Featured
ಸರ್ಕಾರದಲ್ಲಿ ಸಿಎಂ ಪುತ್ರ ವಿಜಯೇಂದ್ರ ಹಸ್ತಕ್ಷೇಪ : ವಿವಾದಕ್ಕೆ ತೇಪೆ ಹಚ್ಚಿದ್ರಾ ಯಡಿಯೂರಪ್ಪ ಮಗ.?

ಬೆಂಗಳೂರು : ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಹಸ್ತಕ್ಷೇಪ ನಿಲ್ಲುಂತೆ ಕಾಣ್ತಿಲ್ಲ. ಇದಕ್ಕೆ ಸಾಕ್ಷಿಯಾಗಿದ್ದು ಇವತ್ತಿನ ವಿಜಯೇಂದ್ರ ಟ್ವೀಟ್.
ಯೆಸ್, ಇವತ್ತು ಬೆಂಗಳೂರಿನ ಸಂಜಯ್ ನಗರದ ಬಿಎಂಆರ್ಡಿ ಕಚೇರಿಯಲ್ಲಿ ಲಂಡನ್ ನಿಂದ ಆಗಮಿಸಿದ್ದ ಸಂಚಾರ ತಜ್ಞರೊಂದಿಗೆ ಬಿಪ್ಯಾಕ್ ಸಭೆ ನಡೆಸಿತ್ತು. ಬೆಂಗಳೂರಿನ ವಾಹನದಟ್ಟಣೆ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಈ ಸಭೆ ಇತ್ತು. ಇದರಲ್ಲಿ ವಿಶೇಷವಾಗಿ ಸಿಎಂ ಪುತ್ರ, ವಿಜಯೇಂದ್ರ ಭಾಗಿಯಾಗಿದ್ದು ಭಾರೀ ಟೀಕೆ ಹಾಗೂ ಚರ್ಚೆಗೆ ಕಾರಣವಾಯ್ತು.
ಟೀಕೆ, ಚರ್ಚೆ ಆಗ್ತಿದ್ದಂತೆ ಎಚ್ಚೆತ್ತ ವಿಜಯೇಂದ್ರೆ, ಬಿಪ್ಯಾಕ್ ಆಯೋಜಿಸಿದ್ದ
ಚರ್ಚೆ ಕಾರ್ಯಕ್ರಮದಲ್ಲಿ, ಮಿತ್ರರಾದ ಆರ್.ಕೆ.ಮಿಶ್ರಾ, ಯುನೈಟೆಡ್ ವೇ ಸಂಸ್ಥೆಯ ಪ್ರಶಾಂತ್ ಪ್ರಕಾಶ್
ಮೊದಲಾದವರೊಂದಿಗೆ ನಾನು ನಗರದ ಒಬ್ಬ ಸಾಮಾನ್ಯ ನಾಗರಿಕನಾಗಿ ಭಾಗವಹಿಸಿದ್ದೆ ಎಂದು ಟ್ವೀಟ್ ಮಾಡಿದ್ದಾರೆ. ಲಂಡನ್ ನಿಂದ ಆಗಮಿಸಿದ್ದ ಸಂಚಾರ ತಜ್ಞರೊಂದಿಗೆ, ಬೆಂಗಳೂರಿನ ವಾಹನದಟ್ಟಣೆ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಬಿಪ್ಯಾಕ್ ಆಯೋಜಿಸಿದ್ದ ಚರ್ಚೆ ಕಾರ್ಯಕ್ರಮದಲ್ಲಿ, ಮಿತ್ರರಾದ ಆರ್.ಕೆ.ಮಿಶ್ರಾ, ಯುನೈಟೆಡ್ ವೇ ಸಂಸ್ಥೆಯ ಪ್ರಶಾಂತ್ ಪ್ರಕಾಶ್ ಮೊದಲಾದವರೊಂದಿಗೆ ನಗರದ ಒಬ್ಬ ಸಾಮಾನ್ಯ ನಾಗರಿಕನಾಗಿ ಭಾಗವಹಿಸಿದ್ದೆ. (1/2)@BPACofficial pic.twitter.com/xX72a3EsD6— Vijayendra Yeddyurappa (@BYVijayendra) October 17, 2019
ಈ ಸಭೆಯಲ್ಲಿ ಡಿಸಿಎಂ ಅಶ್ವತ್ಥನಾರಾಯಣ್, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಹಲವಾರು ಉನ್ನತ ಅಧಿಕಾರಿಗಳು, ಪರಿಣತರು, ತಜ್ಞರು, ಸಕ್ರಿಯ ನಾಗರಿಕರು ಪಾಲ್ಗೊಂಡಿದ್ದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?