Featured
ಸ್ವಲ್ಪ ತೆಂಗಿನಎಣ್ಣೆ ಬೆಚ್ಚಗಾಗಿಸಿ ಮೈಗೆ ಹಚ್ಚಿಕೊಂಡರೆ ಆರೋಗ್ಯಕ್ಕೆ ಒಳ್ಳೆಯದು

ರೈಸಿಂಗ್ ಕನ್ನಡ :- ಭಾರತದಲ್ಲಿ ತುಂಬಾ ಹಿಂದಿನಿಂದಲೂ ನಿತ್ಯದ ಬಳಕೆಯಲ್ಲಿ ಕೊಬ್ಬರಿಎಣ್ಣೆಯನ್ನು ಬಳಸುತ್ತಾರೆ. ವಾತಾವರಣ ತಣ್ಣಗಿದ್ದಾಗ ಇದು ಗಟ್ಟಿಯಾಗುತ್ತದೆ ಎಂದು ಒಂದು ಗುಣವನ್ನೇ ಹಿಡಿದು ಇದು ಅನಾರೋಗ್ಯಕರ ಎಣ್ಣೆ ಎಂದು ವಿದೇಶಿಗರು ಕೊಬ್ಬರಿಎಣ್ಣೆಯ ನಿಷೇಧಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಿದ್ದರು.ನಮ್ಮ ಹಿರಿಯರು ಕೊಬ್ಬರಿಎಣ್ಣೆಯನ್ನು ಸಾವಿರಾರು ವರ್ಷಗಳಿಂದಲೂ ಬಳಸುತ್ತಾ ಬಂದಿದ್ದಾರೆ. ಇದುವರೆಗೂ ಯಾವುದೇ ರೀತಿಯ ಅನುಮಾನಗಳು ಬಂದಿಲ್ಲ.
ಕೊಬ್ಬರಿಎಣ್ಣೆಯ ಪ್ರಯೋಜನಗಳು ನೋಡೋಣ :- ಕೊಬ್ಬರಿಎಣ್ಣೆ ನಮ್ಮ ತ್ವಚೆಯನ್ನು ಸೂರ್ಯನ ಅತಿನೇರಳೆ ಕಿರಣಗಳಿಂದ ರಕ್ಷಿಸುತ್ತದೆ. ತ್ವಚೆಗೆ ಕೊಬ್ಬರಿಎಣ್ನೆಯನ್ನು ಹಚ್ಚಿಕೊಂಡಾಗ ಸೂರ್ಯನ ಕಿರಣಗಳನ್ನು ಪ್ರತಿಫಲಿಸಿ ಇದರಿಂದ ಎದುರಾಗುವ ಹಾನಿಯನ್ನು ರಕ್ಷಿಸುತ್ತದೆ. ಅಷ್ಟೇ ಅಲ್ಲದೇ ಚರ್ಮದ ಸೆಳತವನ್ನು ಕುಗ್ಗಿಸಿ ನೆರಿಗೆ ಬೀಳಲು, ಬಿಸಿಲು ಬಿದ್ದ ಭಾಗದಲ್ಲಿ ಕಪ್ಪಗಾಗಲೂ ಕಾರಣವಾಗುತ್ತವೆ.

ಕೊಬ್ಬರಿಎಣ್ಣೆ ಉತ್ತಮ ಬ್ಯಾಕ್ಟಿರಿಯಾ ನಿವಾರಕವಾಗಿದೆ. ಅಂತ ಈ ಎಣ್ಣೆಯ ವಾತಾವರಣದಲ್ಲಿ ಕೆಲವಾರು ಬಗೆಯ ಬ್ಯಾಕ್ಟೀರಿಯಾಗಳು ಬದುಕಲಾರವು. ಬಾಯಿಯ ವಾಸನೆ, ದಂತಗಳ ಕೊಳೆಯುವಿಕೆಗೆ ಕಾರಣವಾಗುವ ಬ್ಯಾಕ್ಟೀರಿಯಾಗಳೂ ಕೊಬ್ಬರಿ ಎಣ್ಣೆಯ ವಾತಾವರಣದಲ್ಲಿ ಬದುಕಲು ಸಾಧ್ಯವಿಲ್ಲ.
ಕೊಬ್ಬರಿಎಣ್ಣೆಯನ್ನು ಒಗ್ಗರಣೆ ಅಥವಾ ಇನ್ನಾವುದೇ ರೂಪದಲ್ಲಿ ಸೇವಿಸಿದಾಗ ಇದರಲ್ಲಿರುವ ಎಂಸಿಟಿ ತೈಲವನ್ನು ನಮ್ಮ ಯಕೃತ್ ಕೀಟೋನ್ಸ್ಗಳನ್ನಾಗಿ ಪರಿವರ್ತಿಸುತ್ತದೆ. ಈ ಕೀಟೋನುಗಳು ನಮ್ಮ ಮೆದುಳಿಗೆ ಇಂಧನವಿದ್ದಂತೆ. ಮೆದುಳಿನ ಕ್ಷಮತೆ ಹೆಚ್ಚಿಸಲು ಅಥವಾ ಮೆದುಳಿನ ತೊಂದರೆಗಳನ್ನು ಸರಿಪಡಿಸಲು ಎಂಸಿಟಿ ತೈಲ ಹೆಚ್ಚು ಪ್ರಭಾವ ಶಾಲಿಯಾಗಿ ಕೆಲಸ ಮಾಡುತ್ತದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?