Featured
ಸೀಲ್ಡೌನ್ ಆಗಿರೋ ಮನೆಯೇ ಟಾರ್ಗೆಟ್ – ಗುಬ್ಬಿಯಲ್ಲಿ ಕಳ್ಳರ ಗೋಲ್ಮಾಲ್..!

ರೈಸಿಂಗ್ ಕನ್ನಡ :
ಪ್ರತಿನಿಧಿ, ಕೆ.ಆರ್ ಬಾಬು, ತುಮಕೂರು :
ಸೀಲ್ ಡೌನ್ ಆಗಿ ಬೀಗ ಜಡಿದ ಕೊವೀಡ್-19 ಸೋಂಕಿತರ ಮನೆಗೆ ಕನ್ನ ಹಾಕಿದ ಕಳ್ಳರು ಸುಮಾರು 3 ಲಕ್ಷ ರೂ.ಗಳ ನಗದು ಹಾಗೂ ಚಿನ್ನಾಭರಣ ದೋಚಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕೆ.ಜಿ.ಟೆಂಪಲ್ ಗ್ರಾಮದಲ್ಲಿ ನಡೆದಿದೆ.
ಕಳೆದ 14 ದಿನಗಳ ಹಿಂದೆ ಕೆ.ಜಿ.ಟೆಂಪಲ್ ಗ್ರಾಮದಲ್ಲಿ ಮಹಿಳೆಯೊಬ್ಬರು ಕೊರೋನಾ ಸೋಂಕಿತರೆಂದು ಧೃಢಪಟ್ಟ ಹಿನ್ನಲೆಯಲ್ಲಿ ಸೋಂಕಿರು ಸೇರಿದಂತೆ ಮನೆಯ ನಾಲ್ಕು ಮಂದಿ ಸದಸ್ಯರನ್ನು ಕ್ವಾರೆಂಟೈನ್ಗೆ ಒಳಪಡಿಸಲಾಗಿತ್ತು. ತುರ್ತು ಕ್ರಮ ಅನುಸರಿಸಿದ ತಾಲ್ಲೂಕು ಆಡಳಿತ ಸೋಂಕಿರ ಮನೆಗೆ ಸ್ಯಾನಿಟೇಜರ್ ಮಾಡಿ ಮನೆಗೆ ಬಾಗಿಲು ಹಾಕಲಾಯಿತು. ಸುತ್ತಲೂ 100 ಮೀಟರ್ ಸೀಲ್ಡೌನ್ ಪ್ರದೇಶವೆಂದು ಘೋಷಿಸಿ ನಿಷೇಧಿತ ಪ್ರದೇಶ ಎಂದು ಬ್ಯಾನರ್ ಸಹ ಹಾಕಲಾಯಿತು.
ಸಿ.ಎಸ್. ಪುರ ಠಾಣಾ ವ್ಯಾಪ್ತಿಯ ಈ ಗ್ರಾಮಕ್ಕೆ ಬಂದೋಬಸ್ತ್ ಒದಗಿಸಲಾಗಿತ್ತು. ಆದರೆ ಇದೀಗ ಸೋಂಕಿತರ ಮನೆಗೆ ಕನ್ನ ಹಾಕಿರುವುದು ಕ್ವಾರಂಟೈನ್ನಲ್ಲಿರುವ ಮಂದಿಗೆ ಆತಂಕ ತಂದಿದೆ. ಚಿಕಿತ್ಸೆ ಜೊತೆಗೆ ತಮ್ಮ ಮನೆಯ ಭದ್ರತೆ ಚಿಂತೆ ಮಾಡುವಂತಾಗಿದೆ. ಕೊರೋನಾ ವೈರಸ್ ಭೀತಿಯು ಕಳ್ಳರಿಗೆ ಕಾಣದಿರುವುದು ಅಚ್ಚರಿ ಮೂಡಿಸಿದೆ.
ಸದಾ ವಾಹನ ದಟ್ಟಣೆ ಇರುವ ಕೇಶಿಪ್ ರಸ್ತೆ ಬದಿಯ ಮನೆಗೆ ಬೀಗ ಜಡಿದು ಸುತ್ತಲೂ ಬ್ಯಾರಿಕೇಟ್ ಅವಳಡಿಸಿ ಯಾರೊಬ್ಬರೂ ಓಡಾಡದಂತೆ ಮಾಡಲಾಯಿತು. ಆದರೆ 14 ದಿನಗಳ ಕ್ವಾರೆಂಟೈನ್ ಮುಗಿಸಿ ಬಂದ ಸಾವಿತ್ರಮ್ಮ ಅವರ ಕುಟುಂಬಕ್ಕೆ ಶಾಕ್ ಕಾದಿತ್ತು. ಮನೆಯ ಬಾಗಿಲು ಹಾಗೆಯೇ ಹಾಕಿದೆ.
ಆದರೆ ಒಳಭಾಗದಲ್ಲಿ ಮನೆಯ ಬೀರು ಒಡೆದು 80 ಸಾವಿರ ರೂ ನಗದು ಜತೆ ಸುಮಾರು 2 ಲಕ್ಷ ರೂಗಳ ಬಂಗಾರ ಒಡವೆ ದೋಚಲಾಗಿದೆ. ಈ ಘಟನೆ ಇಡೀ ಕುಟುಂಬಕ್ಕೆ ಬಿಗ್ ಶಾಕ್ ನೀಡಿದೆ. ಕೊರೋನಾ ಬಂದಿದ್ದೇ ನಮ್ಮ ಬದುಕಿಗೆ ಬರೆ ಬಿತ್ತು. ಈ ಜತೆಗೆ ಗಾಯದ ಮೇಲೆ ಮತ್ತೆ ಬರೆ ಬಿದ್ದಂತೆ ಈ ಕಳವು ನಡೆದಿದೆ ಎಂದು ಸಾವಿತ್ರಮ್ಮ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕೊರೋನಾ ಸೊಂಕು ತಗುಲಿದ ತಕ್ಷಣ ಕಾರ್ಯ ಪ್ರವೃತ್ತರಾಗುವ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಎರಡು ವಾರಗಳ ಸೋಂಕಿತರ ಮನೆಯ ಭದ್ರತೆ ವಹಿಸಿಕೊಳ್ಳಬೇಕಿದೆ. ಸೀಲ್ಡೌನ್ ಪ್ರದೇಶದ ಭದ್ರತೆಗೆ ಪೊಲೀಸ್ ಸಿಬ್ಬಂದಿ ಹೊಣೆಯಾಗಬೇಕಿದೆ. ಸೋಂಕಿತರ ಮನೆಗೆ ಕನ್ನ ಹಾಕಲಾಗಿದೆ ಅಂದರೆ ಪೊಲೀಸ್ ವೈಪಲ್ಯ ಕಂಡು ಬಂದಿದೆ. ಮನೆಯ ಪಕ್ಕದ ಖಾಲಿಮನೆಯ ಮೂಲಕ ಕನ್ನ ಹಾಕಿರುವ ರೀತಿ ಯಾರೋ ತಿಳಿದೇ ಈ ಕೃತ್ಯವೆಸಗಿರುವಂತಿದೆ.
ಕ್ವಾರಂಟೈನ್ಗೆ ಒಳಪಟ್ಟು ನೋವು ಅನುಭವಿಸಿರುವ ಈ ಕುಟುಂಬಕ್ಕೆ ಮೂರು ಲಕ್ಷ ರೂಪಾಯಿಯ ಕಳ್ಳತನಕ್ಕೆ ಯಾರು ಜವಾಬ್ದಾರರು, 24 ಗಂಟೆ ಭದ್ರತೆ ಕಾಯಬೇಕಾದ ಪೊಲೀಸ್ ಹೊಣೆಯೇ ಅಥವಾ ತಾಲ್ಲೂಕು ಆಡಳಿತ ಜವಾಬ್ದಾರಿ ಹೊರುತ್ತದೆಯೇ ಈ ಜತೆಗೆ ಕೊರೋನಾ ತುರ್ತು ನಿಧಿಯಲ್ಲೇ ಸೋಂಕಿತರ ಕುಟುಂಬಕ್ಕೆ ಆಗಿರುವ ಕಳವು ನಷ್ಟವನ್ನು ಭರಿಸಬೇಕಿದೆ ಎಂದು ಸ್ಥಳೀಯ ಮುಖಂಡ ನಾಗಸಂದ್ರ ವಿಜಯ್ ಕುಮಾರ್ ಒತ್ತಾಯಿಸಿದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?