Featured
ನಟನೆ ಬಿಟ್ಟು ಸೆಕ್ಯೂರಿಟಿ ಗಾರ್ಡ್ ಆದ ಸ್ಯಾಂಡಲ್ವುಡ್ ನಟ : ನೋವಾದರೂ ಮೆಚ್ಚಲೇಬೇಕಾದ ಸಂಗತಿ

ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ಇಡೀ ಜಗತ್ತನ್ನೆ ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡು ರಣ ಕೇಕೆ ಹಾಕುತ್ತಿರುವ ಕೊರೊನಾ ಬರೀ ಬಡ ಜನರ ಅನ್ನವನ್ನ ಮಾತ್ರವಲ್ಲ ಸೆಲೆಬ್ರೆಟಿಗಳ ಅನ್ನವನ್ನ ಕಿತ್ತುಕೊಂಡಿದೆ.ಮೊನ್ನೆ ಮೊನ್ನೆಯಷ್ಟೆ ಹಿರಿಯ ನಟ ದಿವಂಗತ ಅಶ್ವಥ್ ಅವರ ಪುತ್ರ, ನಟ ಶಂಕರ್ ಅಶ್ವಥ್ ಕೊರೊನಾದಿಂದಾಗಿ ಟ್ಯಾಕ್ಸಿ ಚಾಲನೆ ಮಾಡುವುದನ್ನ ಬಿಟ್ಟು ಕ್ಯಾಟರಿಂಗ್ ಮಾಡಿ ಜೀವನ ಮಾಡುತ್ತದಿದ್ದನ್ನ ನೋಡಿದ್ವಿ ಇದೀಗ ಮತ್ತೊಬ್ಬ ನಟ ಕೊರೊನಾದಿಂದಾಗಿ ನಟನೆಯನ್ನ ಬಿಟ್ಟು ಸೆಕ್ಯೂರಿಟಿ ಗಾರ್ಡ್ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಬೇರೆ ಯಾರು ಅಲ್ಲ ನಟ,ನಿರ್ದೇಶಕ ಶ್ರೀನಾಥ್ ವಸಿಷ್ಠ.
ಇಲ್ಲಿ ಶ್ರೀನಾಥ್ ವಸಿಷ್ಠ ಅವರು ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿರುವುದು ಹೊಟ್ಟೆ ಪಾಡಿಗಾಗಲ್ಲ ಬದಲಿಗೆ ಅನಿವಾರ್ಯ ಪರಿಸ್ಥಿತಿಯಿಂದಾಗಿ. ಸ್ವತಃ ಅವರೇ ಫೇಸ್ಬುಕ್ನಲ್ಲಿ ಫೋಟೋ ಪೋಸ್ಟ್ ಮಾಡಿದ್ದು, ನಾನು ಇರುವ ಅಪಾರ್ಟ್ಮೆಂಟ್ನ ಸೆಕ್ಯೂರಿಟಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಉಳಿದ ಮೂವರು ಕ್ವಾರಂಟೈನ್ ಆಗಿದ್ದಾರೆ. ಅಪಾರ್ಟ್ಮೆಂಟ್ ಕಮಿಟಿ ಇಲ್ಲಿನ 10 ದಿನಗಳ ಕಾಲ ಸೆಕ್ಯೂರಿಟಿ ಕಾಯಕ ಮಾಡಲು ಮನವಿ ಮಾಡಿಕೊಂಡಿತ್ತು.
ಇದರ ಪ್ರಕಾರ ನಾನು ಪ್ರತಿ ಮಧ್ಯಾಹ್ನ 2ರಿಂದ ರಾತ್ರಿ 10 ಗಂಟೆಯವರೆಗೆ ನಾನು ಗೇಟ್ನಲ್ಲಿ ಕುಳಿತು ಕೆಲಸ ಮಾಡುತ್ತಿದ್ದೇನೆ.ನಿನ್ನೆ ರಾತ್ರಿ ನನ್ನ ಮಗ ಋತ್ವಿಕ್ ವಸಿಷ್ಠ ರಾತ್ರಿಯಡೀ ಕೆಲಸ ಮಾಡಿದ್ದ ಈಗ ನಾನು ಮಾಡುತ್ತಿದ್ದೇನೆ.
ಇದೊಂದು ಹೊಸ ಅನುಭವ ಈ ಕೆಲಸ ಮಾಡಲು ತುಂಬ ಖುಷಿ ಅನಿಸುತ್ತದೆ. ಸರ್ವೇ ಜನಾಃ ಸುಖಿನೋ ಭವಂತು ಎಂದು ಬರೆದುಕೊಂಡಿದ್ದಾರೆ.
ಶ್ರೀನಾಥ್ ಅವರ ಈ ಕೆಲಸಕ್ಕೆ ಸೋಶಿಯಲ್ ಮೀಡಿಯಾದಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ನಟ ಎಂಬ ಅಹಂ ಇಲ್ಲದ ಶ್ರೀನಾಥ್ ಇತರರಿಗೂ ಮಾದರಿಯಾಗಿದ್ದಾರೆ.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್