ರೈಸಿಂಗ್ ಕನ್ನಡ :
ಬೀದರ್:
ಕೊರೊನಾ ಸೋಂಕಿತರ ಪ್ರಕರಣ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಿನ್ನಲೆ ಬೀದರ್ ಜಿಲ್ಲೆ ಲಾಕ್ ಡೌನ್ ಅವಶ್ಯಕತೆ ಇದೆ ಮಾಜಿ ಗಣಿ ಸಚಿವ ಹಾಗೂ ಹುಮನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಗುರುತಿಸಿದ ಅಪಾಯಕಾರಿ ಜಿಲ್ಲೆಗಳಲ್ಲಿ ಬೀದರ್ ಸಹ ಒಂದಾಗಿದೆ.ಹೀಗಾಗಿ ಜಿಲ್ಲೆಯನ್ನ ಕನಿಷ್ಟ 10 ದಿನಗಳಾದರು ಲಾಕ್ ಡೌನ್ ಮಾಡಬೇಕಿದೆ.ಲಾಕ್ ಡೌನ್ ನಿಂದ ಕೋವಿಡ್ ವೈರಸ್ ನಿಯಂತ್ರಣಕ್ಕೆ ಪರಿಹಾರ ಅಲ್ಲ.ಜಿಲ್ಲಾ ಉಸ್ತುವಾರಿ ಸಚಿವ ಪ್ರಭುಚೌಹಾಣ್ ಅವರೆ ಹೇಳಬೇಕು ಯಾವ ಸಂದರ್ಭದಲ್ಲಿ ಪರಿಹಾರ ಆಗುತ್ತೆ ಎಂದು ಶಾಸಕ ರಾಜಶೇಖರ್ ಪಾಟೀಲ್ ಪ್ರಶ್ನೆ ಮಾಡಿದ್ರು.
ಬೆಂಗಳೂರು ಬಿಟ್ಟರೆ ರಾಜ್ಯದಲ್ಲಿ ಅತಿ ಹೆಚ್ಚು ಕೊರೊನಾ ಸೊಂಕಿನಿಂದ ಮೃತಪಟ್ಟವರ ಸಂಖ್ಯೆ ಬೀದರ್ ಆಗಿದೆ. ಬೆಂಗಳೂರು ಅನ್ನ ಹೇಗೆ ಲಾಕ್ಡೌನ್ ಮಾಡಿದ್ರು.ಹಾಗಾದ್ರೆ ಬೀದರ್ ಅನ್ನ ಯಾಕೆ ಬಿಟ್ಟಿದ್ದು ಎಂದು ರಾಜ್ಯಸರ್ಕಾರಕ್ಕೂ ಪ್ರಶ್ನೆ ಮಾಡಿದರು. ಸದ್ಯದ ಪರಿಸ್ಥಿತಿಯಲ್ಲಿ ಮಾಧ್ಯಮಗಳು ಸಹ ಗ್ರೌಂಡ್ ರಿಪೋಟ್ ನೀಡುತ್ತಿದ್ದಾರೆ ಎಲ್ಲೂ ಆಸ್ಪತ್ರೆಗಲ್ಲೂ ಬೆಡ್ ಗಳು ಸಿಗುತ್ತಿಲ್ಲಾ. ಈ ಬಗ್ಗೆ ಸರ್ಕಾರದ ಗಮನಕ್ಕೂ ತಂದಿದೆ. ಜನಪ್ರತಿನಿಧಿಗಳು ಸಹ ಇದರ ಬಗ್ಗೆ ತಿಳಿದಿದ್ದಾರೆ.
ಕೊರೊನಾ ವೈರಸ್ ಹೇಗೆ ವೇಗವಾಗಿ ಹರಡುತ್ತಿದೆ, ಆಸ್ಪತ್ರೆಗಳಲ್ಲಿ ಬೆಡ್ ಗಳು ಸಿಗದ ಕಾರಣ ಕಲ್ಯಾಣ ಮಂಟಪ ಇನ್ನಿತರಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ ಅಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲಾ.,ಲಾಕ್ ಡೌನ್ ನಿಂದ ಜನ ಹೊರಬರುವುದು ಕಡಿಮೆ ಯಾಗುತ್ತೆ ಆಗಲಾದರು ಸ್ವಲ್ಪನಾದ್ರು ನಿಯಂತ್ರಣ ಮಾಡಬಹುದಾಗಿದೆ ಎಂದರು.
ಸಚಿವ ಪ್ರಭುಚೌಹಾಣ್ ಇಂದು ಮೂರು ಗಂಟೆಗೆ ಜಿಲ್ಲೆಯ ಜನಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿ ತಿರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಾಜಶೇಖರ್ ಪಾಟೀಲ್, ಕಳೆದ ಮೂರು ದಿನಗಳ ಹಿಂದೆಯಷ್ಟೆ ಮತ್ತೆ ಲಾಕ್ ಡೌನ್ ಬಗ್ಗೆ ಕಲ್ಯಾಣ ಕರ್ನಾಟಕ ಭಾಗದ ಜನಪ್ರತಿನಿಧಿಗಳಜತೆ ಚರ್ಚೆ ನಡೆಸಲಾಗುತ್ತೆ ಎಂದು ದಿನಾಂಕ ನಿಗದಿ ಮಾಡಿದ್ದರು.
ಆದರೆ ಇಂದು ಯಾವುದೆ ತರಹದ ಚರ್ಚೆಗೆ ನಮಗೆ ಮಾಹಿತಿ ನೀಡಿಲ್ಲಾ, ಆದರೂ ಜಿಲ್ಲೆಯನ್ನ ಕನಿಷ್ಟ 10 ದಿನವಾದರು ಲಾಕ್ ಡೌನ್ ಮಾಡಲೇ ಬೇಕು ಎನ್ನುವುದು ನಮ್ಮ ಅಭಿಪ್ರಾಯ ಹಾಗೂ ಸರ್ಕಾರಕ್ಕೂ ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದ್ರು.
ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್ಡೌನ್ ಫಿಕ್ಸಾ.?
ಸಿಎಂ ಬೊಮ್ಮಾಯಿ ಸೇರಿ ಸಂಪುಟದ ಐವರಿಗೆ ಕೊರೋನಾ ಶಾಕ್..!
ದೆಹಲಿ ಮಾದರಿ ಲಾಕ್ ಆಗುತ್ತಾ ಬೆಂಗಳೂರು.? ಯಾಕೆ..? ಏನಾಗ್ತಿದೆ ಬೆಂಗಳೂರಲ್ಲಿ.?
ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್
3 ತಿಂಗಳ ಬಳಿಕ ರಾಜ್ಯದಲ್ಲಿ ಕೊರೋನಾ ಭಾರೀ ಏರಿಕೆ : ಇದೇನಾ 3ನೇ ಅಲೆ.?
ದಾವಣಗೆರೆ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಉಚಿತ ಮಾಸ್ಕ್ ವಿತರಣೆ