Featured
ಮಧುಮೇಹ ದೂರ ಮಾಡಲು ಸಪ್ತಸೂತ್ರ- ಪುರಾಣಿಕ ಚಿಕಿತ್ಸಾ ಕೇಂದ್ರದಿಂದ ಸಕ್ಕರೆ ಕಾಯಿಲೆಗೆ ಮನೆಮದ್ದು

ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಕಾಯಿಲೆ ಅನ್ನುವಂತಾಗಿದೆ. ಜಗತ್ತಿನಲ್ಲಿ ಸುಮಾರು 35 ಶೇಕಡಾ ಜನರು ಸಕ್ಕರೆ ಕಾಯಿಲೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಬದುಕುವ ರೀತಿ ಹಾಗೂ ದೇಹ ಸೇರುವ ಆಹಾರಗಳೇ ಮದುಮೇಹಕ್ಕೆ ಪ್ರಮುಖ ಕಾರಣ. ಕೆಲವರಿಗೆ ಅನುವಂಶೀಯವಾಗಿ ಸಕ್ಕರೆ ಕಾಯಿಲೆ ಬರುವುದುಂಟು. ಅದೇನೆ ಇರಲಿ ಮಧುಮೇಹ ಆರೋಗ್ಯವಂತರನ್ನು ಕೂಡ ಚಿಂತೆಗೀಡು ಮಾಡುತ್ತಿದೆ. ಮಧಮೇಹಿಗಳಿಗೆ(ಶುಗರ್ ಪೇಷೆಂಟ್) ಪುರಾಣಿಕ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್ ಶುಭ ಸುದ್ದಿ ನೀಡುತ್ತಿದೆ. ಮನೆಯಲ್ಲೇ ಸಿಗುವ ವಸ್ತುಗಳಿಂದ ಸಕ್ಕರೆ ಕಾಯಿಲೆಯನ್ನು ಹತೋಟಿಗೆ ತೆಗೆದುಕೊಳ್ಳಬಹುದು.
ಮಧುಮೇಹಿಗಳಿಗೆ ಸಪ್ತ ಸೂತ್ರ
- ಔಷಧಿ ಸೇವನೆ , ಪಥ್ಯ ಮತ್ತು ವ್ಯಾಯಾಮಾ ಮಧುಮೇಹಕ್ಕೆ ಮೊದಲ ಮನೆಮದ್ದು- ಇವು ಮೂರನ್ನು ತಪ್ಪದೆ ಮಾಡಿದ್ರೆ ಸಕ್ಕರೆ ಕಾಯಿಲೆ ಅರ್ಧ ಓಡಿ ಹೋದಂತೆಯೇ.
- ಒಂದು ಚಮಚ ಅರಿಷಿಣ ಪುಡಿ, ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಬೆಳಗ್ಗೆ ರಾತ್ರಿ ಖಾಲಿ ಹೊಟ್ಟಿಯಲ್ಲಿ ಬಿಸಿನೀರು ಬೆರೆಸಿ ಕುಡಿಯಬೇಕು
- ನೇರಳೆ ಬೀಜ ಮತ್ತು ನೆಲ್ಲಿಕಾಯಿಯನ್ನು ಸಮಭಾಗದಲ್ಲಿ ಪುಡಿಮಾಡಿಟ್ಟುಕೊಂಡು ಬೆಳಗ್ಗೆ ಹಾಗೂ ರಾತ್ರಿ ಒಂಚು ಚಮಚ ಬಿಸಿನೀರಿನಲ್ಲಿ ಸೇವಿಸಬೇಕು
- ಒಂದು ಚಿಟಿಕೆ ಅಮೃತ ಬಳ್ಳಿ ಸತ್ವ, 10 ಗ್ರಾಂನೇರಳೆ ಬೀಜದ ಪುಡಿ ಇವೆರಡನ್ನು ಪ್ರತಿದಿನ ಮೂರು ಚಮಚ ಬಿಲ್ವಪತ್ರೆ ರಸದಲ್ಲಿ ಬೆರೆಸಿ ಸೇವಿಸಿಬೇಕು
- ರಾತ್ರಿ ಹೊತ್ತು ಮೆಂತ್ಯೆ ನೆನೆಸಿ ಅದರ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು
- ಹೊಂಗೆಯ ಒಣಗಿದ ಹೂವು, ನೇರಳೆ ಬೀಜ ಮತ್ತು ಒಣಗಿದ ಹಾಗಲ ಕಾಯಿ ಸಮಪ್ರಮಾಣ ಮಾಡಿಕೊಂಡು ಪ್ರತಿದಿನ ರಾತ್ರಿ 5 ಗ್ರಾಂನಷ್ಟು ಬಿಸಿನೀರಲ್ಲಿ ಬೆರೆಸಿ ಕುಡಿಯಬೇಕು
ಪಥ್ಯಗಳು
ಪ್ರತಿನಿತ್ಯ ಆಹಾರದಲ್ಲಿ ಸೊಪ್ಪು ಹಾಗೂ ನಾರಿನಂಶವನ್ನು ಸೇವಿಸ ಅಧಿಕವಾಗಿ ಸೇವಿಸಬೇಕು. ಹುಳ್ಳಿಕಾಯಿ, ಗೋರಿಕಾಯಿ, ನೆಲ ಅವರೆಕಾಯಿಯನ್ನು ಪ್ರತಿದಿನದ ಆಹಾರದಲ್ಲಿ ಉಪಯೋಗಿಸಬೇಕು.
ಅಪಥ್ಯಗಳು
ಸಿಹಿಪದಾರ್ಥ ಸೇವನೆ ಬೇಡ. ಕಾಫಿ, ಟೀ, ಹಾಲು ಮತ್ತು ಕಷಾಯವನ್ನು ದಿನನಿತ್ಯದ ಸೇವನೆಯಿಂದ ದೂರವಿಡಿ. ಗೆಣಸು,ಸಿಹಿ ಕುಂಬಳಕಾಯಿ ಸೇವನೆ ಮಾಡಬಾರದು.
- ಇವೆಲ್ಲಕ್ಕೂ ಮೊದಲು ಸಕ್ಕರೆ ಕಾಯಿಲೆ ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ಇದೆ ಅನ್ನುವುದನ್ನ ವೈದ್ಯರಿಂದ ಪರಿಕ್ಷೆ ಮಾಡಿಸಿಕೊಳ್ಳಬೇಕು. ಸಂಬಂಧ ಪಟ್ಟ ಮಾಹಿತಿಯನ್ನು ವೈದ್ಯರಿಂದ ಪಡೆದು, ಔಷಧಿಗಳನ್ನು ತೆಗೆದುಕೊಳ್ಳಬೇಕು.
- ಸಕ್ಕರೆ ಕಾಯಿಲೆ ರಕ್ತದಲ್ಲಿ ಇದೆಯಾ ಅಥವಾ ಮೂತ್ರದಲ್ಲಿ ಇದೆಯಾ ಅನ್ನುವುದನ್ನ ಪರೀಕ್ಷೆ ಮಾಡಿಕೊಳ್ಳಬೇಕು. ಮಧುಮೇಹ ಯಾವ ಪ್ರಮಾಣದಲ್ಲಿದೆ ಅನ್ನುವುದನ್ನು ಡಾಕ್ಟರ್ ರಿಂದ ತಿಳಿದುಕೊಳ್ಳಬೇಕು. ಇವೆಲ್ಲಾ ಮುಗಿದ ಮೇಲೆ ವೈದ್ಯರ ಸಲಹೆ ಮೇರೆಗೆ ಯಾವ ಪ್ರಮಾಣದಲ್ಲಿ ಯಾವ ವಯಸ್ಸಿನವರು ಈ ಮನೆಮದ್ದು ಸೇವನೆ ಮಾಡಬೇಕು ಅನ್ನುವುದನ್ನು ವೈದ್ಯರು ಹೇಳುತ್ತಾರೆ.

You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?