Featured
ವಿದೇಶಕ್ಕೆ ಪಲಾಯನ: ವಿವಾದಿತ ಉದ್ಯಮಿ ವಿಜಯ್ ಮಲ್ಯ ಅರ್ಜಿ ವಜಾ

ನ್ಯೂಸ್ ಡೆಸ್ಕ್:
ರೈಸಿಂಗ್ ಕನ್ನಡ:
ನ್ಯಾಯಾಲಯದ ಆದೇಶ ದಿಕ್ಕರಿಸಿ ವಿದೇಶದಲ್ಲಿ ವಾಸಮಾಡುತ್ತಿರುವ ವಿವಾದಿತ ಉದ್ಯಮಿ ವಿಜಯ್ ಮಲ್ಯ ತಾವು ಸಲ್ಲಿಸಿದ್ದ ಮನವಿಯನ್ನ ಸುಪ್ರೀಮ್ ಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಲಲಿತ್ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ನ್ಯಾಯಪೀಠ ಪರಿಶೀಲನಾ ಅರ್ಜಿಗಳಿಗೆ ಯಾವ ಅರ್ಹತೆ ಇಲ್ಲ ಹಾಗಾಗಿ ವಜಾಗೊಳಿಸಲಾಗಿದೆ ಎಂದು ಹೇಳಿದೆ.
ಡಯಾಜಿಯೊದಿಂದ ಪಡೆದ 40 ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನ ತನ್ನ ಮಕ್ಕಳ ಖಾತೆಗೆ ವರ್ಗಾಯಿಸಿದಕ್ಕಾಗಿ ಮೂರು ವರ್ಷದ ಹಿಂದೆ ಸುಪ್ರೀಮ್ ಕೋರ್ಟ್ ತಪಿತಸ್ಥ ಎಂದು ಹೇಳಿತ್ತು. ಎಸ್ಬಿಐ ನೇತೃಥ್ವದ ಬ್ಯಾಂಕುಗಳ ಒಕ್ಕೂಟಕ್ಕೆ ಪಾವತಿಸದ ಸಾಲರೂಪದಲ್ಲಿ ಮಲ್ಯ 9 ಸಾವಿರ ಕೋಟಿ ರೂ.ವರ್ಗಾವಣೆಯಾದ ಬ್ಯಾಂಕುಗಳನ್ನು ಬಹಿರಂಗಪಡಿಸದ ಕಾರಣ ಎಸ್ಬಿಐ ಮಲ್ಯ ವಿರುದ್ಧ ಉಲ್ಲಂಘನೆ ಅರ್ಜಿ ಸಲ್ಲಿಸಿತ್ತು. ಈ ಮೊತ್ತವನ್ನ ಬ್ಯಾಂಕುಗಳಿಗೆ ಜಮಾ ಮಾಡದ ಕಾರಣ ನ್ಯಾಯಾಲಯ ತಪಿತಸ್ಥ ಎಂದು ಹೇಳಿತ್ತು.
ಕಳೆದ ಆಗಸ್ಟ್ 6 ರಂದು ಈ ಪ್ರಕರಣವನ್ನ ಕೈಗೆತ್ತಿಕೊಂಡಾಗ ಪ್ರಕರಣಕ್ಕೆ ಕೆಲವು ದಾಖಳೆಗಳು ಪತ್ತೆಯಾಗಿರಲಿಲ್ಲ. ಮೊನ್ನೆ 27ರಂದು ಪ್ರಕರಣ ವಿಚಾರಣೆಯನ್ನ ತೀರ್ಪನ್ನ ಕಾಯ್ದಿರಿಸಲಾಗಿತ್ತು.
2016ರಲ್ಲಿ ನೀಡಬೇಕಿದ್ದ 6,300 ಕೋಟಿ ರೂ. ಹಣವನ್ನ ವಸೂಲಿ ಮಾಡುವಂತೆ 14 ಬ್ಯಾಂಕುಗಳು ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಾಮಂಡಳಿಗೆ ತೆರೆಳಿದ್ದವು. ಮಲ್ಯ ಅವರ ಪಾಸ್ಪೋರ್ಟ್ ರದ್ದು ಮಾಡಿ ಬಂಧಿಸಬೇಕೆಂದು ಬ್ಯಾಂಕುಗಳು ಮನವಿ ಮಾಡಿದ್ದವು.
ಡಿಆರ್ಟಿಗೆ ಸೂಕ್ತ ನಿರ್ದೇಶನಗಳನ್ನ ಕೋರಿ ಸ್ಥಳಾಂತರಗೊಂಡ ಅರ್ಜಿಗಳನ್ನ ತ್ವರಿತವಾಗಿ ವಿಲೇವಾರಿ ಮಾಡಲು ಪ್ರೇರೆಪಿಸಿತು. ಆದರೆ ಹೈಕೋರ್ಟ್ ಅವರ ಮನವಿಯನ್ನ ಸ್ವೀಕರಿಸಲಿಲ್ಲ. ಬ್ಯಾಂಕುಗಳು ಸುಪ್ರೀಮ್ ಮೊರೆ ಹೋದವು.
ಇದರ ಮಧ್ಯೆ ಮಲ್ಯ ಲಂಡನ್ ಪಲಾಯನ ಮಾಡಿದ್ದರು. ನ್ಯಾಯಾಲಯದ ನಿಯಮಗಳನ್ನ ಉಲ್ಲಂಘನೆ ಮಾಡಿದಕ್ಕಾಗಿ ಮಲ್ಯಗೆ ಕೊಡಬೇಕಾದ ಶಿಕ್ಷೆಯ ಬಗೆಗಿನ ತೀರ್ಮಾನ ತೆಗೆದುಕೊಳ್ಳಲು 2017ರ ಅದೇಶದಲ್ಲಿ ಕೇಂದ್ರವನ್ನ ಕೋರಿತ್ತು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?