್ಮಾಯಿ ಸೇರಿ ಸಂಪುಟದ ಐವರಿಗೆ ಕೊರೋನಾ ಶಾಕ್..!