Featured
ಬಂಡಾಯದ ಬಾವುಟ ಹಾರಿಸಿದ ಸಚಿನ್ ಪೈಲೆಟ್ಗೆ ಉಚ್ಚಾಟನೆ ಶಿಕ್ಷೆ ? – ರಾಜಸ್ಥಾನ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ…!

ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಕೈ ನಾಯಕರು ಮನವೊಲಿಸಿದ ಹೊರತಾಗಿಯೂ ಪಕ್ಷದ ಶಾಸಕಾಂಗ ಸಭೆಗೆ ಗೈರಾದ ಡಿಸಿಎಂ ಸಚಿನ್ ಪೈಲೆಟ್ ಅವರನ್ನ ಉಪಮುಖ್ಯಮಂತ್ರಿ ಸ್ಥಾನ ಮತ್ತು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ.
ವಿಪ್ ಜಾರಿ ನಡುವೆಯೂ ಸಚಿನ್ ಪೈಲಟ್ ಮತ್ತು ಅವರ 30 ಬೆಂಬಲಿಗ ಶಾಸಕರು ಎರಡೂ ಬಾರಿಯೂ ಸಿಎಲ್ಪಿ ಸಭೆಗೆ ಹಾಜರಾಗದೇ ಸೆಡ್ಡು ಹೊಡೆದಿದ್ದರು. ಇದೀಗ ಪಕ್ಷದ ಸೂಚನೆಯನ್ನ ದಿಕ್ಕರಿಸಿದ ಸಚಿನ್ ಪೈಲೆಟ್ ಅವರನ್ನ ಪಕ್ಷದಿಂದಲೇ ಹೊರ ಹಾಕಬೇಕೆಂಬ ಕೂಗು ಪಕ್ಷದೊಳಗಿನಿಂದಲ್ಲೇ ಬಂದಿದೆ.
ಮಂಗಳವಾರ ನಡೆದ ಸಿಎಲ್ಪಿ ಸಭೆಗೆ 107 ಕೈ ಶಾಸಕರು ಮತ್ತು 15 ಪಕ್ಷೇತರ ಶಾಸಕರನ್ನ ಆಹ್ವಾನಿಸಲಾಗಿತ್ತು. ಇವರುಗಳ ಪೈಕಿ 106 ಶಾಸಕರು ಬಂದಿದ್ದರು. ಅಲ್ಲದೇ ಬಂದವರೆಲ್ಲರೂ ಸಚಿನ್ ಪೈಲೆಟ್ ವಿರುದ್ಧ ತಿರುಗಿಬಿದ್ದಿದ್ದು ಅವರನ್ನ ಪಕ್ಷದಿಂದಲೆ ಉಚ್ಚಾಟನೆ ಮಾಡಲು ಆಗ್ರಹಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?