Featured
ಬೀದರ್ನಲ್ಲಿ ಪೊಲೀಸರನ್ನೂ ಬೆನ್ನಟ್ಟಿದ ಹೆಮ್ಮಾರಿ ಕೊರೊನಾ – ಇಲಾಖೆಯಲ್ಲಿ ಶುರುವಾಗಿದೆ ತಳಮಳ

ರೈಸಿಂಗ್ ಕನ್ನಡ :
ಬೀದರ್ :
ಮಹಾಮಾರಿ ಕೊರೊನಾ ಎಸ್ಪಿ ಕಚೇರಿಗೂ ಕಾಲಿಟ್ಟಿದೆ. ಕಳೆದ ಎರಡು ದಿನಗಳ ಹಿಂದೆ ಡಿಎಆರ್ ಇನ್ಸ್ಪೆಕ್ಟರ್ಗೆ ಕೊರೊನಾ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಈಗಾಗಲೇ ಕಿಲ್ಲರ್ ಕೊರೊನಾಗೆ ಇಡೀ ಜಿಲ್ಲೆಯೇ ತತ್ತರಿಸಿ ಹೋಗಿದ್ದು ಪೊಲೀಸರನ್ನೂ ಬಿಟ್ಟಿಲ್ಲ.
ಜಿಲ್ಲಾ ಎಸ್ಪಿ ಕಚೇರಿ ಆವರಣದಲ್ಲೇ ಡಿಎಆರ್ ಕಚೇರಿ ಇದ್ದು, ಕೆಲಸದ ನಿಮಿತ್ತ ಡಿಎಆರ್ ಇನ್ಸ್ಪೆಕ್ಟರ್ ಜಿಲ್ಲಾ ಎಸ್ಪಿ ಕಚೇರಿಗೆ ಆಗಮಿಸಿ ಎಸ್ಪಿ ಡಿ.ಎಲ್. ನಾಗೇಶ್ ಅವರನ್ನ ಅವರ ಕಚೇರಿಯಲ್ಲಿ ಭೇಟಿಯಾಗಿದ್ದರು.
ಈ ಹಿನ್ನಲೆಯಲ್ಲಿ ಎಸ್ಪಿ ಡಿ.ಎಲ್. ನಾಗೇಶ್ ಅವರು ಸ್ವಯಂ ಪ್ರೇರಿತರಾಗಿ ಹೋಂ ಕ್ವಾರೆಂಟೈನ್ಗೆ ಒಳಗಾಗಿದ್ದಾರೆ. ಈ ನಡುವೆಯೆ ಡಿಎಆರ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ 34 ವರ್ಷದ ರೈಟರ್ಗೂ ಕೋರೋನಾ ದೃಢ ಪಟ್ಟಿದೆ.

ಇಡೀ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ತಳಮಳ ಶುರುವಾಗಿದೆ. ಜಿಲ್ಲೆಯಲ್ಲಿ ಇದುವರೆಗೂ ಹೆಮ್ಮಾರಿ ಕೊರನಾದಿಂದಾಗಿ 19 ಮಂದಿ ಸಾವನಪ್ಪಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?