Featured
ಬಿಸಿಲನಗರಿ ಬೀದರ್ನಲ್ಲಿ ಕೊರೊನಾ ಮರಣ ಮೃದಂಗ – ಒಂದೇ ದಿನ 9 ಬಲಿ..!

ರೈಸಿಂಗ್ ಕನ್ನಡ :
ಬೀದರ್ :
ಬಿಸಿಲನಗರಿ ಬೀದರ್ನಲ್ಲಿ ಕೊರೊನಾ ಮರಣ ಮೃದಂಗ ಮುಂದುವರೆದಿದೆ.ಭಾನುವಾರ ಜಿಲ್ಲೆಯಲ್ಲಿ ಒಂದೆ ದಿನ ಬರೋಬ್ಬರಿ 9 ಜನ ಕೊರೊನಾಗೆ ಬಲಿಯಾಗಿದ್ದಾರೆ.ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ, 37ಕ್ಕೆ ಏರಿಕೆಯಾದಂತಾಗಿದೆ.
ಕೊರೊನಾಗೆ ಮೊದಲ ಬಲಿಯಾಗಿದ್ದ ನಗರದ ಓಲ್ಡ್ ಸಿಟಿಯಲ್ಲೆ ಭಾನುವಾರ ಮತ್ತೆ ಮೂರು ಬಲಿಯಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಓಲ್ಡ್ ಸಿಟಿಯಲ್ಲಿ 70 ಹಾಗೂ 65 ವರ್ಷದ ವೃದ್ಧರು ಹಾಗೂ 54 ವರ್ಷದ ವ್ಯಕ್ತಿಗಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇತ್ತ ಬೀದರ್ ತಾಲೂಕಿನ ಅಮಲಾಪರ್ ಗ್ರಾಮದ 25 ವರ್ಷದ ಯುವತಿ ಬಲಿ ಯಾದರೆ,ತೆಲಂಗಾಣದ ಜಹೀರಾಬಾದ್ ಮೂಲದ 63 ವರ್ಷದ ವ್ಯಕ್ತಿ ಬ್ರೀಮ್ಸ್ ನಲ್ಲಿ ಸಾವನ್ನಪ್ಪಿದ್ದಾರೆ.

ಇನ್ನು ಕಲ್ಯಾಣ ಪಟ್ಟಣದ 60 ವರ್ಷದ ವೃದ್ಧೆ ಹಾಗೂ 32 ವರ್ಷದ ಯುವತಿ,ಭಾಲ್ಕಿ ಪಟ್ಟಣದ 54 ವರ್ಷದ ವ್ಯಕ್ತಿ ಹಾಗೂ ಚಿಟ್ಟಗುಪ್ಪ ಪಟ್ಟಣದ 45 ವರ್ಷದ ವ್ಯಕ್ತಿ ಕೊರೊನಾ ದಿಂದ ಮೃತಪಟ್ಟಿದ್ದಾರೆ. ಕಳೆದ ಎರಡು ದಿನದಲ್ಲೆ ಬೀದರ್ ಜಿಲ್ಲೆಯಲ್ಲಿ 15 ಜನ ಸಾವನ್ನಪ್ಪಿದ್ದು ದಿನದಿಂದ ದಿನಕ್ಕೆ ಬೀದರ್ ಜಿಲ್ಲೆಯ ಜನತೆಯಲ್ಲಿ ಆತಂಕ ಮನೆ ಮಾಡಿದೆ.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ
ಸಿಎಂ ಬೊಮ್ಮಾಯಿ ಸೇರಿ ಸಂಪುಟದ ಐವರಿಗೆ ಕೊರೋನಾ ಶಾಕ್..!