Featured
ಸಾವಿನಲ್ಲಿ ಶತಕ ಬಾರಿಸಿದ ಹೆಮ್ಮಾರಿ ಕೊರೊನಾ: ರಾಜ್ಯದಲ್ಲಿ 5,619 ಹೊಸ ಕೇಸ್: ಬೆಂಗಳೂರಿನಲ್ಲಿ 29 ಬಲಿ

ರೈಸಿಂಗ್ ಕನ್ನಡ :
ಬೆಂಗಳೂರು:
ಕಳೆದೆರೆಡು ದಿನಗಳಿಂದ ಮರಣ ಮೃದಂಗ ಬಾರಿಸುತ್ತಿರುವ ಹೆಮ್ಮಾರಿ ಕೊರೊನಾ ಬುಧವಾರ ಕೂಡ ಕ್ರೂರತೆ ಮೆರೆದಿದೆ. ಒಂದೇ ದಿನ ನೂರು ಮಂದಿಯನ್ನ ಬಲಿ ತೆಗೆದುಕೊಳ್ಳುವ ಮೂಲಕ ಅಟ್ಟಹಾಸ ಮೆರೆದಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ಬುಧವಾರ 5,619 ಹೊಸ ಕೇಸ್ ಪತ್ತೆಯಾಗಿದೆ.ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,51,449ಕ್ಕೆ ಏರಿದೆ. ರಾಜ್ಯದಲ್ಲಿ ಒಟ್ಟು 73,958 ಸಕ್ರಿಯ ಪ್ರಕರಣಗಳಿವೆ.

ಬುಧವಾರ ಕೊರೊನಾ 100 ಮಂದಿಯನ್ನ ಬಲಿತೆಗೆದುಕೊಂಡು ಶತಕ ಬಾರಿಸಿದೆ.ಈವರೆಗೂ 2,804 ಮಂದಿ ಬಲಿಯಾಗಿದ್ದಾರೆ.
ಸಮಾಧಾನಕರ ತಂದಿರುವ ವಿಷಯವೇನೆಂದರೆ ಬುಧವಾರ ಕೊರೊನಾದಿಂದ 5,407 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.ಒಟ್ಟು ಬಿಡುಗಡೆಯಾದ ಸಂಖ್ಯೆ 74,679 ಏರಿದೆ.
ಇನ್ನು ರಾಜಧಾನಿ ಬೆಂಗಳೂರಿನಲ್ಲಿ 1,848 ಮಂದಿ ಹೊಸ ಸೋಂಕಿತರಾಗಿದ್ದಾರೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 64,881ಕ್ಕೆ ಏರಿದೆ.
ಬುಧವಾರ 29 ಪ್ರಾಣ ಕಳೆದುಕೊಂಡಿದ್ದಾರೆ.ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 1,163ಕ್ಕೆ ಏರಿದೆ. ನಗದರಲ್ಲಿ ಒಟ್ಟು 32,757 ಸಕ್ರಿಯ ಪ್ರಕರಣಗಳಿವೆ. 3,083 ಮಂದಿ ಡಿಸ್ಚಾರ್ಜ್ ಆಗಿದ್ದು ಚೇತರಿಸಿಕೊಂಡವರ ಸಂಖ್ಯೆ 30,960ಕ್ಕೆ ಏರಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?