Featured
ರಾಜ್ಯದಲ್ಲಿ ಕ್ರೂರಿ ಕೊರೊನ ಅಟ್ಟಹಾಸ: 101 ಬಲಿ, 6,670 ಮಂದಿಗೆ ಸೋಂಕು

ರೈಸಿಂಗ್ ಕನ್ನಡ :
ಬೆಂಗಳೂರು:
ರಾಜ್ಯದಲ್ಲಿ ಕ್ರೂರಿ ಕೊರೊನ ಅಟ್ಟಹಾಸ ಮೆರೆದಿದ್ದು ಸಾವಿನಲ್ಲಿ ಶತಕ ಬಾರಿಸಿದ್ರೆ, ಸೋಂಕಿನಲ್ಲಿ 6 ಸಾವಿರ ಗಡಿ ದಾಟಿ ಆತಂಕ ಹುಟ್ಟಿಸಿದೆ.
ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ವರದಿಯಲ್ಲಿ ಶುಕ್ರವಾರ 101 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ 2,998ಕ್ಕೆ ಏರಿದೆ.

ಇನ್ನು ಸೋಂಕಿನಲ್ಲೂ ಕೊರೊನಾ ಭಯ ಹುಟ್ಟಿಸಿದ್ದು ಒಂದೆ ದಿನ ದಾಖಲೆಯ 6,670 ಹೊಸ ಕೇಸ್ ಪತ್ತೆಯಾಗಿದೆ.ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,64,924ಕ್ಕೆ ಏರಿದೆ.ರಾಜ್ಯದಲ್ಲಿ 77,686 ಸಕ್ರಿಯ ಪ್ರಕಣಗಳಿವೆ.
ಶುಕ್ರವಾರ ಸೋಂಕಿನಿಂದ ಚೇತರಿಸಿಕೊಂಡು 3,951 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಡಿಸ್ಚಾರ್ಜ್ ಆದವರ ಸಂಖ್ಯೆ 84,232ಕ್ಕೆ ಏರಿದೆ.
ಇನ್ನು ರಾಜಧಾನಿ ಬೆಂಗಳೂರಿನಲ್ಲಿ 2,147 ಮಂದಿ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ನಗರದಲ್ಲಿ ಸೋಂಕಿತರ ಸಂಖ್ಯೆ 69,572ಕ್ಕೆ ಏರಿದೆ. ಶುಕ್ರವಾರ 22 ಮಂದಿ ಬಲಿಯಾಗಿದ್ದು ಬೆಂಗಳೂರಿನಲ್ಲಿ ಕೋವಿಡ್ 19ಗೆ ಬಲಿಯಾದವರ ಸಂಖ್ಯೆ 1,200ಕ್ಕೆ ಎರಿದೆ.33,308 ಸಕ್ರಿಯ ಪ್ರಕರಣಗಳಿವೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?